‘ಐಟಿ ಅಣ್ಣಂದಿರಾ,ರಕ್ಷಣೆ-ಆರೋಗ್ಯಕ್ಷೇತ್ರದತ್ತಲೂ ಗಮನ ಕೊಡಿ’
‘ಐಟಿ
ಅಣ್ಣಂದಿರಾ,ರಕ್ಷಣೆ-ಆರೋಗ್ಯಕ್ಷೇತ್ರದತ್ತಲೂ
ಗಮನ
ಕೊಡಿ’
ಕರ್ನಾಟಕ
ದೇಶದ
ನಂ.1
ಐಟಿ
ರಾಜ್ಯ-
ಕೇಂದ್ರ
ಸಚಿವರ
ಶ್ಲಾಘನೆ
ಬೆಂಗಳೂರು ಐಟಿ ಮೇಳದ ನಾಲ್ಕನೇ ದಿನವಾದ ಮಂಗಳವಾರ, ಇ- ಆಡಳಿತ ಸಮಾವೇಶದಲ್ಲಿ ಮಾತನಾಡಿದ ಕೇಂದ್ರದ ಮಾಹಿತಿ ತಂತ್ರಜ್ಞಾನ ಮತ್ತು ಸಂವಹನ ಇಲಾಖೆಯ ರಾಜ್ಯ ಸಚಿವ ಎಸ್. ತಿರುನವುಕ್ಕರಸರ್ ಐಟಿ ಕಂಪೆನಿಗಳು ಮೌಲ್ಯ ಆಧಾರಿತ ಸೇವೆಯನ್ನು ಒದಗಿಸಬೇಕು ಎಂದರು.
ಸಿಸ್ಟಂ ಇಂಟಿಗ್ರೇಶನ್ , ಪ್ಯಾಕೇಜ್ ಇಂಪ್ಲಿಮೆಂಟೇಶ ನ್ ಮತ್ತು ಐಟಿಔಟ್ ಸೋರ್ಸಿಂಗ್ನಂತಹ ಕೆಲಸಗಳತ್ತ ಐಟಿ ಗಮನ ಹರಿಸಬೇಕು. ಇಷ್ಟರವರೆಗೆ ಸಾಫ್ಟ್ವೇರ್ ವ್ಯವಹಾರಗಳು ಆರ್ಥಿಕ ವಲಯ, ಟೆಲಿಕಾಂ ಮತ್ತು ಉತ್ಪನ್ನ ವಲಯದಲ್ಲಿ ಮಾತ್ರ ಇದ್ದವು. ಆದರೆ ಈಗ ಬಿಪಿಒ ( business process outsourcing) ಕಂಪೆನಿಗಳು ಐಟಿಗೆ ಹೊಸ ಆಯಾಮವನ್ನು ನೀಡಲಿವೆ ಎಂದು ಸಚಿವರು ಅಭಿಪ್ರಾಯಪಟ್ಟರು.
ದೇಶದಲ್ಲಿ ಪ್ರತಿ ವಾರ ಸರಾಸರಿ ಹತ್ತು ಐಟಿ ಕಂಪೆನಿಗಳು ಹುಟ್ಟಿಕೊಂಡರೆ ಅವುಗಳಲ್ಲಿ ಐದು ಕಂಪೆನಿಗಳು ಬೆಂಗಳೂರನ್ನೇ ಆರಿಸಿಕೊಳ್ಳುತ್ತವೆ ಎಂದ ಸಚಿವರು, ಕರ್ನಾಟಕವು ದೇಶದ ನಂ. 1 ಐಟಿ ರಾಜ್ಯವಾಗಿದೆ ಎಂದು ಶ್ಲಾಘಿಸಿದರು
(ಪಿಟಿಐ)
ಮುಖಪುಟ / ಐಟಿ - ಬಿಟಿ