ಹಸನಾದರೆ ಒಳಬಾಳು, ಕಾವ್ಯ ಹುಲುಸು ನೋಡು -ಕಾಯ್ಕಿಣಿ
ಹಸನಾದರೆ ಒಳಬಾಳು, ಕಾವ್ಯ ಹುಲುಸು ನೋಡು -ಕಾಯ್ಕಿಣಿ
ಹೆಗ್ಗೋಡಿನಲ್ಲಿ ನೀನಾಸಂ ಸಂಸ್ಕೃತಿ ಶಿಬಿರ ಪ್ರಾರಂಭ
ಶುಕ್ರವಾರ (ಅ. 17) ನೀನಾಸಂ ಸಭಾಂಗಣದಲ್ಲಿ ನಡೆದ ಬಿ.ಎಂ.ಶ್ರೀ ಕಾವ್ಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಮಕಾಲೀನ ಕನ್ನಡ ಕಾವ್ಯದ ಬಗ್ಗೆ ಕಾಯ್ಕಿಣಿ ಮಾತಾಡಿದರು. ನಮ್ಮ ಸುತ್ತಲಿನ ಎಲ್ಲದರ ಬಗ್ಗೆ ಮುಕ್ತ ಮನಸ್ಸಿನಿಂದ ಸ್ಪಂದಿಸುವ , ಮತ್ತೊಬ್ಬರ ಬಗ್ಗೆ ಆಸಕ್ತಿ ಹಾಗೂ ಪ್ರೀತಿ ತಳೆಯುವ ಅತಃಕರಣ ಕಾವ್ಯಕ್ಕೆ ಬೇಕು. ಒಳಬಾಳು ಸರಿ ಇಲ್ಲದಿದ್ದರೆ ಕಾವ್ಯವೂ ಒಂದೆರಡು ಹೊತ್ತಿನ ಊಟವುಳ್ಳವರ ಪಾಲಿನ ಆಟವಾಗಿ ಹೋಗುತ್ತದೆ ಎಂದರು.
ಇವತ್ತು ಕಾವ್ಯದ ಹೂರಣದ ಚರ್ಚೆಗಿಂತ ಹೆಚ್ಚಾಗಿ ಕವಿತೆ ಪ್ರಕಟವಾದದ್ದರ ಬಗ್ಗೆ, ಅದಕ್ಕೆ ಸಿಕ್ಕ ಬಹುಮಾನಗಳ ಬಗ್ಗೆ ಚರ್ಚೆ ನಡೆಯುತ್ತಿದೆ. ಬರೆವ ಕವಿಗಳಿಗೋ ಪ್ರಕಟಿಸುವ ಧಾವಂತ. ನಿಜವಾದ ಕಾವ್ಯಕ್ಕೆ ಬೇಕಾದ ಮನಸ್ಥಿತಿ ಮತ್ತು ಚಟುವಟಿಕೆಯನ್ನು ಅರ್ಥಹೀನ ಚರ್ಚೆಗಳು ಹಾಳುಗೆಡವುತ್ತಿವೆ. ಪ್ರಕಟಿಸುವ ಧಾವಂತದಲ್ಲಿ ಹುಟ್ಟುವ ಕಾವ್ಯ ಬರಿ ಕ್ರಿಯಾಪದಗಳ ಗುಚ್ಛವಾಗಿಯೇ ವಿಜೃಂಭಿಸುತ್ತಿದೆ ಎಂದು ಕಾಯ್ಕಿಣಿ ವಿಷಾದಿಸಿದರು.
2002ನೇ ಇಸವಿಯ ಬಿ.ಎಂ.ಶ್ರೀ ಪ್ರಶಸ್ತಿಯನ್ನು ಕವಿ ವಸಂತ ಬನ್ನಾಡಿ ಅವರ ಮೊದಲ ಕವನ ಸಂಕಲನ ‘ಕಡಲಿನ ಧ್ಯಾನ’ಕ್ಕೆ ಗೆ ನೀಡಲಾಯಿತು. ಜ್ಞಾನಪೀಠ ಪುರಸ್ಕೃತ ಯು.ಆರ್.ಅನಂತಮೂರ್ತಿ ಪ್ರಶಸ್ತಿ ಪ್ರದಾನ ಮಾಡಿದರು. ವಿಮರ್ಶಕ ಟಿ.ಪಿ.ಅಶೋಕ್, ಬನ್ನಾಡಿ ಅವರ ಕೆಲವು ಕವಿತೆಗಳನ್ನು ಓದಿದರು. ಕೆ.ವಿ.ಸುಬ್ಬಣ್ಣ, ಡಾ. ಚಂದ್ರಶೇಖರ ಕಂಬಾರ, ಸಮೀಕ್ ಬ್ಯಾನರ್ಜಿ, ಸುಧೇಷ್ಣಾ ಬ್ಯಾನರ್ಜಿ, ಕೆ.ವಿ.ಅಕ್ಷರ ಮೊದಲಾದವರು ವೇದಿಕೆ ಮೇಲಿದ್ದರು.
ವಾಸುದೇವ್ ಕಲೆ ಬಲೆ : ಶುಕ್ರವಾರ ಶುರುವಾದ ನೀನಾಸಂ ಸಂಸ್ಕೃತಿ ಶಿಬಿರದಲ್ಲಿ ಕಲಾವಿದ ವಾಸುದೇವ್ ಜತೆಗಿನ ‘ಮಾತುಕತೆ’ ಕಳೆಗಟ್ಟಿತ್ತು. ಹಳೆಯ ನೆನಪುಗಳನ್ನು ಮೆಲುಕು ಹಾಕುತ್ತಾ , ಲಂಕೇಶ, ವೈಎನ್ಕೆ, ಗಿರೀಶ್ ಕಾರ್ನಾಡ್, ಬೇಂದ್ರೆ, ಜಿ.ಬಿ.ಜೋಷಿ, ಕುರ್ತಕೋಟಿ, ಅನಂತಮೂರ್ತಿ, ಕಂಬಾರರ ಜೊತೆಗಿನ ಹಳೆಯ ಕ್ಷಣಗಳನ್ನು ವಾಸುದೇವ್ ಸ್ಮರಿಸಿಕೊಂಡರು.ಗೋಷ್ಠಿಯಲ್ಲಿ ವಾಸುದೇವ್ ಅವರ ಚಿತ್ರ ಮತ್ತು ಕಾರ್ವಿಂಗ್ಗಳ ಪ್ರದರ್ಶನವೂ ಇತ್ತು.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು
-
Karnataka Rain: ಕರ್ನಾಟಕದಲ್ಲಿ ಮಳೆ ಕೊರತೆ ಈ ಬಾರಿ ಈ ಭಾಗಗಳಲ್ಲಿ ಸಂಕಷ್ಟ, ಕುಡಿಯುವ ನೀರಿಗೂ ಹಾಹಾಕಾರ -
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
Bengaluru: ಪಬ್ನಲ್ಲಿ 150 ರೂ. ಕೊಟ್ಟು ಆರ್ಡರ್ ಮಾಡಿದ್ರೆ ಬಂದಿದ್ದು ಬರೀ ಹಪ್ಪಳ-ಸಂಡಿಗೆ: ದಂಗಾದ ಗ್ರಾಹಕ -
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ












Click it and Unblock the Notifications