ಬಳ್ಳಾರಿಯ ಪೊಲೀಸ್ ಪೋಸ್ಟ್ಕಾರ್ಡ್ !
ಬಳ್ಳಾರಿಯ ಪೊಲೀಸ್ ಪೋಸ್ಟ್ಕಾರ್ಡ್ !
ಪೊಲೀಸರು ಜನಮುಖಿಯಾಗುವ ಹಾದಿಯಲ್ಲಿ ನಿಂಬಾಳ್ಕರ್ ತಂತ್ರ ಒಂದು ಒಳ್ಳೆಯ ಮಾದರಿ. ಬಳ್ಳಾರಿಯಲ್ಲೀಗ ಪೊಲೀಸ್ ಪೋಸ್ಟ್ ಕಾರ್ಡ್ ಸಂಚಲನೆ ಹುಟ್ಟಿಸಿದೆ. ಅನೇಕ ಅಪರಾಧಗಳನ್ನು ಬಯಲಿಗೆಳೆಯಲು ಈ ಪೋಸ್ಟ್ ಕಾರ್ಡುಗಳೇ ನೆರವಿಗೆ ಬಂದಿರುವುದನ್ನು ಪೊಲೀಸರು ಒಪ್ಪಿಕೊಳ್ಳುತ್ತಾರೆ.
- ಶಂಕರ ಫಣೀಕರ್, ಧಾರವಾಡ
ಒಂದು ಕ್ಷಣ ಈ ಪೋಸ್ಟ್ಕಾರ್ಡ್ ತಂತ್ರ ಏನು ಅಂತ ನೆಂಟರ ಮನೆಗೆ ಬಂದಿದ್ದ ನನಗೆ ಗೊತ್ತಾಗಲಿಲ್ಲ. ಜನರನ್ನು ಮಾತಾಡಿಸಿದಾಗ ವಿಷಯ ವೇದ್ಯವಾಯಿತು. ಇಲ್ಲಿ ಪೊಲೀಸ್ ಸೂಪರಿಂಟೆಂಡೆಂಟ್ ಹೇಮಂತ್ ನಿಂಬಾಳ್ಕರ್ ಅವರಿಗೆ ನೇರವಾಗಿ ಕಾರ್ಡ್ ಬರೆಯುವ ವ್ಯವಸ್ಥೆ ಇದೆ. ಇದನ್ನು ಜಾರಿಗೆ ತಂದದ್ದು ಖುದ್ದು ನಿಂಬಾಳ್ಕರ್.ಈ ನಿಂಬಾಳ್ಕರ್ ಬಗ್ಗೆ ಕುತೂಹಲ ಹುಟ್ಟಿ, ಪೊಲೀಸ್ ಠಾಣೆಗೆ ಹೋದಾಗ, ಅಲ್ಲಿ ಅವರು ಪೋಸ್ಟ್ ಕಾರ್ಡುಗಳ ಸಮೇತ ಸಿಕ್ಕಿದರು.
ಏನಿದು ಸಾರ್, ಪೋಸ್ಟ್ ಕಾರ್ಡ್ ಮಹಿಮೆ?
ಅಚ್ಚರಿ ಬೆರೆತ ನನ್ನ ಪ್ರಶ್ನೆಗೆ ವಿವರಣಾತ್ಮಕ ಉತ್ತರ ಕೊಡುವ ವ್ಯವದಾನ ನಿಂಬಾಳ್ಕರ್ ಅವರಿಗಿರಲಿಲ್ಲ. ಯಾವುದೋ ಕಾರ್ಡಿನ ಬೆನ್ನುಹತ್ತಿ ಅವರು ಹೋಗುವುದಿತ್ತು. ದಯವಿಟ್ಟು ನಾಳೆ ಬರ್ತೀರಾ ಅಂತ ಎದ್ದು ಹೋದರು. ಮರುದಿನ ಹೋದರೆ, ಪೋಸ್ಟ್ಕಾರ್ಡಿನ ಮಾಹಿತಿಯ ಆಧಾರದ ಮೇಲೆ ಹೊಸಪೇಟೆಯಲ್ಲಿ ಜೂಜುಕೋರರನ್ನು ಹಿಡಿದು, ಒಂದು ಲಕ್ಷ ರುಪಾಯಿ ವಶಪಡಿಸಿಕೊಂಡಿದ್ದ ವಿಷಯ ಗೊತ್ತಾಯಿತು.
ನಿಂಬಾಳ್ಕರ್ ಜನಮುಖಿ ಅಧಿಕಾರಿ. ಜನರಿಗೆ ಪೊಲೀಸ್ ಠಾಣೆ ಮೆಟ್ಟಿಲು ಹತ್ತುವುದು ಮರ್ಯಾದೆಯ ಪ್ರಶ್ನೆಯಾಗಿರುತ್ತದೆ. ಇನ್ನು ಜನ ದಂಡಿದಂಡಿಯಾಗಿ ಬಂದರೆ ಅವರೆಲ್ಲರ ಅಹವಾಲಿಗೆ ಕಿವಿಗೊಡುವುದೂ ಕಷ್ಟ. ಫೋನು ಕರೆಗಳ ಜಾಡು ಹಿಡಿದು ಅಪರಾಧಿಗಳ ಹಿಡಿಯುವ ವಿಷಯದಲ್ಲಿ ಸಾಕಷ್ಟು ಬಾರಿ ಪೊಲೀಸರೇ ಚಳ್ಳೆ ಹಣ್ಣು ತಿಂದ ಉದಾಹರಣೆಗಳಿವೆ. ಅದಕ್ಕೇ ನಿಂಬಾಳ್ಕರ್ ಜನರಿಗೆ ಮೊದಲು ತಮ್ಮ ಮೊಬೈಲ್ ನಂಬರ್ ಕೊಟ್ಟರು. ಅದು ಅಷ್ಟಾಗಿ ಕ್ಲಿಕ್ಕಾಗಲಿಲ್ಲ. ಆಮೇಲೆ ಒಂದಷ್ಟು ಜನರಿಗೆ ತಮ್ಮ ವಿಳಾಸ ಬರೆದ ಪೋಸ್ಟ್ ಕಾರ್ಡುಗಳನ್ನು ಹಂಚಿ, ನಿಮ್ಮ ದೂರುಗಳೇನಿದ್ದರೂ ಇವುಗಳಲ್ಲಿ ಬರೆದು ಕಳಿಸಿ ಎಂದರು. ವಿಳಾಸ ಪ್ರಚಾರವಾಯಿತು. ಅನೇಕ ಪೋಸ್ಟ್ ಕಾರ್ಡುಗಳು ಠಾಣೆಗೆ ಬರತೊಡಗಿದವು. ಅಪರಾಧಿಗಳ ಜಾಡು ಹಿಡಿದು ಹೊರಡುವ ಕೆಲಸ ಕೂಡ ಸುಲಭವಾಯಿತು.
ನಿಂಬಾಳ್ಕರ್ ಹೇಳುತ್ತಾರೆ- ಎಂತೆಂಥ ಕಾರ್ಡ್ಗಳನ್ನ ಬರೀತಾರ್ರೀ... ಮನೆಯವರು ಮದುವೆಗೆ ಒಪ್ಪಿಲ್ಲ , ಬಂದು ನೀವೇ ಮಾಡಿಸಿ ಅಂತಾರೆ. ನಾನು ಐಪಿಎಸ್ ಓದಬೇಕು, ಪಾಠ ಮಾಡಿ ಅಂತ ಕೇಳ್ತಾರೆ. ನಾನು ತುಂಬಾ ಪ್ರೀತಿಸುತ್ತಿರುವ ಹುಡುಗಿ ನಿಮಗೆ ಕಾರ್ಡ್ ಬರೀತೀನಿ ಅಂತ ಹೆದರಿಸುತ್ತಿದ್ದಾಳೆ, ನೀವು ಅವಳ ಪತ್ರವನ್ನು ಗಂಭೀರವಾಗಿ ತೆಗೆದುಕೊಳ್ಳಬೇಡಿ ಅಂತ ಒಬ್ಬ ಹುಚ್ಚು ಹುಡುಗ ಮೊನ್ನೆ ಬರೆದಿದ್ದ. ಈಗ ನನ್ನ ಅಸಿಸ್ಟೆಂಟ್ ಬರುವ ಪತ್ರಗಳನ್ನೆಲ್ಲ ಓದಿ, ನಮ್ಮ ಕೆಲಸಕ್ಕೆ ಬರುವಂಥವನ್ನು ಮಾತ್ರ ನನ್ನ ಗಮನಕ್ಕೆ ತರುತ್ತಾರೆ. ಜನರಿಗೆ ನಾವು ಹತ್ತಿರವಾಗಿರಬೇಕು. ಬಂದಿರುವ ಅನೇಕ ಪೋಸ್ಟ್ ಕಾರ್ಡುಗಳಿಂದ ನಮಗೆ ಹಲವಾರು ಅಪರಾಧಗಳನ್ನು ಪತ್ತೆ ಮಾಡುವುದು ಸಾಧ್ಯವಾಗಿದೆ.
ಸುಖಾಸುಮ್ಮನೆ ನಿಮಗೆ ನೀರು ಕುಡಿಸಲು ಪತ್ರ ಬರೆದರೆ?
ಮೊದಮೊದಲು ಹಾಗೆ ನಡೆಯುತ್ತಿತ್ತು. ಆದರೀಗ ಇಲ್ಲಿನ ಕೆಲಸ ಹಾಗೂ ಪೊಲೀಸರ ಬಗ್ಗೆ ಜನರಲ್ಲಿ ಸ್ವಾಭಾವಿಕವಾಗಿಯೇ ಒಂದು ರೀತಿಯ ಭಯ ಇದೆ. ಪೋಸ್ಟ್ ಕಾರ್ಡ್ ಸೌಲಭ್ಯದ ಗಂಭೀರತೆ ಅರ್ಥವಾಗಿದೆ. ದಿನಕ್ಕೆ ಕನಿಷ್ಠ 10 ಪೋಸ್ಟ್ ಕಾರ್ಡ್ಗಳು ಬರುತ್ತವೆ. ಕಾರ್ಡಲ್ಲಿ ಕೆಲವರು ಹೆಸರನ್ನೇ ಬರೆಯುವುದಿಲ್ಲ. ನಮಗೆ ಅದರ ಅಗತ್ಯವೂ ಇಲ್ಲ. ಆದರೆ ಹೀಗೆ ಬರುವ ಅನಾಮಧೇಯ ಪತ್ರಗಳು ಸಹ ಒಳ್ಳೊಳ್ಳೆಯ ಮಾಹಿತಿ ತಲುಪಿಸಿವೆ ಎನ್ನುತ್ತಾರೆ ನಿಂಬಾಳ್ಕರ್.
ಒಟ್ಟಿನಲ್ಲಿ ಬಳ್ಳಾರಿ ಜಿಲ್ಲೆಯಲ್ಲಿ ಈ ಪೊಲೀಸ್- ಪೋಸ್ಟ್ ಕಾರ್ಡ್ ಸಂಬಂಧ ಸಾಕಷ್ಟು ಸದ್ದು ಮಾಡುತ್ತಿದೆ. ಸಾಮಾಜ ಘಾತುಕ ಶಕ್ತಿಗಳಿಗೆ ಈಗ ಯಾವಾಗ ಪೊಲೀಸರು ಧುತ್ತೆಂದು ಎರಗುತ್ತಾರೋ ಎಂಬ ಆತಂಕ. ಕಾಲೇಜುಗಳಲ್ಲಿನ ತಂಟೆ, ಫುಟ್ಪಾತುಗಳದುಡ್ಡಿನಾಟ- ಇಂಥ ಸಣ್ಣದಾಗಿ ಕಾಣುವ ಬಲು ಸ್ವರೂಪದ ಅಪರಾಧಗಳಿಗೆ ಈಗ ಸಹಜ ನಿಯಂತ್ರಣ. ಪೋಸ್ಟ್ ಕಾರ್ಡ್ ಮೂಲಕ ಜನಮುಖಿಯಾಗುವ ನಿಂಬಾಳ್ಕರ್ ಅವರ ಇಂಥಾ ತಂತ್ರವನ್ನು ಇನ್ನಷ್ಟು ಪೊಲೀಸರು ಅಳವಡಿಸಿಕೊಳ್ಳಬಹುದಲ್ಲವೇ?
ಮುಖಪುಟ / ವಾಟ್ಸ್ ಹಾಟ್
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications