ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ರಾಜ್ಯೋತ್ಸವದಂದು ಸಾಣೇಹಳ್ಳಿಯಲ್ಲಿ ನಾಟಕೋತ್ಸವ ಆರಂಭ
ರಾಜ್ಯೋತ್ಸವದಂದು
ಸಾಣೇಹಳ್ಳಿಯಲ್ಲಿ
ನಾಟಕೋತ್ಸವ
ಆರಂಭ
ಕೃತಿಯ
ಉತ್ತಮ
ವಿನ್ಯಾಸ,
ಕಲೆ
ಹಾಗೂ
ಮುದ್ರಣಕ್ಕೆ
ಸಂದ
ಪ್ರಶಸ್ತಿ
ನವೆಂಬರ್ 1ರಿಂದ ಒಂದು ವಾರದ ಕಾಲ ನಾಟಕೋತ್ಸವ ನಡೆಯಲಿದ್ದು , ಸಿರಿಗೆರೆಯ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಈ ಕಾರ್ಯಕ್ರಮವನ್ನು ಉದ್ಘಾಟಿಸುವರು. ಕ್ರೀಡಾ ಸಚಿವ ಎಸ್. ಎಸ್. ಮಲ್ಲಿಕಾರ್ಜುನಯ್ಯ ಬಯಲು ರಂಗಮಂದಿರವನ್ನು ಉದ್ಘಾಟಿಸುವರು.
ನವೆಂಬರ್ 7 ರಂದು ರೈತರ ಸಮಸ್ಯೆ ಹಾಗೂ ನಮ್ಮ ಹೊಣೆಗಾರಿಕೆ ಎಂಬ ವಿಷಯ ಕುರಿತು ವಿಚಾರ ಸಂಕಿರಣವೂ ನಡೆಯಲಿದೆ. ನಾಟಕೋತ್ಸವದಲ್ಲಿ ವಿಶ್ವಬಂಧು ಮರುಳ ಸಿದ್ಧ, ಆಮ್ರಪಾಲಿ, ಆವಸ್ಥೆ, ನರ್ತಕಿ ಪೂಜೆ, ನೀಲಿ ಕುದುರೆ, ಮೊದಲಗಿತ್ತಿ, ಸಿಂಗಾರೆವ್ವ ಮತ್ತು ಅರಮನೆ, ರಕ್ತಾಕ್ಷಿ ನಾಟಕಗಳು ಪ್ರದರ್ಶನಗೊಳ್ಳಲಿವೆ.
ನಾಟಕೋತ್ಸವ ನಡೆಯುವ ಏಳು ದಿನಗಳಲ್ಲಿ ನಡೆಯುವ ಚರ್ಚೆಗಳು ಹಾಗೂ ಗೋಷ್ಠಿಗಳಲ್ಲಿ ವಿವಿಧ ಮಠಾಧೀಶರು, ಸಂಸದರು ಭಾಗವಹಿಸುವರು.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು
Story first published: Friday, January 24, 2003, 5:30 [IST]