ಚಿತ್ರಕಲಾಪರಿಷತ್‌ನಲ್ಲಿ ತೇಜಸ್ವಿ ಪಕ್ಷಿ ಫೋಟೋಕಾವ್ಯ ಪ್ರದರ್ಶನ

ಚಿತ್ರಕಲಾಪರಿಷತ್‌ನಲ್ಲಿ ತೇಜಸ್ವಿ ಪಕ್ಷಿ ಫೋಟೋಕಾವ್ಯ ಪ್ರದರ್ಶನ
ನಾಲ್ಕು ವರ್ಷಗಳ ಕಾಲ ತೇಜಸ್ವಿ ತೆಗೆದಿರುವ ಹಕ್ಕಿ ಚಿತ್ರಗಳು ನೋಡುಗರಿಗೆ

Bird Photography Exhibition by Poornachandra Tejasviಬೆಂಗಳೂರು : ಚಿತ್ರಕಲಾ ಪರಿಷತ್‌ನಲ್ಲಿ ನವೆಂಬರ್‌ 23 ರಿಂದ 26ರವರೆಗೆ ಕಥೆಗಾರ ಪೂರ್ಣಚಂದ್ರ ತೇಜಸ್ವಿಯವರ ಕೆಮೆರಾ ಕಣ್ಣು ಸೆರೆ ಹಿಡಿದಿರುವ ಪಕ್ಷಿಗಳ ಲೋಕದ ಪ್ರದರ್ಶನ ಏರ್ಪಾಟಾಗಿದೆ.

ಮೂಡಿಗೆರೆಯ ಗ್ರಾಮೀಣ ಪರಿಸರದಲ್ಲಿ ಅಕ್ಷರ ಕೃಷಿಯ ಜೊತೆಜೊತೆಗೇ ಹಕ್ಕಿಗಳ ಕದಲಿಕೆಗಳಿಗೆ ಸಾಕ್ಷಿಯಾಗಿರುವ ಪೂರ್ಣಚಂದ್ರ ತೇಜಸ್ವಿ, ಸೊಗಸಾದ ಚಿತ್ರಗಳನ್ನು ಕೆಮೆರಾದಲ್ಲಿ ತುಂಬಿಸಿಕೊಂಡಿದ್ದಾರೆ. ಈ ಹಿಂದೆ ಅವರು ತೆಗೆದ ಹಕ್ಕಿ ಚಿತ್ರಗಳಿರುವ ಶುಭಾಶಯ ಪತ್ರ ಸಾಕಷ್ಟು ಜನಪ್ರಿಯವಾಗಿತ್ತು. ಈಗ ಅವರ ಕೆಮೆರಾ ಕಲೆಯನ್ನು ಇಡಿಯಾಗಿ ನೋಡುವ ಅವಕಾಶ ಸಹೃದಯರದ್ದು.

ಮೂಡಿಗೆರೆಯ ಸಸ್ಯಕಾಶಿಯ ನಡುವೆ ನಾಲ್ಕೈದು ವರ್ಷಗಳಿಂದ ತೇಜಸ್ವಿ ಸೆರೆಹಿಡಿದಿರುವ ಪಕ್ಷಿ ಫೋಟೋ ಕಾವ್ಯ ನೋಡುಗರಿಗೆ ಲಭ್ಯ. ಸಾಹಿತಿ ತೇಜಸ್ವಿಯವರ ಪ್ರತಿಭೆಯ ಇನ್ನೊಂದು ಮಗ್ಗುಲನ್ನು ನೀವೂ ನೋಡಿ ಬನ್ನಿ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+