ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ನವೆಂಬರ್ನಿಂದ ಇನ್ನೊಂದು ವರ್ಷ ‘ಕನ್ನಡಿಗರಿಗೆ ಉದ್ಯೋಗ ವರ್ಷ’
ನವೆಂಬರ್ನಿಂದ
ಇನ್ನೊಂದು
ವರ್ಷ
‘ಕನ್ನಡಿಗರಿಗೆ
ಉದ್ಯೋಗ
ವರ್ಷ’
ರಾಜ್ಯ
ಸ್ಥಾಪನೆಯಾದ
50ನೇ
ವರ್ಷಾಚರಣೆಗೆ
ಕನ್ನಡ
ಅಭಿವೃದ್ಧಿ
ಪ್ರಾಧಿಕಾರದ
ಸಿದ್ಧತೆ
ಸೋಮವಾರ (ಅ. 20) ಸುದ್ದಿಗಾರರಿಗೆ ಪ್ರಾಧಿಕಾರದ ಅಧ್ಯಕ್ಷ ಬಿ.ಎಂ.ಇದಿನಬ್ಬ ಈ ವಿಷಯ ತಿಳಿಸಿದರು. ಬೆಂಗಳೂರು ನಗರ ಹಾಗೂ ವಿವಿಧ ಜಿಲ್ಲಾ ಕೇಂದ್ರಗಳಲ್ಲಿ ವಿಚಾರ ಸಂಕಿರಣಗಳನ್ನು ನಡೆಸುವುದರ ಜೊತೆಗೆ ಸರ್ಕಾರದ ಅಧೀನದಲ್ಲಿರುವ ಖಾಸಗಿ ಕೈಗಾರಿಕೆಗಳ ಮಂಡಳಿಗಳಿಗೆ ಸರೋಜಿನಿ ಮಹಿಷಿ ಸಮಿತಿಯ ಶಿಫಾರಸ್ಸುಗಳನ್ನು ಮನವರಿಕೆ ಮಾಡಿಕೊಡಲಾಗುವುದು. ಈ ಬಗ್ಗೆ ಸರ್ಕಾರಿ ಆದೇಶ ಹೊರಡಿಸಬೇಕು ಎಂದು ಮುಖ್ಯಮಂತ್ರಿ ಎಸ್ಸೆಂ ಕೃಷ್ಣ ಅವರನ್ನು ಕೇಳಿಕೊಳ್ಳಲಾಗಿದೆ ಎಂದು ಇದಿನಬ್ಬ ಹೇಳಿದರು.
ಕನ್ನಡ ಅಭಿವೃದ್ಧಿಯ ನಿಟ್ಟಿನಲ್ಲಿ ಪ್ರಾಧಿಕಾರ ಕೈಗೊಂಡಿರುವ ಕ್ರಮಗಳು-
- ಜಿಲ್ಲೆಗಳಲ್ಲಿ ಕನ್ನಡದ ಯಶಸ್ವಿ ಬಳಕೆಯ ಮೇಲೆ ನಿಗಾ ಇಡಲು ಪ್ರತಿ ಜಿಲ್ಲೆಯಲ್ಲೂ ಜಾಗೃತ ಸಮಿತಿ ರಚಿಸುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.
- ಅಂಗಡಿ ಮುಂಗಟ್ಟು ಮತ್ತಿತರ ಸಂಸ್ಥೆಗಳ ನಾಮ ಫಲಕಗಳು ಕನ್ನಡದಲ್ಲಿಯೇ ಇರುವುದನ್ನು ಖಾತರಿ ಪಡಿಸಿಕೊಳ್ಳಲು ಅಧಿಕಾರಿಗಳ ಮತ್ತು ಅಧಿಕಾರೇತರ ಸದಸ್ಯರ ತನಿಖಾ ತಂಡಗಳನ್ನು ರಚಿಸಲಾಗಿದೆ.
- ಸರ್ಕಾರಿ ಕಚೇರಿಗಳಿಗೆ ಪ್ರಾಧಿಕಾರದ ಅಧಿಕಾರಿಗಳು ಭೇಟಿ ನೀಡಿ, ಕನ್ನಡ ಅನುಷ್ಠಾನವನ್ನು ಪರಿಶೀಲಿಸಿ ವರದಿ ಸಿದ್ಧಪಡಿಸಲಿದ್ದಾರೆ. ಇದಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಿಗಳೂ ನೆರವು ನೀಡಲಿದ್ದಾರೆ.
- ಇನ್ನೆರಡು ತಿಂಗಳೊಳಗೆ ‘ಅಕ್ಷರ ಸಾಹಿತ್ಯ ಯೋಜನೆ’ಯಡಿ ಮಾಹಿತಿ ಕೈಪಿಡಿ ಮಾಲೆ ಮತ್ತು ಕನ್ನಡ ಕಲಿಕಾ ಪುಸ್ತಕಗಳು ಪ್ರಕಟವಾಗಲಿವೆ.
- 2006ನೇ ಇಸವಿಯಲ್ಲಿ ರಾಜ್ಯ ಸ್ಥಾಪನೆಯ 50ನೇ ವರ್ಷವನ್ನು ‘ಸುವರ್ಣ ಕರ್ನಾಟಕ’ ಎಂದು ಆಚರಿಸಲು ತೀರ್ಮಾನಿಸಲಾಗಿದೆ. ಈ ಸಂದರ್ಭದಲ್ಲಿ ‘ಕರ್ನಾಟಕ ಏಕೀಕರಣಕ್ಕಾಗಿ ದುಡಿದ ಮಹನೀಯರು’ ಎಂಬ ಗ್ರಂಥ ಪ್ರಕಟಿಸಲು ಸಂಪಾದಕರ ಮಂಡಳಿ ರಚಿಸಲಾಗಿದೆ.
- ಕರ್ನಾಟಕ ಮತ್ತು ಕನ್ನಡದ ಬಗ್ಗೆ ಮಾಹಿತಿ ಕೊಡುವ ‘ಕನ್ನಡ ಚಿಂತನೆ’ ಎಂಬ ಇನ್ನೊಂದು ಪುಸ್ತಕ ಪ್ರಕಟಿಸಲು ಪ್ರಾಧಿಕಾರ ನಿರ್ಧರಿಸಿದೆ.
ಮುಖಪುಟ / ವಾರ್ತೆಗಳು
Comments
Story first published: Friday, January 24, 2003, 5:30 [IST]