ಶಾಸಕರ ಭವನದಿ ಬಾಂಬು ಬಾಂಬು ಬಾಂಬು; ಬೆಚ್ಚಿದ ನೌಕರರು
ಶಾಸಕರ ಭವನದಿ ಬಾಂಬು ಬಾಂಬು ಬಾಂಬು; ಬೆಚ್ಚಿದ ನೌಕರರು
ವಿಧಾನಸೌಧದ ನೌಕರರಲ್ಲಿ ಭಾರೀ ಭೀತಿ
ಯಾರೋ ಭ್ರಷ್ಟಾಚಾರ ವಿರೋಧಿ ಶಾಸಕರ ಭವನದಲ್ಲಿ ಇರಿಸಿದ್ದ ಮೂರು ಬಾಂಬ್ಗಳು ಕಳೆದೆರಡು ದಿನಗಳಲ್ಲಿ ಪೊಲೀಸರ ಕೈಗೆ ಸಿಕ್ಕಿರುವುದೇ ಈ ಭಯಕ್ಕೆ ಕಾರಣ. ತಾನು ಐಎಸ್ಐ ಉಗ್ರವಾದಿಯಲ್ಲ, ಭಯೋತ್ಪಾದಕನಲ್ಲ ; ಇದು ಭ್ರಷ್ಟಾಚಾರಿಗಳನ್ನು ಮಟ್ಟ ಹಾಕುವ ಹೆಜ್ಜೆ ಎಂದು ಹೇಳಿಕೊಂಡು ಇಂಗ್ಲಿಷ್ನಲ್ಲಿ ಬಾಂಬ್ ಇರಿಸಿದವ ಪತ್ರಗಳನ್ನೂ ಬರೆದಿದ್ದಾನೆ. ಪತ್ರದ ಕೆಳಗಡೆ ಆಜಾದ್ ಎಂಬ ಹೆಸರಿದೆ.
ರಾಜ್ಯೋತ್ಸವದ ದಿನ ಶಾಸಕರ ಭವನದ ಶೌಚಾಲಯದಲ್ಲಿ ಎರಡು ಟೈಂ ಬಾಂಬ್ಗಳು ಪತ್ತೆಯಾಗಿದ್ದವು. ಅದಾದ ನಂತರ ಪೊಲೀಸರ ಬೆಂಗಾವಲು ಅಲ್ಲಿ ಜಮೆಯಾಯಿತು. ಪದೇಪದೇ ಬಾಂಬ್ ತಪಾಸಣೆಯನ್ನೂ ನಡೆಸಲಾಯಿತು. ಭಾನುವಾರ (ನ. 02) ಒಂದು ಸುತ್ತಿನ ತಪಾಸಣೆಯಲ್ಲಿ ಬಾಂಬ್ ಎಲ್ಲೂ ಇರಲಿಲ್ಲ. ಆದರೆ, ಸ್ವಲ್ಪ ಸಮಯದ ನಂತರ ನಾಲ್ಕನೇ ಮಹಡಿ ಮೆಟ್ಟಿಲಿನ ಜಂಕ್ಷನ್ ಭಾಗದಲ್ಲಿ ಮತ್ತೊಂದು ಬಾಂಬ್ ಪತ್ತೆಯಾಯಿತು. ನಗರ ಪೊಲೀಸ್ ಆಯುಕ್ತ ಎಸ್.ಮರಿಸ್ವಾಮಿ ಹಾಗೂ ಹೆಚ್ಚುವರಿ ಪೊಲೀಸ್ ಆಯುಕ್ತ ಸಿ.ಚಂದ್ರಶೇಖರ್ಗೆ ಈ ಬಾಂಬ್ ಕಣ್ಣಾಮುಚ್ಚಾಲೆಯಾಟ ತಲೆನೋವಾಗಿದೆ.
ನಗರದ ವಿವಿಧ ಪೊಲೀಸ್ ಠಾಣೆಗಳ ಸುಮಾರು 100 ಪೊಲೀಸರು ಶಾಸಕರ ಭವನದಲ್ಲಿ ಇನ್ನಷ್ಟು ಬಾಂಬ್ಗಳಿರುವ ಶಂಕೆಯಲ್ಲಿ ಈಗಲೂ ತಪಾಸಣೆಯಲ್ಲಿ ನಿರತರಾಗಿದ್ದಾರೆ. ಶಾಸಕರ ಭವನಕ್ಕೆ ಈಗ ಯಾರು ಕಾಲಿಟ್ಟರೂ ಭಾರೀ ತಪಾಸಣೆ. ಈ ಕಟ್ಟಡದಲ್ಲಿ ಶುಚಿ ಮಾಡದ ಅನೇಕ ಜಾಗೆಗಳಿರುವುದೇ ಬಾಂಬನ್ನು ಸುಲಭವಾಗಿ ಇಡಲು ಸಾಧ್ಯವಾಗುತ್ತಿದೆ ಎಂಬುದು ಪೊಲೀಸರ ಅಂಬೋಣ. ನೂರಾರು ಪೊಲೀಸರ ಗಸ್ತನ್ನೂ ಬೇಧಿಸಿ ಮೂರನೇ ಬಾಂಬನ್ನು ಇರಿಸಿದ್ದು ಪೊಲೀಸ್ ಪಡೆಗೆ ದೊಡ್ಡ ಸವಾಲಾಗಿದೆ.
ಆಫೀಸಿಗೆ ಚಕ್ಕರ್ : ಬಾಂಬ್ ಆತಂಕದಲ್ಲಿ ವಿಧಾನಸೌಧ ಮತ್ತು ಎಂ.ಎಸ್.ಕಟ್ಟಡಕ್ಕೆ ಕೆಲಸಕ್ಕೆ ಹೋಗುವ ನೌಕರರಲ್ಲಿ ಅನೇಕರು ಸೋಮವಾರ ಆಫೀಸಿಗೆ ಚಕ್ಕರ್. ಇನ್ನು ಕೆಲವರು ಬಸ್ಸಿನಲ್ಲಿ ನಡೆಯುತ್ತಿರುವ ಬಾಂಬ್ ಕುರಿತ ಬಿಸಿ ಚರ್ಚೆಯಿಂದ ಎಚ್ಚೆತ್ತುಕೊಂಡು, ಆಫೀಸಿಗೆ ಹೋಗುವ ಮನಸ್ಸು ಬದಲಾಯಿಸಿ ಮನೆಯತ್ತ ಮುಖಮಾಡುತ್ತಿರುವುದೂ ಉಂಟು. ಕೆಲವು ಶಾಸಕರ ಹಣೆಯಲ್ಲಂತೂ ಬೆವರು ಸಾಲುಗಳು ಇನ್ನೂ ಇಂಗಿಲ್ಲ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು
-
Karnataka Rain: ಕರ್ನಾಟಕದಲ್ಲಿ ಮಳೆ ಕೊರತೆ ಈ ಬಾರಿ ಈ ಭಾಗಗಳಲ್ಲಿ ಸಂಕಷ್ಟ, ಕುಡಿಯುವ ನೀರಿಗೂ ಹಾಹಾಕಾರ -
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
Bengaluru: ಪಬ್ನಲ್ಲಿ 150 ರೂ. ಕೊಟ್ಟು ಆರ್ಡರ್ ಮಾಡಿದ್ರೆ ಬಂದಿದ್ದು ಬರೀ ಹಪ್ಪಳ-ಸಂಡಿಗೆ: ದಂಗಾದ ಗ್ರಾಹಕ -
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ












Click it and Unblock the Notifications