ಮೂಡಬಿದ್ರೆ ಸಾಹಿತ್ಯ ಸಮ್ಮೇಳನದಲ್ಲಿ 25 ಪುಸ್ತಕಗಳ ಅನಾವರಣ
ಮೂಡಬಿದ್ರೆ
ಸಾಹಿತ್ಯ
ಸಮ್ಮೇಳನದಲ್ಲಿ
25
ಪುಸ್ತಕಗಳ
ಅನಾವರಣ
ಬಿಡುಗಡೆಯಾಗಲಿರುವ
ಪುಸ್ತಕಗಳ
ಪಟ್ಟಿಯಲ್ಲಿ
ದಕ್ಷಿಣ
ಕನ್ನಡದ್ದೇ
ಸಿಂಹಪಾಲು
ಕನ್ನಡ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿಯು ಪುಸ್ತಕ ಪ್ರಕಟಣೆ ಧನಸಹಾಯ ಯೋಜನೆಯಡಿ 25 ಹಸ್ತಪ್ರತಿಗಳನ್ನು ಆಯ್ಕೆ ಮಾಡಿದ್ದು ಪ್ರತಿಯಾಂದು ಕೃತಿಗೂ 5 ಸಾವಿರ ರೂಪಾಯಿ ಧನಸಹಾಯ ನೀಡಲಿದೆ. ಪ್ರಕಟಿತ ಕೃತಿಗಳನ್ನು ಸಾಹಿತ್ಯ ಸಮ್ಮೇಳನದಲ್ಲಿ ಅನಾವರಣಗೊಳಿಸಲಾಗುವುದು ಎಂದು ಸ್ವಾಗತ ಸಮಿತಿಯ ಕಾರ್ಯಾಧ್ಯಕ್ಷ ಡಾ. ಎಂ. ಮೋಹನ ಆಳ್ವ ಅವರ ಪ್ರಕಟಣೆ ತಿಳಿಸಿದೆ.
ಆಯ್ಕೆಯಾದ ಕೃತಿಗಳು : ಹತ್ತಿರದ ಮಾತು (ಸತ್ಯನ್ ದೇರಾಜೆ), ಚಿತ್ತ ಸಾಗರದಲ್ಲಿ (ಎಚ್. ಆನಂದ ರಾಮ ಶಾಸ್ತ್ರಿ), ಲೇಖಕರ ಪ್ರಥಮ ಕೃತಿ ವಿಭಾಗದಲ್ಲಿ : ನಕ್ಷತ್ರ ಮೇಯುವ ಹಕ್ಕಿಗಳು(ಹರೀಶ್ ಕೇರ), ತುಳು ಭಾಷೆ ಮತ್ತು ಜನಜೀವನ( ಡಾ. ಕೆ. ವಿ. ಜಲಜಾಕ್ಷಿ). ನಾಟಕ : ರೈತನ ಕೂಗು(ಬಸವರಾಜ ಹಳಂಗಳಿ), ಉರ್ವಿ ( ಆನಂದ ಋಗ್ವೇದಿ).
ಪುಸ್ತಕ ವಿಮರ್ಶೆ: ನಾನು ಮತ್ತು ಆಕಾಶ(ಧನಂಜಯ ಕುಂಬ್ಳೆ), ಪುರಾಣ ಕುತೂಹಲ (ಸುಮುಖಾನಂದ)ಸಂಶೋಧನೆ: ಪಾಶುಪತ ದರ್ಶನ (ಎಸ್. ಎಸ್. ಹಿರೇಮಠ), ಭಾರತೀಯ ಮಹಿಳೆಯರ ಸಾಂಸ್ಕೃತಿಕ ವಿಕಾಸ( ಬಿ. ವಿ. ವೀರಭದ್ರಪ್ಪ).ಕಥಾ ಸಂಕಲನ: ಆಷಾಡದ ಮಳೆ(ಕೆ. ಎಸ್. ಭಗವಾನ್), ಹೂವಿಗೊಂದು ಹೂ( ಶಂಕರ್ ಯು. ಮಂಜೇಶ್ವರ), ಕಾದಂಬರಿ : ಪರಿಹಾರ (ರವಿ ಸಸಿತೋಟ), ತಂಬಿಲ (ಪ್ರಭಾಕರ ನೀರ್ಮಾರ್ಗ), ಲಲಿತ ಪ್ರಬಂಧ: ದೆವ್ವಗಳ ಭವ್ಯಲೋಕ (ಜಾನಕಿ ಸುಂದರೇಶ್), ನಮ್ಮೂರಿನ ಬಸ್ಸುಗಳು ( ಸಿದ್ಧಾಪುರ ವಾಸುದೇವ ಭಟ್).
ಮಕ್ಕಳ ಸಾಹಿತ್ಯ: ಬಾಲಾಯಣ (ಮಲ್ಲಿಕಾ), ಮಂಗಳನ ಅಂಗಳಕೆ ( ಪ. ಗು. ಸಿದ್ಧಾಪುರ). ವಿಜ್ಞಾನ ಸಾಹಿತ್ಯ: ನಿಸರ್ಗದ ಮಡಿಲಲ್ಲಿ(ಡಾ. ಇ. ಬಿ. ಸೇಡಂಕರ್), ಸಸ್ಯಾಂತ ರಂಗ(ಡಾ. ವಿರೂಪಾಕ್ಷ ಬಡಿಗೇರ). ಜೀವನ ಚರಿತ್ರೆ: ಮಾರ್ನಾಡು ವರ್ಧಮಾನ ಹೆಗಡೆ (ಮುನಿರಾಜ ರೇಂಜಾಳ), ನೆಲ ಸಂಪಗೆ (ಡಾ. ಉಪ್ಪಂಗಳ ರಾಮ ಭಟ್).
ಜಾನಪದ: ಜಾನಪದ ಮಾಹಿತಿಯ ಮರು ಅರ್ಥೈಸುವಿಕೆ ( ಡಾ. ಕೆ. ಜಿ. ಗುರುಮೂರ್ತಿ), ತಮಾಷಾ ಮತ್ತು ನಾನು ( ತಿರುಮಲ ಮಾವಿನಕುಳಿ). ಪ್ರವಾಸ ಸಾಹಿತ್ಯ: ಹಿಮಾಲಯದ ತಪ್ಪಲಲ್ಲಿ(ಬಿ. ಆರ್. ವಿಠೋಬರಾವ್).
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು