ಕಣ್ಣುರಿ- ತಲೆನೋವೂ ಮತ್ತು ತಣ್ಣನೆ ಆಫೀಸಿನ ಪರಿಸರವೂ...
ಕಣ್ಣುರಿ- ತಲೆನೋವೂ ಮತ್ತು ತಣ್ಣನೆ ಆಫೀಸಿನ ಪರಿಸರವೂ...
ಟಾಟಾ ಎನರ್ಜಿ ರಿಸರ್ಚ್ ಇನ್ಸ್ಟಿಟ್ಯೂಟ್ನ ಅಧ್ಯಯನದ ವರದಿ ಇಲ್ಲಿದೆ.
ವಯಸ್ಸಾಯಿತು. ಆಫೀಸಿನಲ್ಲಿ ಕತ್ತೆ ದುಡಿತ, ಮನೆಯಲ್ಲೂ ಜವಾಬ್ದಾರಿಗಳು. ಇನ್ನು ಆರೋಗ್ಯ ಕೆಡದೆ ಏನು ? ಉಹುಂ, ನಿಮ್ಮ ದೇಹದ ಕಿರಿಕಿರಿಗೆ ಈ ಸಬುಬು ಸರಿಯಲ್ಲ . ಅಸಲಿಗೆ ಇದು ಆರೋಗ್ಯದ ಅಥವಾ ದೇಹದ ಸಮಸ್ಯೆ ಅಲ್ಲ. ಇದಕ್ಕೆಲ್ಲಾ ಕಾರಣ ನೀವು ಕೆಲಸ ಮಾಡುವ ಸ್ಥಳದ ಪರಿಸರ. ಆಫೀಸಿನಲ್ಲಿ ಸಾಕಷ್ಟು ಗಾಳಿ ಬೀಸದೇ ಇರುವುದೇ ಈ ವರ್ಕ್ ಲೋಡ್ ಕಾಯಿಲೆಗಳಿಗೆ ಕಾರಣ.
ಬೆಂಗಳೂರಿನ ಏರ್ಕಂಡಿಷನ್ ಆಫೀಸುಗಳಲ್ಲಿ ಕಣ್ಣುರಿ, ತಲೆನೋವು, ಸುಸ್ತು ಸಮಸ್ಯೆಗಳು ದಿನೇ ದಿನೇ ಹೆಚ್ಚಾಗುತ್ತಿವೆಯಂತೆ. ಈ ಬಗ್ಗೆ ಟಾಟಾ ಎನರ್ಜಿ ರಿಸರ್ಚ್ ಇನ್ಸ್ಟಿಟ್ಯೂಟ್(ಟೆರಿ) ಅಧ್ಯಯನ ನಡೆಸಿದ್ದು ವರದಿಯನ್ನು ಬಿಡುಗಡೆ ಮಾಡಿದೆ.
ವರದಿಯ ಪ್ರಕಾರ-
ಆಫೀಸುಗಳಲ್ಲಿ ದೊಡ್ಡ ದೊಡ್ಡ ಗಾಜಿನ ಕಿಟಕಿಗಳಿದ್ದರೂ, ಅವುಗಳನ್ನು ಮುಚ್ಚಿ ಎಸಿ ಹಾಕಿ ತಂಪು ಗಾಳಿ ಬರಿಸುವ ಹಿಕ್ಮತ್ತಿನಿಂದಾಗಿ ಆಫೀಸಿನ ಖೋಲಿಯಾಳಗೆ ಸಾಕಷ್ಟು ಗಾಳಿ ಓಡಾಡುತ್ತಿಲ್ಲ. ಅಂದಹಾಗೆ, ಟೆರಿ ಅಧ್ಯಯನ ನಡೆಸಿದ್ದು ಬೆಂಗಳೂರಿನ ಗಾರ್ಮೆಂಟ್ ಫ್ಯಾಕ್ಟರಿಗಳಲ್ಲಿ ಅಲ್ಲ. ಅತ್ಯಂತ ನಾಜೂಕಿನ ಬಿಲ್ಡಿಂಗುಗಳಾದ ಹಲವು ಮಾಹಿತಿ ತಂತ್ರಜ್ಞಾನ ಆಫೀಸುಗಳಲ್ಲಿ. ಈ ಕಚೇರಿಗಳಲ್ಲಿ ಉದ್ಯೋಗಿಗಳನ್ನು ಮಾತನಾಡಿಸಿದಾಗ ಅವರು, ತಾವು ಸಂಜೆ ಹೊತ್ತಿಗೆ ನಾಸಿಯಾ, ತಲೆನೋವು, ಉಸಿರುಗಟ್ಟುವಿಕೆಯನ್ನು ಅನುಭವಿಸುತ್ತಿರುವುದಾಗಿ ಹೇಳಿಕೊಂಡರು.
ಕೆಲವು ಕಚೇರಿಗಳಲ್ಲಿ ಉದ್ಯೋಗಿಗಳು ಆಗಾಗ ಕಾಯಿಲೆ ಬೀಳುವುದೂ ಕಂಡು ಬಂತು. ಈ ಗಾಳಿ ಸಮಸ್ಯೆಗೆ ಕಾರಣ ಆಫೀಸಿನೊಳಗಿನ ಕಾರ್ಪೆಟ್ಟುಗಳು, ಟೈಲ್ಸ್ಗಳಲ್ಲಿ ಜಮೆಯಾಗುವ ನೀರ ಹನಿಗಳು, ಮರದ ಕೆತ್ತನೆಗಳನ್ನು ಮಾಡುವಾಗ ಸಿಡಿಯುವ ಧೂಳು ಎಲ್ಲಕ್ಕಿಂತ ಮುಖ್ಯವಾಗಿ ಹೊರಗಿನಿಂದ ಸ್ವಚ್ಛಗಾಳಿ ಬಾರದಂತೆ ತಡೆಯುವ ನಿಯಂತ್ರಿತ ಬಾಗಿಲುಗಳಿಂದಾಗಿ ಕಚೇರಿ ಕೋಣೆ ಹವಾರಹಿತವಾಗುತ್ತವೆಯಂತೆ.
ದೊಡ್ಡ ದೊಡ್ಡ ಕಿಟಕಿಗಳಿರುವ ಆಫೀಸಿನಲ್ಲಿ , ಎ. ಸಿ. ಗೋಸ್ಕರ ಕಿಟಕಿ ಬಾಗಿಲು ತೆರೆಯದೇ ಇರುವುದರಿಂದ ಕಿಟಕಿಯನ್ನು ಅಳವಡಿಸಿರುವ ಉದ್ದೇಶವೇ ನೆರವೇರುವುದಿಲ್ಲ. ಕಚೇರಿಯಲ್ಲಿ ಕೆಲಸ ಮಾಡುವವರ ಸಂಖ್ಯೆಯನ್ನು ಗಮನಿಸಿಕೊಂಡು ಪ್ರತಿ ಮಾಳಿಗೆಯಲ್ಲಿಯೂ ಒಂದೆರಡು ಕಿಟಕಿಗಳನ್ನಾದರೂ ತೆರೆದಿಡುವುದು ಅತ್ಯಗತ್ಯ.
ಇದಲ್ಲದೆ ಆಫೀಸಿನಲ್ಲಿ ಹಗಲು ಹೊತ್ತಿನಲ್ಲಿಯೂ ನಿರಂತರವಾಗಿ ಉರಿಯುವ ವಿವಿಧ ನಮೂನೆಯ ಲೈಟುಗಳು, ಆಸನ ವ್ಯವಸ್ಥೆ ಉದ್ಯೋಗಿಯ ಆರೋಗ್ಯದ ಮೇಲೆ ಪ್ರಭಾವ ಬೀರಬಹುದು ಎಂದು ಟೆರಿ ಹೇಳಿದೆ.
ಅಂದರೆ ಇನ್ನು ಮೇಲೆ ಎ.ಸಿ. ಆಫೀಸಿನ ಬಗ್ಗೆ ಹೆಮ್ಮೆ ಪಡುವಂತಿಲ್ಲ. ಬದುಕಿಗೆ ನಿಸರ್ಗ ಸಹಜ ಗಾಳಿ ಒಂದಿಷ್ಟಾದರೂ ಬೇಕೇ ಬೇಕು.
ಕಮಾನ್, ಕಿಟಕಿಗಳನ್ನು ತೆರೆದಿಡಿ. ಸ್ವಚ್ಛ ಗಾಳಿಗೆ ಮುಖವೊಡ್ಡಿ ಫ್ರೆಶ್ ಆಗಿ !
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು
-
Karnataka Rain: ಕರ್ನಾಟಕದಲ್ಲಿ ಮಳೆ ಕೊರತೆ ಈ ಬಾರಿ ಈ ಭಾಗಗಳಲ್ಲಿ ಸಂಕಷ್ಟ, ಕುಡಿಯುವ ನೀರಿಗೂ ಹಾಹಾಕಾರ -
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
Bengaluru: ಪಬ್ನಲ್ಲಿ 150 ರೂ. ಕೊಟ್ಟು ಆರ್ಡರ್ ಮಾಡಿದ್ರೆ ಬಂದಿದ್ದು ಬರೀ ಹಪ್ಪಳ-ಸಂಡಿಗೆ: ದಂಗಾದ ಗ್ರಾಹಕ -
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ












Click it and Unblock the Notifications