ಸ್ವಲ್ಪ ತಾಳಿ, ಅಮೆರಿಕೆ ಆಗಲಿದೆ ಮತ್ತೆ ಕೆಲಸದ ಮೆಕ್ಕಾ- ಕಾರ್ಬೆಟ್
ಸ್ವಲ್ಪ ತಾಳಿ, ಅಮೆರಿಕೆ ಆಗಲಿದೆ ಮತ್ತೆ ಕೆಲಸದ ಮೆಕ್ಕಾ- ಕಾರ್ಬೆಟ್
ಬೆಂಗಳೂರಲ್ಲಿ ಬಿಪಿಓ ಭರಾಟೆ, ಸಂಕಿರಣದಲ್ಲಿ ಅಮೆರಿಕ ಪರಿಣತ
ವ್ಯಾಪಾರಿ ಉದ್ದಿಶ್ಯ ಎರವಲು ಸೇವೆ (ಬಿಪಿಓ) ಗೆ ಸಂಬಂಧಿಸಿದ ಸಂಕಿರಣವೊಂದರಲ್ಲಿ ಬುಧವಾರ (ಅ. 15) ಕಾರ್ಬೆಟ್ ಮಾತಾಡುತ್ತಿದ್ದರು. ತಮ್ಮದೇ ಹೆಸರಿನ ಕಂಪನಿಯ ಅಧ್ಯಕ್ಷ ಹಾಗೂ ಸಿಇಓ ಆಗಿರುವ ಕಾರ್ಬೆಟ್, ಅಮೆರಿಕೆಯಲ್ಲಿ ವ್ಯಾಪಾರಿ ಉದ್ದಿಶ್ಯ ಎರವಲು ಸೇವೆ ಕ್ಷೇತ್ರದಲ್ಲಿ ಪಳಗಿದ ಕೈ.
ಸದ್ಯಕ್ಕೆ ಭಾರತ ಮತ್ತಿತರ ದೇಶಗಳಿಂದ ಅಮೆರಿಕಾ ಎರವಲು ಸೇವೆ ಪಡೆಯುತ್ತಿರುವುದು ಹೆಚ್ಚಾಗಿದೆ. 2003ನೇ ಇಸವಿ ಕೊನೆ ಹೊತ್ತಿಗೆ ಜಗತ್ತಿನ ಬಿಪಿಓ ಮೌಲ್ಯವೇ 5.1 ಟ್ರಿಲಿಯನ್ ಮುಟ್ಟುವ ಅಂದಾಜಿದೆ. ಇದರಲ್ಲಿ ಅಮೆರಿಕೆಯ ಪಾಲು ಪ್ರತಿಶತ 65ರಷ್ಟು . ಎರವಲು ಸೇವೆಯಿಂದ ಉತ್ಪಾದನಾ ವೆಚ್ಚ ಕಡಿಮೆಯಾಗುತ್ತಿದೆ. ಭಾರತದಲ್ಲಂತೂ ಪರಿಣತರು ಅತಿ ಕಡಿಮೆ ಸಂಬಳಕ್ಕೆ ಸಿಗುತ್ತಿದ್ದಾರೆ. ಇದರಿಂದ ಅಮೆರಿಕಾದಲ್ಲಿ ಉತ್ಪಾದನಾ ವೆಚ್ಚ ಸಹಜವಾಗಿ ಸಾಕಷ್ಟು ತಗ್ಗಲಿದ್ದು, ಉತ್ಪಾದನೆಯ ಪ್ರಮಾಣ ಯಥೇಚ್ಛವಾಗಲಿದೆ. ಹೀಗಾದಾಗ ಆರ್ಥಿಕವಾಗಿ ದೇಶ ಮುಂದುವರೆಯುತ್ತದೆ. ಆಮೇಲೆ ಉದ್ಯೋಗಾವಕಾಶಗಳು ಸಾಕಷ್ಟು ಸೃಷ್ಟಿಯಾಗಲಿವೆ ಎಂಬುದು ಕಾರ್ಬೆಟ್ ಭವಿಷ್ಯ.
30-40 ವರ್ಷಗಳಿಗಾಗುವಷ್ಟು ಬುದ್ಧಿವಂತರಿದ್ದಾರೆ : ಸಂಕಿರಣದಲ್ಲಿ ಮಾತಾಡಿದ ಭಾರತೀಯ ಸಾಫ್ಟ್ವೇರ್ ಟೆಕ್ನಾಲಜಿಕಲ್ ಪಾರ್ಕ್ (ಎಸ್ಟಿಪಿಐ) ನ ನಿರ್ದೇಶಕ ಬಿ.ವಿ.ನಾಯ್ಡು , ಭಾರತ ಉತ್ತಮ ಸಾಫ್ಟ್ವೇರ್ ಎರವಲು ಸೇವೆಯನ್ನು ಸಮರ್ಪಕವಾಗಿ ಒದಗಿಸುವುದರ ಜೊತೆಗೆ ಇತರ ದೇಶಗಳಿಗೆ ಹೋಲಿಸಿದರೆ 60 ರಿಂದ 65 ಪ್ರತಿಶತ ಕಡಿಮೆ ದರದಲ್ಲಿ ಕೆಲಸ ಮಾಡಿಕೊಡುತ್ತಿದೆ. ಐರ್ಲೆಂಡಿನ ಕಾಲ್ಸೆಂಟರ್ನಲ್ಲಿ 25 ಸಾವಿರ ವೃತ್ತಿಪರರು ಕೆಲಸ ಮಾಡುತ್ತಿದ್ದಾರೆ. ನಮ್ಮಲ್ಲಿ ಬೆಂಗಳೂರೊಂದರಲ್ಲೇ 56 ಸಾವಿರ ಮಂದಿ ಕಾಲ್ಸೆಂಟರ್ಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ನಮ್ಮಲ್ಲಿ ಪ್ರತಿಭೆಗಳು ಎಷ್ಟಿದ್ದಾರೆಂದರೆ, ಇನ್ನು 30- 40 ವರ್ಷಗಳಿಗಾಗುವಷ್ಟು ಮಾಹಿತಿ ತಂತ್ರಜ್ಞಾನಿ ಕೈಗಳಿಗೆ ಕೊರೆಯಿಲ್ಲ ಎಂದರು.
ಕಂಪ್ಯೂಟರ್ ಕೂಲಿಗಳೆನ್ನದಿರಿ : ಭಾರತದ ವೃತ್ತಿಪರರನ್ನು ಇತ್ತೀಚೆಗೆ ಸಾಫ್ಟ್ವೇರ್ ಕೂಲಿಗಳು ಎಂದು ಗೇಲಿ ಮಾಡಲಾಗುತ್ತಿದೆ. ಇದು ಸರಿಯಲ್ಲ. ಕಡಿಮೆ ಸಂಬಳಕ್ಕೆ ಕೆಲಸ ಮಾಡುವ ಅನೇಕ ಬುದ್ಧಿವಂತರು ನಮ್ಮಲ್ಲಿ ಇದ್ದಾರೆ. ಪರಿಸ್ಥಿತಿಗಳ ಒತ್ತಡ ಇದಕ್ಕೆ ಕಾರಣ. ಹಾಗಂತ ಅವರು ಕೂಲಿಗಳಲ್ಲ. ಅನುಭವ ಗಾಢವಾದಂತೆ, ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ನಿಜವಾದ ಪ್ರತಿಭೆಗಳಿಗೆ ಭವಿಷ್ಯ ಇದ್ದೇ ಇದೆ ಎಂದು ಮಾಹಿತಿ ತಂತ್ರಜ್ಞಾನ ಮತ್ತು ಪ್ರವಾಸೋದ್ಯಮ ಸಚಿವ ಡಿ.ಬಿ.ಇನಾಂದಾರ್ ಹೇಳಿದರು.
(ಪಿಟಿಐ)
ಮುಖಪುಟ / ಐಟಿ - ಬಿಟಿ
-
Karnataka Rain: ಕರ್ನಾಟಕದಲ್ಲಿ ಮಳೆ ಕೊರತೆ ಈ ಬಾರಿ ಈ ಭಾಗಗಳಲ್ಲಿ ಸಂಕಷ್ಟ, ಕುಡಿಯುವ ನೀರಿಗೂ ಹಾಹಾಕಾರ -
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
Bengaluru: ಪಬ್ನಲ್ಲಿ 150 ರೂ. ಕೊಟ್ಟು ಆರ್ಡರ್ ಮಾಡಿದ್ರೆ ಬಂದಿದ್ದು ಬರೀ ಹಪ್ಪಳ-ಸಂಡಿಗೆ: ದಂಗಾದ ಗ್ರಾಹಕ -
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ












Click it and Unblock the Notifications