ನೀನಾಸಂ ತಿರುಗಾಟದಲ್ಲಿ ಮೊದಲಗಿತ್ತಿ
ನೀನಾಸಂ
ತಿರುಗಾಟದಲ್ಲಿ
ಮೊದಲಗಿತ್ತಿ
&
ಅನಂತಮೂರ್ತಿ
ಅವಸ್ಥೆ
ಅಕ್ಟೋಬರ್
19
ಮತ್ತು
20ರಂದು
ಬೆಂಗಳೂರಿನಲ್ಲಿ
ನಾಟಕ
ಪ್ರದರ್ಶನ
ಅಕ್ಟೋಬರ್ 19ರಂದು ಅವಸ್ಥೆ ಹಾಗೂ ಅ.20ರಂದು ಮೊದಲಗಿತ್ತಿ ನಾಟಕಗಳನ್ನು ನೀನಾಸಂ ಪ್ರದರ್ಶಿಸಲಿದೆ. ಬೆಂಗಳೂರು ಲಲಿತಕಲಾ ಪರಿಷತ್ ಈ ಪ್ರದರ್ಶಗಳನ್ನು ಏರ್ಪಡಿಸಿದೆ.
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ.ಯು.ಆರ್.ಅನಂತಮೂರ್ತಿಯವರ ಅವಸ್ಥೆ ಕಾದಂಬರಿಯನ್ನು ಪ್ರಕಾಶ್ ಬೆಳವಾಡಿ ಅವರು ನಾಟಕ ರೂಪಕ್ಕೆ ಬದಲಿಸಿದ್ದು , ಬೆಳವಾಡಿಯವರೇ ನಾಟಕವನ್ನು ನಿರ್ದೇಶಿಸಿದ್ದಾರೆ. ವರ್ತಮಾನದ ತಾತ್ವಿಕ ಆಕೃತಿಯಾಂದನ್ನು ನಿರ್ಮಿಸುವ ಮಹತ್ವಾಕಾಂಕ್ಷೆಯ ಅವಸ್ಥೆ , ಪ್ರಸಿದ್ಧ ಸಮಾಜವಾದಿ ನೇತಾರ ಶಾಂತವೇರಿ ಗೋಪಾಲಗೌಡರ ಬದುಕು ಸಾಧನೆಗಳನ್ನು ಆಧರಿಸಿ ರಚಿತವಾಗಿದೆ. ಅವಸ್ಥೆ ಅನಂತಮೂರ್ತಿಯವರ ಅತ್ಯುತ್ತಮ ಕೃತಿಗಳಲ್ಲೊಂದು.
ಮೊದಲಗಿತ್ತಿ ನಾಟಕ ಅಸ್ಸಾಮಿ ಕಥೆಯಾಂದನ್ನು ಆಧರಿಸಿದ್ದು. ನಾಟಕರೂಪ ಹಾಗೂ ನಿರ್ದೇಶನ ಬಹರುಲ್ ಇಸ್ಲಾಂ ಅವರದ್ದು . ಗಂಡನಿಂದ ತಿರಸ್ಕೃತಳಾದ ಮುಸ್ಲಿಂ ಹೆಣ್ಣುಮಗಳು ಎದುರಿಸುವ ತಾಕಲಾಟಗಳ ಕಥೆ ಈ ನಾಟಕದ್ದು . ನೀನಾಸಂ ತಿರುಗಾಟದ ಕೃತಿಗಳೆಂದ ಮೇಲೆ ನಾಟಕಪ್ರಿಯರಿಗೆ ಹಬ್ಬವಿದ್ದಂತೆ. ಈ ಬಾರಿ ತಪ್ಪಿದರೆ, ಮತ್ತೆ ವರ್ಷ ಕಾಯಬೇಕು.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು