ಮೈಸೂರಲ್ಲಿ ಚಿತ್ಪಾವನ ಬ್ರಾಹ್ಮಣರ ಮೇಳ
ಮೈಸೂರಲ್ಲಿ ಚಿತ್ಪಾವನ ಬ್ರಾಹ್ಮಣರ ಮೇಳ
ಡಿಸೆಂಬರ್ 27 ಮತ್ತು 28ರಂದು ಚಿತ್ಪಾವನ ಬ್ರಾಹ್ಮಣರ ಮೂರನೆ ಮಹಾ ಸಮ್ಮೇಳನ
ಸಮ್ಮೇಳನದ ಸಮರ್ಥ ನಿರ್ವಹಣೆಗಾಗಿ ಸಮ್ಮೇಳನ ಸಮಿತಿ ಹಾಗೂ ಹಲವು ಉಪಸಮಿತಿಗಳನ್ನು ನೇಮಿಸಲಾಗಿದ್ದು, ಪೂರ್ವಭಾವಿ ಸಿದ್ಧತೆಗಳು ಈಗಾಗಲೇ ಪ್ರಾರಂಭವಾಗಿವೆ ಎಂದು ಅಖಿಲ ಕರ್ನಾಟಕ ಚಿತ್ಪಾವನ ಬ್ರಾಹ್ಮಣ ಸಂಘದ ಪ್ರಕಟಣೆ ತಿಳಿಸಿದೆ.
ಈ ಹಿಂದೆ 1994 ಹಾಗೂ 1998ರಲ್ಲಿ ನಡೆದ ಎರಡು ಸಮ್ಮೇಳನಗಳಿಂದ ಕರ್ನಾಟಕದ ಮೂಲೆಮೂಲೆಗಳಲ್ಲಿ ಚದುರಿಹೋದ ಚಿತ್ಪಾವನ ಬ್ರಾಹ್ಮಣರಲ್ಲಿ ಸಂಘಟನೆಯ ಅರಿವು ಮೂಡಿದ್ದು , ಚಿತ್ಪಾವನ ಬ್ರಾಹ್ಮಣರ ಸಾಂಸ್ಕೃತಿಕ ಪರಂಪರೆಯನ್ನು ಅರ್ಥವತ್ತಾಗಿ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಚಿಂತನೆಗಳು ವೈಯಕ್ತಿಕ ಮಟ್ಟದಿಂದ ಸಾಂಘಿಕ ಮಟ್ಟಕ್ಕೆ ಏರಿವೆ.
ದಾಟಬೇಕಿದೆ ಲಕ್ಷ್ಮಣರೇಖೆ : ಭಾರತೀಯ ಬ್ರಾಹ್ಮಣ ಸಮಾಜ ಪ್ರದೇಶ-ಭಾಷೆ-ಕಾಲಗತಿಗಳ ಪ್ರಭಾವದಿಂದ ಹಾಗೂ ಇತರ ಐತಿಹಾಸಿಕ ಕಾರಣಗಳಿಂದ ಶಾಖೋಪಶಾಖೆಗಳಾಗಿ ಹಂಚಿಹೋಗಿ ಪ್ರತಿಯಾಂದು ಶಾಖೆಯೂ ತಮ್ಮ ಸುತ್ತಲೂ ಲಕ್ಷ್ಮಣರೇಖೆಯನ್ನೆಳೆದು ಸಂಕುಚಿತವಾಗಿವೆ. ನಾವಿಂದು ಈ ಲಕ್ಷ್ಮಣರೇಖೆಯನ್ನು ದಾಟಿ ಇನ್ನುಳಿದ ಶಾಖೆಗಳೊಡನೆ ನಮ್ಮನ್ನು ಗುರುತಿಸಿಕೊಳ್ಳಬೇಕಾದ ಕಾಲ ಬಂದಿದೆ.
ಬದಲಾದ ಸಾಂಸ್ಕೃತಿಕ ಸಂದರ್ಭದಲ್ಲಿ ನಮ್ಮ ಸಾಂಸ್ಕೃತಿಕ ಬೇರುಗಳನ್ನು ಕಳಚಿಕೊಳ್ಳದೆ ಹೇಗೆ ತಲೆಯೆತ್ತಿ ನಿಲ್ಲಬಹುದು ಎಂಬುದರ ಬಗ್ಗೆ ಚಿಂತನೆ ಮಾಡಬೇಕಾದ ಅಗತ್ಯ ಇಂದು ಎಂದಿಗಿಂತಲೂ ಹೆಚ್ಚಾಗಿದೆ. ಸ್ವಾವಲಂಬನೆ, ಸ್ವ-ಉದ್ಯೋಗ, ಯುವಶಕ್ತಿ, ಸ್ತ್ರೀ ಶಕ್ತಿಗಳ ಉಪಯೋಗ ಇವುಗಳ ಬಗ್ಗೆ ವಿಶೇಷ ಗಮನ ನೀಡಬೇಕಾದ ಅಗತ್ಯವಿದೆ ಎಂದು ಸಂಘದ ಪ್ರಕಟಣೆ ತಿಳಿಸಿದೆ.
ಈ ಎಲ್ಲ ವಿಚಾರಗಳ ಬಗ್ಗೆ ಮುಕ್ತವಾಗಿ ಚರ್ಚಿಸಲು ಅವಕಾಶ ಮಾಡಿಕೊಡುವ ದೃಷ್ಟಿಯಿಂದ ಈ ಬಾರಿಯ ಮಹಾ ಸಮ್ಮೇಳನದಲ್ಲಿ ವಿಶೇಷ ಗೋಷ್ಠಿಗಳನ್ನೇರ್ಪಡಿಸಲಾಗುವುದು. ಈ ಗೋಷ್ಠಿಗಳಲ್ಲಿ ಸಂಬಂಧಿಸಿದ ವಿಷಯಗಳಲ್ಲಿ ಪರಿಣತರಿಂದ ಪ್ರಬಂಧಗಳನ್ನು ಮಂಡಿಸಿ ಅವುಗಳ ಬಗ್ಗೆ ಚರ್ಚಿಸಲು ಪ್ರಶ್ನೋತ್ತರ ವೇಳೆಯನ್ನು ನಿಗದಿಪಡಿಸಲಾಗುವುದು.
ಈ ಸಂದರ್ಭದಲ್ಲಿ ಚಿತ್ಪಾವನ ವಿಳಾಸದರ್ಶಿನಿಯ ಪರಿಷ್ಕೃತ ಇಂಗ್ಲಿಷ್ ಆವೃತ್ತಿಯನ್ನೂ ಚಿತ್ಪಾವನರ ಸ್ವ-ಉದ್ಯೋಗ ಕೈಪಿಡಿಯನ್ನೂ ಪ್ರಕಟಿಸಲಾಗುವುದು. ಇದಲ್ಲದೆ ಸಮ್ಮೇಳನದ ಸವಿನೆನಪಿಗಾಗಿ ಒಂದು ಸುಂದರ ಸ್ಮರಣಸಂಚಿಕೆಯನ್ನು ಸಂಪಾದಿಸಿ ಪ್ರಕಟಿಸಲಾಗುವುದು.
ಈ ಸಮ್ಮೇಳನವನ್ನು, ಸಮ್ಮೇಳನಾಧ್ಯಕ್ಷರಾಗಿ ಆಯ್ಕೆಯಾಗಿರುವ ಗೋಕರ್ಣಕ್ಷೇತ್ರದ ವೇ।।ಬ್ರ।।ಶ್ರೀ। ಕೇಶವ ಭಟ್ ಜೋಗಳೇಕರರ ನೇತೃತ್ವದಲ್ಲಿ ನಡೆಸಲಾಗುವುದು.
ಸಮ್ಮೇಳನ ಕಾರ್ಯಕಾರಿ ಸಮಿತಿ ಇಂತಿದೆ :
- ವಿಜಯ ಗೋರೆ, ಐ.ಅ.ಎಸ್, ಬೆಂಗಳೂರು
(ಗೌರವಾಧ್ಯಕ್ಷರು, ಸಮ್ಮೇಳನ ಸಮಿತಿ)
- ಎಂ. ಬಾಲಚಂದ್ರ ಡೋಂಗ್ರೆ
(ಅಧ್ಯಕ್ಷರು, ಅ.ಕ.ಚಿ.ಬ್ರಾ.ಸಂಘ, ಹಾಗೂ ಸಮ್ಮೇಳನ ಸಮಿತಿ)
- ಡಿ. ಹೃಷಿಕೇಶ ಹೆಬ್ಬಾರ್ ಗೋಗಟೆ
( ಕಾರ್ಯದರ್ಶಿ, ಸಮ್ಮೇಳನ ಸಮಿತಿ)
ಮನವಿ: ಧನಸಹಾಯದ ಚೆಕ್ ಅಥವಾ ಡಿಡಿಗಳನ್ನು ‘ಚಿತ್ಪಾವನ ಬ್ರಾಹ್ಮಣ ಸಂಘ, ಮೈಸೂರು’ ಹೆಸರಿಗೆ ಮೈಸೂರಲ್ಲಿ ಜಮೆಯಾಗುವಂತೆ ಬರೆದು ಕಳಿಸಬೇಕೆಂದು ಕೋರಿಕೆ.
ಸಂಪರ್ಕ ವಿಳಾಸ : 65B Shanthi Marga, Siddharthanagar, Mysore 570 011, India
ದೂರವಾಣಿ : 0821-2472784, 2443783
ವಿದ್ಯುನ್ಮಾನ ಅಂಚೆ: [email protected]
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು
-
Karnataka Rain: ಕರ್ನಾಟಕದಲ್ಲಿ ಮಳೆ ಕೊರತೆ ಈ ಬಾರಿ ಈ ಭಾಗಗಳಲ್ಲಿ ಸಂಕಷ್ಟ, ಕುಡಿಯುವ ನೀರಿಗೂ ಹಾಹಾಕಾರ -
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
Bengaluru: ಪಬ್ನಲ್ಲಿ 150 ರೂ. ಕೊಟ್ಟು ಆರ್ಡರ್ ಮಾಡಿದ್ರೆ ಬಂದಿದ್ದು ಬರೀ ಹಪ್ಪಳ-ಸಂಡಿಗೆ: ದಂಗಾದ ಗ್ರಾಹಕ -
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ












Click it and Unblock the Notifications