ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ರಾಮಚಂದ್ರಾಪುರ ಮಠದಿಂದ ಭಾರತೀಯ ತಳಿ ಹಸುಗಳ ರಕ್ಷಣೆ
ರಾಮಚಂದ್ರಾಪುರ
ಮಠದಿಂದ
ಭಾರತೀಯ
ತಳಿ
ಹಸುಗಳ
ರಕ್ಷಣೆ
ಜನವರಿ
13ರಿಂದ
ಅಮೃತಧಾರ
ಗೋಶಾಲೆ
ಪ್ರಾರಂಭ
ಭಾರತೀಯ ಹಸು ತಳಿಗಳ ಅಭಿವೃದ್ಧಿ ಕಾರ್ಯಕ್ರಮದ ಒಂದು ಭಾಗವಾಗಿ ಅಮೃತ ಧಾರ ಗೋಶಾಲೆಯನ್ನು ಬೆಂಗಳೂರು ಹೊರವಲಯದ ಕಗ್ಗಲೀಪುರದಲ್ಲಿ ರಾಘವೇಶ್ವರ ಭಾರತಿ ಸ್ವಾಮೀಜಿ ಆರಂಭಿಸುತ್ತಿದ್ದು , ಜನವರಿ 13ರಂದು ಗೋಶಾಲೆ ಪ್ರಾರಂಭವಾಗಲಿದೆ. 50 ಲಕ್ಷ ರುಪಾಯಿಗಳ ಯೋಜನೆಯ ಈ ಗೋಶಾಲೆ 65 ಜಾನುವಾರುಗಳಿಗೆ ಆಶ್ರಯ ನೀಡಲಿದೆ.
ದಾನಿಗಳೊಬ್ಬರು ಗೋಶಾಲೆಗಾಗಿ ಎರಡು ಎಕರೆ ಭೂಮಿಯನ್ನು ದತ್ತಿಯಾಗಿ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಇತರ ರಾಜ್ಯಗಳಲ್ಲೂ ಮಾದರಿ ಗೋಶಾಲೆಗಳನ್ನು ಸ್ಥಾಪಿಸುವ ಉದ್ದೇಶ ಶ್ರೀಮಠಕ್ಕಿರುವುದಾಗಿ ಮಠದ ಪ್ರಕಟಣೆ ತಿಳಿಸಿದೆ.
ಕೆಲವು ಭಾರತೀಯ ್ಫಹಸುಗಳ ಮೂತ್ರದಿಂದ ಕ್ಯಾನ್ಸರ್ ಗುಣವಾಗುವ ವಿಷಯ ಈಗಾಗಲೇ ಸ್ಪಷ್ಟವಾಗಿದೆ. ಗೋಮೂತ್ರದಿಂದ ವಿವಿಧ ಔಷಧಿಗಳನ್ನು ಅಭಿವೃದ್ಧಿಪಡಿಸುವ ಕುರಿತೂ ಸಂಶೋಧನೆಗಳನ್ನು ನಡೆಸಲಾಗುವುದು ಎಂದೂ ಪ್ರಕಟಣೆ ತಿಳಿಸಿದೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು
Comments
Story first published: Saturday, November 24, 2001, 5:30 [IST]