Get Updates
Get notified of breaking news, exclusive insights, and must-see stories!

ಕಥೆಗಾರ್ತಿ- ಕವಯತ್ರಿಯರ ಗಮನಕ್ಕೆ!

ಕಥೆಗಾರ್ತಿ- ಕವಯತ್ರಿಯರ ಗಮನಕ್ಕೆ!
ಕರ್ನಾಟಕ ಲೇಖಕಿಯರ ಸಂಘದಿಂದ ಮಹಿಳಾ ಬರಹಗಾರರಿಗೆ ದತ್ತಿನಿಧಿ ಸ್ಪರ್ಧೆ-2004

ಪ್ರತಿ ವರ್ಷದಂತೆ ಈ ಬಾರಿಯೂ (2004ನೇ ಇಸವಿ) ಕರ್ನಾಟಕ ಲೇಖಕಿಯರ ಸಂಘ ಲೇಖಕಿಯರಿಗಾಗಿ ವಿವಿಧ ದತ್ತಿನಿಧಿ ಸ್ಪರ್ಧೆ ಗಳನ್ನು ಏರ್ಪಡಿಸಿದೆ.

ಸ್ಪರ್ಧೆಗಳ ವಿವರ ಇಂತಿದೆ :

  1. ಸಾವಿತ್ರಮ್ಮ ದತ್ತಿನಿಧಿ ಸ್ಪರ್ಧೆ : 2002 ಮತ್ತು 2003ನೇ ಸಾಲಿನಲ್ಲಿ ಪ್ರಕಟವಾದ ಕಥಾ ಸಂಕಲನಗಳನ್ನು ಕಳುಹಿಸಬಹುದು. ಬಹುಮಾನದ ಮೊತ್ತ 7 ಸಾವಿರ ರುಪಾಯಿ. ಮೂರು ಕೃತಿಗಳನ್ನು ಕಳುಹಿಸಬೇಕು.
  2. ಗೀತಾ ದೇಸಾಯಿ ದತ್ತಿನಿಧಿ ಸ್ಪರ್ಧೆ : 2001, 02, 03ರಲ್ಲಿ ಪ್ರಕಟವಾದ ಕವನಸಂಕಲನಗಳನ್ನು ಕಳುಹಿಸಬಹುದು. ಬಹುಮಾನದ ಮೊತ್ತ 1 ಸಾವಿರ ರುಪಾಯಿ. ಮೂರು ಕೃತಿಗಳನ್ನು ಕಳುಹಿಸಬೇಕು.
  3. ಪ್ರೇಮಾಭಟ್‌ ದತ್ತಿನಿಧಿ ಕಥಾಸ್ಪರ್ಧೆ : ಈ ಸ್ಪರ್ಧೆ ಗ್ರಾಮಾಂತರ ಕಥೆಗಾರ್ತಿಯರಿಗಾಗಿ ನಡೆಯುತ್ತಿದೆ. 10 ಪುಟಗಳೊಳಗಿನ ಅಪ್ರಕಟಿತ ಕಥೆಯನ್ನು ಸ್ಪರ್ಧೆಗೆ ಕಳಿಸಬೇಕು.
  4. ಗುಡಿಬಂಡೆ ಪೂರ್ಣಿಮ ಕವನ ಸ್ಪರ್ಧೆ : 2003ನೇ ಇಸವಿಯಲ್ಲಿ ಯಾವುದಾದರೂ ಪತ್ರಿಕೆಯಲ್ಲಿ ಪ್ರಕಟವಾದ ಕವಿತೆಗಳನ್ನು ಸ್ಪರ್ಧೆಗೆ ಕಳಿಸಬೇಕು. ಕವಿತೆ ಪ್ರಕಟವಾದ ಪತ್ರಿಕೆಯ ಹೆಸರು ಹಾಗೂ ದಿನಾಂಕವನ್ನು ನಮೂದಿಸಬೇಕು.
ಬರಹಗಳನ್ನು ಕಳುಹಿಸಲು-
  • ಬರಹಗಳನ್ನು ಕಳುಹಿಸಲು ಪ್ರತ್ಯೇಕ ವಿಳಾಸಧಿಗಳಿವೆ. ಸೂಕ್ಷ್ಮವಾಗಿ ಗಮನಿಸಿ.
  • ಪ್ರೇಮಾಭಟ್‌ ದತ್ತಿನಿಧಿ ಕಥಾಸ್ಪರ್ಧೆ ಮತ್ತು ಗುಡಿಬಂಡೆ ಪೂರ್ಣಿಮ ಕವನ ಸ್ಪರ್ಧೆ ಗೆ ಕೊನೆಯ ದಿನಾಂಕ : ಫೆಬ್ರವರಿ 28, 2004. ಬರಹಗಳನ್ನು ಕಳುಹಿಸಲು ವಿಳಾಸ : ಅಧ್ಯಕ್ಷರು, ಕರ್ನಾಟಕ ಲೇಖಕಿಯರ ಸಂಘ, ನಂ.206, 2ನೇ ಮಹಡಿ, ವಿಜಯ ಮ್ಯಾನ್‌ಶನ್ಸ್‌ , 2 ನೇ ತಿರುವು, 2ನೇ ಮುಖ್ಯರಸ್ತೆ , ಚಾಮರಾಜಪೇಟೆ, ಬೆಂಗಳೂರು- 560 018.
  • ಸಾವಿತ್ರಮ್ಮ ದತ್ತಿ ಸ್ಪರ್ಧೆ ಹಾಗೂ ಗೀತಾ ದೇಸಾಯಿ ದತ್ತಿ ಸ್ಪರ್ಧೆಗೆ ಫೆಬ್ರವರಿ 15, 2004ರೊಳಗೆ ಕಳುಹಿಸಬೇಕು. ಬರಹಗಳನ್ನು ಕಳುಹಿಸಲು ವಿಳಾಸ- ಕರ್ನಾಟಕ ಲೇಖಕಿಯರ ಸಂಘ, ಸಮೃದ್ಧ , ಲಕ್ಷ್ಮೀ ರಸ್ತೆ , 7ನೇ ಅಡ್ಡರಸ್ತೆ , ಶಾಂತಿನಗರ, ಬೆಂಗಳೂರು.
(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+