Get Updates
Get notified of breaking news, exclusive insights, and must-see stories!

ನೀನಾಸಂ ತಿರುಗಾಟದಲ್ಲಿ ಮೊದಲಗಿತ್ತಿ

ನೀನಾಸಂ ತಿರುಗಾಟದಲ್ಲಿ ಮೊದಲಗಿತ್ತಿ & ಅನಂತಮೂರ್ತಿ ಅವಸ್ಥೆ
ಅಕ್ಟೋಬರ್‌ 19 ಮತ್ತು 20ರಂದು ಬೆಂಗಳೂರಿನಲ್ಲಿ ನಾಟಕ ಪ್ರದರ್ಶನ

ಬೆಂಗಳೂರು : ನೀನಾಸಂ ಎಂದೇ ಪ್ರಸಿದ್ಧವಾದ ಹೆಗ್ಗೋಡಿನ ನೀಲಕಂಠೇಶ್ವರ ನಾಟ್ಯ ಸಂಘ ತನ್ನ ವಾರ್ಷಿಕ ತಿರುಗಾಟಕ್ಕೆ ಸಿದ್ಧವಾಗಿದ್ದು , ಬೆಂಗಳೂರಿನಲ್ಲಿ ಅ.19 ಹಾಗೂ 20ರಂದು ನಾಟಕಗಳನ್ನು ಪ್ರದರ್ಶಿಸಲಿದೆ.

ಅಕ್ಟೋಬರ್‌ 19ರಂದು ಅವಸ್ಥೆ ಹಾಗೂ ಅ.20ರಂದು ಮೊದಲಗಿತ್ತಿ ನಾಟಕಗಳನ್ನು ನೀನಾಸಂ ಪ್ರದರ್ಶಿಸಲಿದೆ. ಬೆಂಗಳೂರು ಲಲಿತಕಲಾ ಪರಿಷತ್‌ ಈ ಪ್ರದರ್ಶಗಳನ್ನು ಏರ್ಪಡಿಸಿದೆ.

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ.ಯು.ಆರ್‌.ಅನಂತಮೂರ್ತಿಯವರ ಅವಸ್ಥೆ ಕಾದಂಬರಿಯನ್ನು ಪ್ರಕಾಶ್‌ ಬೆಳವಾಡಿ ಅವರು ನಾಟಕ ರೂಪಕ್ಕೆ ಬದಲಿಸಿದ್ದು , ಬೆಳವಾಡಿಯವರೇ ನಾಟಕವನ್ನು ನಿರ್ದೇಶಿಸಿದ್ದಾರೆ. ವರ್ತಮಾನದ ತಾತ್ವಿಕ ಆಕೃತಿಯಾಂದನ್ನು ನಿರ್ಮಿಸುವ ಮಹತ್ವಾಕಾಂಕ್ಷೆಯ ಅವಸ್ಥೆ , ಪ್ರಸಿದ್ಧ ಸಮಾಜವಾದಿ ನೇತಾರ ಶಾಂತವೇರಿ ಗೋಪಾಲಗೌಡರ ಬದುಕು ಸಾಧನೆಗಳನ್ನು ಆಧರಿಸಿ ರಚಿತವಾಗಿದೆ. ಅವಸ್ಥೆ ಅನಂತಮೂರ್ತಿಯವರ ಅತ್ಯುತ್ತಮ ಕೃತಿಗಳಲ್ಲೊಂದು.

ಮೊದಲಗಿತ್ತಿ ನಾಟಕ ಅಸ್ಸಾಮಿ ಕಥೆಯಾಂದನ್ನು ಆಧರಿಸಿದ್ದು. ನಾಟಕರೂಪ ಹಾಗೂ ನಿರ್ದೇಶನ ಬಹರುಲ್‌ ಇಸ್ಲಾಂ ಅವರದ್ದು . ಗಂಡನಿಂದ ತಿರಸ್ಕೃತಳಾದ ಮುಸ್ಲಿಂ ಹೆಣ್ಣುಮಗಳು ಎದುರಿಸುವ ತಾಕಲಾಟಗಳ ಕಥೆ ಈ ನಾಟಕದ್ದು . ನೀನಾಸಂ ತಿರುಗಾಟದ ಕೃತಿಗಳೆಂದ ಮೇಲೆ ನಾಟಕಪ್ರಿಯರಿಗೆ ಹಬ್ಬವಿದ್ದಂತೆ. ಈ ಬಾರಿ ತಪ್ಪಿದರೆ, ಮತ್ತೆ ವರ್ಷ ಕಾಯಬೇಕು.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+