ಅ.ನ.ಕೃ ‘ಸಂಧ್ಯಾರಾಗ’ ಮರು ಮುದ್ರಣ
ಅ.ನ.ಕೃ
‘ಸಂಧ್ಯಾರಾಗ’
ಮರು
ಮುದ್ರಣ
ಅ.19ರ
ಭಾನುವಾರ
28ನೇ
ಮುದ್ರಣ
ಭಾಗ್ಯ
ಕಾಣುತ್ತಿರುವ
‘ಸಂಧ್ಯಾರಾಗ’
ಬಿಡುಗಡೆ.
ಅ.ನ.ಕೃ ಅವರ ‘ಸಂಧ್ಯಾರಾಗ’ 28ನೇ ಬಾರಿ ಮರುಮುದ್ರಣ ಕಾಣುತ್ತಿದ್ದು , 28 ಬಾರಿ ಮುದ್ರಿತವಾಗಿರುವ ಕನ್ನಡದ ಅಪರೂಪದ ಕೃತಿಗಳಲ್ಲಿ ಸಂಧ್ಯಾರಾಗ ಒಂದಾಗಿದೆ.
ನೂರಕ್ಕೂ ಹೆಚ್ಚು ಕಾದಂಬರಿಗಳನ್ನು ಬರೆದಿರುವ ಅ.ನ.ಕೃ ಕನ್ನಡಿಗರಿಗೆ ಓದುವ ಹುಚ್ಚು ಹಿಡಿಸಿದವರು. ಒಂದೆಡೆ ಕನ್ನಡ ಜಾಗೃತಿ ಮೂಡಿಸಲು ನಾಡಿನಾದ್ಯಂತ ಮಿಂಚಿನಂತೆ ಸಂಚರಿಸುತ್ತಾ , ತಮ್ಮ ವಾಗ್ಝರಿಯಿಂದ ಕೇಳುಗರನ್ನು ಮಂತ್ರಮುಗ್ಧರಾಗಿಸುತ್ತಿದ್ದ ಅ.ನ.ಕೃ, ಇನ್ನೊಂದೆಡೆ ತಮ್ಮ ಕಾದಂಬರಿಗಳ ಮೂಲಕ ಓದುಗ ವಲಯವನ್ನು ವಿಸ್ತರಿಸುತ್ತಿದ್ದರು.
ಪ್ರಗತಿಶೀಲ ಪಂಥದ ಮುಂಚೂಣಿಯಲ್ಲಿದ್ದ ಅ.ನ.ಕೃ ಅವರ ಶ್ರೇಷ್ಠ ಕೃತಿ ಎನ್ನುವ ಅಗ್ಗಳಿಕೆಗೆ ‘ಸಂಧ್ಯಾರಾಗ’ ಪಾತ್ರವಾಗಿದೆ. ಸಂಗೀತಗಾರನ ಜೀವನದ ಏರಿಳಿತಗಳನ್ನು ದಾಖಲಿಸುವ ‘ಸಂಧ್ಯಾರಾಗ’ ಕನ್ನಡ ಸಾಹಿತ್ಯದಲ್ಲಿನ ಜನಪ್ರಿಯ ಕಾದಂಬರಿಗಳಲ್ಲೊಂದು. ‘ಸಂಧ್ಯಾರಾಗ’ ಸಿನಿಮಾ ಆಗಿಯೂ ಯಶಸ್ವಿಯಾಗಿದೆ. ಸಂಗೀತಗಾರ ಲಕ್ಷ್ಮಣನ ಪಾತ್ರದಲ್ಲಿ ವರನಟ ರಾಜ್ಕುಮಾರ್ ಅವಿಸ್ಮರಣೀಯ ಅಭಿನಯ ನೀಡಿದ್ದಾರೆ.
ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ. ಕೆ. ಚಂದ್ರಶೇಖರ್ ಅವರು ‘ಸಂಧ್ಯಾರಾಗ’ ಪುಸ್ತಕ ಬಿಡುಗಡೆ ಮಾಡುವರು. ಅನಕೃ ಪ್ರತಿಷ್ಠಾನದ ಅಧ್ಯಕ್ಷರು ಹಾಗೂ ಮಾಜಿ ಸಚಿವರಾದ ಹಾರನಹಳ್ಳಿ ರಾಮಸ್ವಾಮಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ವಿಜಯ ಕರ್ನಾಟಕ ದಿನಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕ ವಿಶ್ವೇಶ್ವರ ಭಟ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.
ಸಮಾರಂಭ
ನಡೆಯುವ
ಸ್ಥಳ
:
ಬಸವನಗುಡಿ
ನ್ಯಾಷನಲ್
ಕಾಲೇಜಿನ
ಡಾ.
ಎಚ್.
ಎನ್.
ಸಭಾಂಗಣ
ದಿನಾಂಕ
:
ಅಕ್ಟೋಬರ್
19ರ
ಭಾನುವಾರ
ಸಮಯ
:
ಬೆಳಿಗ್ಗೆ
10.30
ಅ.ನ.ಕೃಷ್ಣರಾಯರನ್ನು ನೆನಪಿಸಿಕೊಳ್ಳಲು ಒಂದು ಕಾರಣವಾಗುವ ಈ ಕಾರ್ಯಕ್ರಮಕ್ಕೆ ಸರ್ವರಿಗೂ ಸ್ವಾಗತ.
ಅ.ನ.ಕೃ. ಹಾಗೂ ಅವರ ಕೃತಿಗಳ ಬಗೆಗಿನ ವಿವರಗಳಿಗೆ ನೋಡಿ-
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು