ಮೂಡಬಿದ್ರೆ ಸಾಹಿತ್ಯ ಸಮ್ಮೇಳನದಲ್ಲಿ 25 ಪುಸ್ತಕಗಳ ಅನಾವರಣ
ಮೂಡಬಿದ್ರೆ ಸಾಹಿತ್ಯ ಸಮ್ಮೇಳನದಲ್ಲಿ 25 ಪುಸ್ತಕಗಳ ಅನಾವರಣ
ಬಿಡುಗಡೆಯಾಗಲಿರುವ ಪುಸ್ತಕಗಳ ಪಟ್ಟಿಯಲ್ಲಿ ದಕ್ಷಿಣ ಕನ್ನಡದ್ದೇ ಸಿಂಹಪಾಲು
ಕನ್ನಡ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿಯು ಪುಸ್ತಕ ಪ್ರಕಟಣೆ ಧನಸಹಾಯ ಯೋಜನೆಯಡಿ 25 ಹಸ್ತಪ್ರತಿಗಳನ್ನು ಆಯ್ಕೆ ಮಾಡಿದ್ದು ಪ್ರತಿಯಾಂದು ಕೃತಿಗೂ 5 ಸಾವಿರ ರೂಪಾಯಿ ಧನಸಹಾಯ ನೀಡಲಿದೆ. ಪ್ರಕಟಿತ ಕೃತಿಗಳನ್ನು ಸಾಹಿತ್ಯ ಸಮ್ಮೇಳನದಲ್ಲಿ ಅನಾವರಣಗೊಳಿಸಲಾಗುವುದು ಎಂದು ಸ್ವಾಗತ ಸಮಿತಿಯ ಕಾರ್ಯಾಧ್ಯಕ್ಷ ಡಾ. ಎಂ. ಮೋಹನ ಆಳ್ವ ಅವರ ಪ್ರಕಟಣೆ ತಿಳಿಸಿದೆ.
ಆಯ್ಕೆಯಾದ ಕೃತಿಗಳು : ಹತ್ತಿರದ ಮಾತು (ಸತ್ಯನ್ ದೇರಾಜೆ), ಚಿತ್ತ ಸಾಗರದಲ್ಲಿ (ಎಚ್. ಆನಂದ ರಾಮ ಶಾಸ್ತ್ರಿ), ಲೇಖಕರ ಪ್ರಥಮ ಕೃತಿ ವಿಭಾಗದಲ್ಲಿ : ನಕ್ಷತ್ರ ಮೇಯುವ ಹಕ್ಕಿಗಳು(ಹರೀಶ್ ಕೇರ), ತುಳು ಭಾಷೆ ಮತ್ತು ಜನಜೀವನ( ಡಾ. ಕೆ. ವಿ. ಜಲಜಾಕ್ಷಿ). ನಾಟಕ : ರೈತನ ಕೂಗು(ಬಸವರಾಜ ಹಳಂಗಳಿ), ಉರ್ವಿ ( ಆನಂದ ಋಗ್ವೇದಿ).
ಪುಸ್ತಕ ವಿಮರ್ಶೆ: ನಾನು ಮತ್ತು ಆಕಾಶ(ಧನಂಜಯ ಕುಂಬ್ಳೆ), ಪುರಾಣ ಕುತೂಹಲ (ಸುಮುಖಾನಂದ)ಸಂಶೋಧನೆ: ಪಾಶುಪತ ದರ್ಶನ (ಎಸ್. ಎಸ್. ಹಿರೇಮಠ), ಭಾರತೀಯ ಮಹಿಳೆಯರ ಸಾಂಸ್ಕೃತಿಕ ವಿಕಾಸ( ಬಿ. ವಿ. ವೀರಭದ್ರಪ್ಪ).ಕಥಾ ಸಂಕಲನ: ಆಷಾಡದ ಮಳೆ(ಕೆ. ಎಸ್. ಭಗವಾನ್), ಹೂವಿಗೊಂದು ಹೂ( ಶಂಕರ್ ಯು. ಮಂಜೇಶ್ವರ), ಕಾದಂಬರಿ : ಪರಿಹಾರ (ರವಿ ಸಸಿತೋಟ), ತಂಬಿಲ (ಪ್ರಭಾಕರ ನೀರ್ಮಾರ್ಗ), ಲಲಿತ ಪ್ರಬಂಧ: ದೆವ್ವಗಳ ಭವ್ಯಲೋಕ (ಜಾನಕಿ ಸುಂದರೇಶ್), ನಮ್ಮೂರಿನ ಬಸ್ಸುಗಳು ( ಸಿದ್ಧಾಪುರ ವಾಸುದೇವ ಭಟ್).
ಮಕ್ಕಳ ಸಾಹಿತ್ಯ: ಬಾಲಾಯಣ (ಮಲ್ಲಿಕಾ), ಮಂಗಳನ ಅಂಗಳಕೆ ( ಪ. ಗು. ಸಿದ್ಧಾಪುರ). ವಿಜ್ಞಾನ ಸಾಹಿತ್ಯ: ನಿಸರ್ಗದ ಮಡಿಲಲ್ಲಿ(ಡಾ. ಇ. ಬಿ. ಸೇಡಂಕರ್), ಸಸ್ಯಾಂತ ರಂಗ(ಡಾ. ವಿರೂಪಾಕ್ಷ ಬಡಿಗೇರ). ಜೀವನ ಚರಿತ್ರೆ: ಮಾರ್ನಾಡು ವರ್ಧಮಾನ ಹೆಗಡೆ (ಮುನಿರಾಜ ರೇಂಜಾಳ), ನೆಲ ಸಂಪಗೆ (ಡಾ. ಉಪ್ಪಂಗಳ ರಾಮ ಭಟ್).
ಜಾನಪದ: ಜಾನಪದ ಮಾಹಿತಿಯ ಮರು ಅರ್ಥೈಸುವಿಕೆ ( ಡಾ. ಕೆ. ಜಿ. ಗುರುಮೂರ್ತಿ), ತಮಾಷಾ ಮತ್ತು ನಾನು ( ತಿರುಮಲ ಮಾವಿನಕುಳಿ). ಪ್ರವಾಸ ಸಾಹಿತ್ಯ: ಹಿಮಾಲಯದ ತಪ್ಪಲಲ್ಲಿ(ಬಿ. ಆರ್. ವಿಠೋಬರಾವ್).
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು
-
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ












Click it and Unblock the Notifications