‘ಸೋನಿಯಾ, ಕೃಷ್ಣ ಕೂಡ ಛಾಪಾ ಕಾಗದ ಹಗರಣದ ಪಾಪಿಗಳು’
ಣ್ಣ ಕೈಗಾರಿಕೆ ಸಚಿವ ರೋಷನ್ ಬೇಗ್ ಅಲ್ಲದೆ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ, ಕರ್ನಾಟಕದ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ಗುಲಾಂ ನಬಿ ಆಜಾದ್ ಬಹುಕೋಟಿ ಛಾಪಾ ಕಾಗದ ಹಗರಣದಲ್ಲಿ ಭಾಗಿಗಳಾಗಿದ್ದಾರೆ.
ಈ ಹಗರಣದಲ್ಲಿ ಕೇವಲ ಕಾಂಗ್ರೆಸ್ಸಿಗರು ಭಾಗಿಗಳಾಗಿದ್ದಾರೆಯೇ ವಿನಃ ಇತರೆ ಪಕ್ಷದವರಾರೂ ಇಲ್ಲ.
ಛಾಪಾ ಕಾಗದ ವಂಚಕ ಕರೀಂ ಲಾಲ ಜೊತೆಯಲ್ಲಿ ಆಗಿನ ಬೆಂಗಳೂರು ಉಪ ಆಯುಕ್ತ ಬಿ.ಎನ್.ನಾಗರಾಜ್ ಮತ್ತು ಇನ್ಸ್ಪೆಕ್ಟರ್ ಸೌದಾಗರ್ ಕೂಡ ಹಗರಣದಲ್ಲಿ ಭಾಗಿಯಾಗಿದ್ದಾರೆ.
ಮಡಿಯಾಳ್ ಮತ್ತು ಶ್ರೀಕುಮಾರ್ ಅವರಂಥ ಪೊಲೀಸ್ ಅಧಿಕಾರಿಗಳು ರಾಜಕೀಯ ಒತ್ತಡದಿಂದ ಸತ್ಯ ಗೊತ್ತಿದ್ದರೂ ಸುಮ್ಮನಿದ್ದಾರೆ.
ಆಗಿನ ಬೆಂಗಳೂರು ಪೊಲೀಸ್ ಆಯುಕ್ತ ಎಚ್.ಟಿ. ಸಾಂಗ್ಲಿಯಾನ ಅವರ ಮುಂದೆ ಕರೀಂ ಲಾಲ ತಪ್ಪೊಪ್ಪಿಕೊಂಡಿರುವುದು ಕ್ಯಾಸೆಟ್ನಲ್ಲಿ ಮುದ್ರಿತವಾಗಿದೆ. ಅದನ್ನು ಬಹಿರಂಗಪಡಿಸಿದರೆ, ಅನೇಕ ಮಂತ್ರಿಮಹೋದಯರ ಹೆಸರು ಬಯಲಾಗುತ್ತದೆ.
ನಿಜವಾದ ಕ್ಯಾಸೆಟ್ಟನ್ನು ಮುಚ್ಚಿಟ್ಟು, ಬೇರೆಯದೇ ಕ್ಯಾಸೆಟ್ಟನ್ನು ಮುಂಬಯಿ ಪೊಲೀಸರಿಗೆ ರಾಜ್ಯ ಸರ್ಕಾರ ಕೊಟ್ಟಿದೆ. ಹೀಗೆ ಕೊಟ್ಟಿರುವ ಕ್ಯಾಸೆಟ್ಟಲ್ಲಿ ಕರ್ನಾಟಕದ ಯಾವುದೇ ಪೊಲೀಸರ ಹೆಸರಾಗಲೀ ರಾಜಕಾರಣಿಗಳ ಹೆಸರಾಗಲೀ ಇಲ್ಲ.
ಲಾಲ ಇಂಥ ಕಡೆ ಇದ್ದಾನೆ ಅಂತ ಖುದ್ದು ಮಡಿಯಾಳ್ ಅವರಿಗೆ ಬಹಳ ಹಿಂದೆಯೇ ಸೂಚಿಸಿದ್ದೆ. ಆದರೆ ಅವರು ಏನೇನೂ ಕ್ರಮ ಕೈಗೊಳ್ಳಲಿಲ್ಲ.
ನನಗೆ ಸಿಕ್ಕಿರುವ ಸುಳಿವಿನ ಪ್ರಕಾರ ಕೊಯಮತ್ತೂರು ಮತ್ತಿತರ ಕಡೆಗಳಲ್ಲಿ ನಡೆದ ಸರಣಿ ಬಾಂಬ್ ಸ್ಫೋಟಗಳಿಗೆ ಕರೀಂ ಲಾಲ ಹಣ ಸಹಾಯ ಮಾಡಿದ್ದಾನೆ.
- ಕರೀಂ ಲಾಲ ಬಗ್ಗೆ ಮೊದಲು ದೂರುಕೊಟ್ಟ ಖಾನಾಪುರದ ವ್ಯಾಪಾರಿ ಜಯಂತ್ ಎಂ. ತಿನೈಕರ್ ಈ ಸಂಗತಿಗಳನ್ನು ಯಾವುದೇ ಆತಂಕವಿಲ್ಲದೆ ಹೇಳುವುದು ಹೀಗೆ. ಪಕ್ಕದಲ್ಲಿ ಸದಾ ಒಬ್ಬ ಬಂದೂಕುಧಾರಿಯ ರಕ್ಷಣೆಯಲ್ಲೇ ಜೀವಿಸುತ್ತಿರುವ ತಿನೈಕರ್ಗೆ ಲಾಲ ಕದಲಿಕೆಗಳು ಕರಗತ. ಸಿಬಿಐ ತನಿಖೆಗೆ ರಾಜ್ಯ ಸರ್ಕಾರ ಒಪ್ಪಿದರೆ, ಅನೇಕ ಘಟಾನುಘಟಿಗಳು ಬೀದಿಗೆ ಬರುವುದು ಗ್ಯಾರಂಟಿ ಅನ್ನುವ ತಿನೈಕರ್ ಹೇಳಿಕೆಗಳು ವಿಶೇಷ ನ್ಯಾಯಾಲಯದಲ್ಲಿ ಮಹತ್ವದ್ದಾಗಲಿವೆ.
(ಏಜೆನ್ಸೀಸ್)
-
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ -
Jobs: ಹೈಕೋರ್ಟ್ನಲ್ಲಿ ಕೆಲಸ ಬೇಕೆ? 70 ಅಸಿಸ್ಟೆಂಟ್ ಕೋರ್ಟ್ ಸೆಕ್ರೆಟರಿ ಹುದ್ದೆಗಳಿಗೆ ಅರ್ಜಿ ಆಹ್ವಾನ, ಇಂದೇ ಅರ್ಜಿ ಸಲ್ಲಿಸಿ -
ಏರ್ ಕೂಲರ್ vs ಏರ್ ಕಂಡಿಷನರ್: ಬೇಸಿಗೆಯಲ್ಲಿ ನಿಮ್ಮ ಸರಿಯಾದ ಆಯ್ಕೆ ಯಾವುದು? -
ಇಂಧನ ಪೂರೈಕೆ ಕೊರತೆ ಭೀತಿ: 2026ರಲ್ಲಿ ನೀವು ಖರೀದಿಸಬಹುದಾದ ಟಾಪ್ ಎಲೆಕ್ಟ್ರಿಕ್ ಸ್ಕೂಟರ್ ಗಳು ಇಲ್ಲಿವೆ -
Water4Life: ಅತ್ಯಮೂಲ್ಯ ಜಲಮೂಲಗಳ ಸಂರಕ್ಷಣೆಗೆ ರಿಲಯನ್ಸ್ ಫೌಂಡೇಷನ್ನಿಂದ ಜನ ಚಳವಳಿ, ಡಿಟೇಲ್ಸ್ ಇಲ್ಲಿದೆ -
Bengaluru Rent: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಬಾಡಿಗೆ ಮನೆಗಳು ಸಿಗುವ 6 ಪ್ರಮುಖ ಪ್ರದೇಶಗಳು -
ನೌಕರಿ ಬಿಟ್ಟು ಸ್ವಂತ ಉದ್ಯಮ: ಹುಣಸೆ ಸಿಹಿತಿಂಡಿಗೆ ಪೇಟೆಂಟ್ ಪಡೆದ ಬೈಲಹೊಂಗಲದ ಟೆಕ್ಕಿ; 17 ದೇಶಗಳಿಗೆ ರಫ್ತು -
Property: ಕಟ್ಟಡ ಮಾಲೀಕರಿಗೆ ಬಂಪರ್ ಆಫರ್: ಶೇ.15ರವರೆಗಿನ ನಿಯಮ ಉಲ್ಲಂಘನೆ ಸಕ್ರಮಕ್ಕೆ ಜಿಬಿಎ ಅವಕಾಶ! -
Karnataka Rain: ಕರ್ನಾಟಕದಲ್ಲಿ ಮಳೆ ಕೊರತೆ ಈ ಬಾರಿ ಈ ಭಾಗಗಳಲ್ಲಿ ಸಂಕಷ್ಟ, ಕುಡಿಯುವ ನೀರಿಗೂ ಹಾಹಾಕಾರ -
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು?












Click it and Unblock the Notifications