ಪಾಕಿಸ್ತಾನಿ ಅಭಿಮಾನಿ ರಾಜಕಾರಣಿಗಳಿಗೆ ಲಾಲೂ ಕೊಟ್ಟ ಹಾಲು
ಪಾಕಿಸ್ತಾನಿ ಅಭಿಮಾನಿ ರಾಜಕಾರಣಿಗಳಿಗೆ ಲಾಲೂ ಕೊಟ್ಟ ಹಾಲು
ಲಾಲೂ ಪ್ರಸಾದ್ ಯಾದವ್ ಪಾಕಿಸ್ತಾನದಲ್ಲೀಗ ‘ವರ್ಲ್ಡ್ ಫೇಮಸ್ಸು’!
ಶಾಂತಿ ಸಂವಾದಕ್ಕೆಂದು ಭಾರತಕ್ಕೆ ಭೇಟಿ ಕೊಟ್ಟ ಪಾಕಿಸ್ತಾನದ 6 ಸದಸ್ಯರ ತಂಡದ ಇಬ್ಬರು ಲಾಲೂ ಮನೆ ಹುಡುಕಿಕೊಂಡು ಸೋಮವಾರ (ಅ. 13) ಪಾಟ್ನಾವರೆಗೆ ಪಾದ ಬೆಳೆಸಲು ಕಾರಣವಿತ್ತು. ಈ ಇಬ್ಬರೂ ಈಗ ಲಾಲೂ ಅಭಿಮಾನಿಗಳು. ಇವರಂತೆಯೇ ಪಾಕಿಸ್ತಾನದ ಹಲವಾರು ರಾಜಕಾರಣಿಗಳು ಇವತ್ತು ಲಾಲೂ ಆಲೂ ತೋರುವ ಪರಿಗೇ ತಲೆದೂಗುತ್ತಾರೆ. ಇತ್ತೀಚೆಗೆ ಪಾಕಿಸ್ತಾನಕ್ಕೆ ಹೋಗಿ ಬಂದ ಲಾಲೂ ಮೋಡಿ ಅಲ್ಲಿ ಹಾಗೆ ಕೆಲಸ ಮಾಡಿದೆ.
ಅಜೀಂ ಅವರಂತೂ ಲಾಲೂ ಹಿಂದೆ ಅವರ ಹೊಲ ಗದ್ದೆಗಳನ್ನೆಲ್ಲಾ ನೋಡಿಕೊಂಡು ಬಂದು, ಲಾಲೂ ಮನೆಯ ಹಿತ್ತಲ ಕೊಟ್ಟಿಗೆಯ ಹಸುವನ್ನು ಮೈದಡವುತ್ತಾ ನಿಂತರು. ತಾವು ಎಂಎಲ್ಎ ಆದ ಕಾಲದಿಂದಲೂ ಇರುವ ಆ ಹಸುವನ್ನು ಲಾಲೂ ತಮ್ಮದೇ ನಗೆ ಖದರಿನಲ್ಲಿ ಪರಿಚಯ ಮಾಡಿಕೊಟ್ಟರು. ‘ಇವಳಿಗೆ ಈಗ ವಯಸ್ಸಾಗಿದೆ. ಮೆಲ್ಲಗೆ ಮೈದಡವಿ’ ಅಂತ ಲಾಲೂ ಅಜೀಂ ಕೈಗೆ ಕೆನೆ ಹಾಲಿನ ಲೋಟ ಇಟ್ಟರು. ಬಿಹಾರದ ಮುಖ್ಯಮಂತ್ರಿ ರಾಬ್ಡಿ ದೇವಿ ಪಾಕಿ ಸ್ನೇಹಿತರಿಗೆ ನಮಸ್ಕರಿಸಿದರು. ‘ಬಾಭೀಜೀ.. ಲಾಲೂಜೀ ಕೆ ಸಾಥ್ ಆಪ್ ಜರೂರ್ ಪಾಕಿಸ್ತಾನ್ ಆಯಿಯೇ’ ಎಂಬ ಬುಲಾವನ್ನು ಮನ್ನಿಸಿದರು. ‘ಅಗ್ಲಿ ಬಾರ್ ಹಮ್ರಿ ಬೇಗಂ ಕೀ ಸಾಥ್ ಪಾಕ್ ಜರೂರ್ ಜಾಯೇಂಗೇ’ ಅಂತ ಲಾಲೂ ಹಾಲಿನ ಲೋಟವನ್ನು ಮೇಲೆತ್ತಿದರು.
ಭಾರತ ಹಾಗೂ ಪಾಕಿಸ್ತಾನದ ನಡುವೆ ಬೇಗ ಕ್ರಿಕೆಟ್ ಪಂದ್ಯಗಳನ್ನಾಡಿಸಬೇಕು. ಸರ್ಕಾರ ಈ ಬಗ್ಗೆ ತೀರ್ಮಾನ ತೆಗೆದುಕೊಂಡ ನಂತರ, ಮೊದಲ ಪಂದ್ಯವನ್ನು ಪಟ್ನಾದಲ್ಲೇ ಆಡಿಸಲು ನಾನು ತಯಾರ್ ಎಂದು ಲಾಲೂ ಹೇಳಿದಾಗ ಪಾಕಿ ಅಭಿಮಾನಿಗಳಿಂದ ಚಪ್ಪಾಳೆ.
ಲಾಲೂ ಕೈಗೆ ಅಜೀಂ ಅಪರೂಪದ ಉಡುಗೊರೆಯಾಗಿ ಮುಷರ್ರಫ್ ಜೊತೆಯಲ್ಲಿ ಖುದ್ದು ಲಾಲೂ ಇರುವ ದೊಡ್ಡ ಫೋಟೋ ಕೊಟ್ಟರು. ಅದರ ಮೇಲೆ ಮುಷರ್ರಫ್ ಸಹಿಯ ಸಹಿತ ಬರೆದಿದ್ದ ಒಕ್ಕಣೆ ನೋಡಿ ಅರೆಬರೆ ಅರ್ಥವಾದ ಆರ್ಜೆಡಿ ಸದಸ್ಯರೂ ಸಣ್ಣಗೆ ನಕ್ಕರು. ಮುಷರ್ರಫ್ ಬರೆದಿದ್ದ ಒಕ್ಕಣೆ ಹೀಗಿತ್ತು- To an artist of a politician.
ದೆಹಲಿಯಲ್ಲಿ ಬ್ರಿಟಿಷ್ ಕೌನ್ಸಿಲ್ ಆಯೋಜಿಸಿದ್ದ ವಿಚಾರ ಸಂಕಿರಣದಲ್ಲಿ ಭಾಗವಹಿಸಲು ಪಾಕಿಸ್ತಾನದ ತಂಡ ಬಂದಿತ್ತು. ಪಾಕಿಸ್ತಾನದಲ್ಲಿ ಲಾಲೂ ಎಷ್ಟು ಫೇಮಸ್ ಆಗಿದ್ದಾರೆಂದರೆ, ಅಲ್ಲಿನ ಟೀವಿ ಚಾನೆಲ್ಗಳು ಲಾಲೂ ಸಂದರ್ಶನವನ್ನು ಇವತ್ತೂ ಪದೇಪದೇ ಪ್ರಸಾರ ಮಾಡುತ್ತಿದೆಯಂತೆ.
ಮುಖಪುಟ / ವಾರ್ತೆಗಳು
-
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Karnataka Weather: ಇಂದು ರಾಜ್ಯದ ಹಲವೆಡೆ ಗುಡುಗು ಸಹಿತ ಅಕಾಲಿಕ ಮಳೆ, ಬೆಂಗಳೂರಿನಲ್ಲಿ ಹೇಗಿರಲಿದೆ ವಾತಾವರಣ? -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
Udaan Yatri Cafe: ಏರ್ಪೋರ್ಟ್ನಲ್ಲಿ ದುಬಾರಿ ಊಟಕ್ಕೆ ಬ್ರೇಕ್: 17 ಕಡೆ ಉಡಾನ್ ಕೆಫೆ ಆರಂಭ -
ಖಾಸಗಿ ಬಸ್ಗಳಿಗಾಗಿ ಹುಬ್ಬಳ್ಳಿ-ಮುಂಬೈ ಮಾರ್ಗದಲ್ಲಿ NWKRTC ಸಂಚಾರ ಸ್ಥಗಿತ? ನೆಟ್ಟಿಗರ ಆಕ್ರೋಶ












Click it and Unblock the Notifications