ಬಸವಣ್ಣ ಹುಟ್ಟಿದ್ದು ಬಾಗೇವಾಡಿ ಅಲ್ಲ , ಇಂಗಳೇಶ್ವರ -ಚಿಮೂ
ಬಸವಣ್ಣ ಹುಟ್ಟಿದ್ದು ಬಾಗೇವಾಡಿ ಅಲ್ಲ , ಇಂಗಳೇಶ್ವರ -ಚಿಮೂ
ಸಂಶೋಧಕ ಡಾ. ಎಂ.ಚಿದಾನಂದ ಮೂರ್ತಿ ಕಂಡುಕೊಂಡಿರುವ ಬಸವ ಸತ್ಯ
ಗುರುವಾರ (ಅ. 09) ಸುದ್ದಿಗೋಷ್ಠಿಯಲ್ಲಿ ಚಿಮೂ ಮಾತಾಡುತ್ತಿದ್ದರು. ತಾವು ಇತ್ತೀಚೆಗೆ ನಡೆಸಿದ ಸಂಶೋಧನೆಯಲ್ಲಿ ಬಸವಣ್ಣನವರ ತಾಯಿಯ ಊರು ಇಂಗಳೇಶ್ವರವಾಗಿದ್ದು, ಆತ ಕೂಡ ಅಲ್ಲೇ ಹುಟ್ಟಿರುವ ಬಗ್ಗೆ ಮಾಹಿತಿ ಸಿಕ್ಕಿದೆ ಎಂದರು.
ಬಸವಣ್ಣನವರ ಪೂರ್ವಜರು ಈಗಲೂ ಇಂಗಳೇಶ್ವರದಲ್ಲೇ ವಾಸಿಸುತ್ತಿದ್ದು, ಅವರೆಲ್ಲ ಸ್ಮಾರ್ತ ಬ್ರಾಹ್ಮಣರಾಗಿಯೇ ಉಳಿದಿದ್ದಾರೆ. ವಿಷ್ಣುವಿನ ಜೊತೆಗೆ ಚಿಕ್ಕ ಲಿಂಗವನ್ನು ಪೂಜಿಸುವ ಅವರು ಶಿವಲಿಂಗ ಧರಿಸುತ್ತಿಲ್ಲ. ಬಾಗೇವಾಡಿಯ ಬಸವಣ್ಣನವರ ವಂಶಸ್ಥರ ಮನೆಯಲ್ಲಿ ‘ಬಸವಣ್ಣನವರು ಹುಟ್ಟಿದ ಮನೆ’ ಎಂದು ಬರೆದಿರುವುದು ತಪ್ಪು. ಬದಲಿಗೆ ‘ಬಸವಣ್ಣನವರು ವಾಸಿಸಿದ ಮನೆ’ ಎಂದೋ, ಅವರ ತಂದೆ ವಾಸಿಸಿದ ಮನೆ ಎಂದೋ ಬರೆಯಬೇಕು. ಇಂಗಳೇಶ್ವರದಲ್ಲಿ ‘ಬಸವಣ್ಣವರು ಹುಟ್ಟಿದ ಮನೆ’ ಎಂಬ ಫಲಕ ಹಾಕುವುದರ ಜೊತೆಗೆ, ಗಡಿ ಪ್ರದೇಶದ ಈ ಹಳ್ಳಿಯನ್ನು ಅಭಿವೃದ್ಧಿ ಪಡಿಸುವ ಅಗತ್ಯವಿದೆ ಎಂದು ಚಿಮೂ ಮನವಿ ಮಾಡಿದರು.
ತಮ್ಮ ಮೊದಲ ಹೆಂಡತಿ ಸಾವಪ್ಪಿದಾಗ, ಮಾದರಸ ಮಾದಲಾಂಬಿಕೆಯನ್ನು ಮದುವೆಯಾದರು. ಈಕೆ ಇಂಗಳೇಶ್ವರದ ಹೆಂಗಸು. ಬಸವಣ್ಣನವರು ಹುಟ್ಟಿದ್ದು ಮಾದಲಾಂಬಿಕೆಗೆ, ಅದೂ ಇಂಗಳೇಶ್ವರದಲ್ಲಿ. ಗುಡ್ಡ ಗಾಡಿನ ಈ ಹಳ್ಳಿಯ ಪ್ರಕೃತಿ ಸೌಂದರ್ಯದ ಜೊತೆ ಬೆಳೆದು ಶಾಂತ ಮನಸ್ಥಿತಿ ಬೆಳೆಸಿಕೊಂಡ ಬಸವಣ್ಣನವರು, ತಂದೆಯ ಊರು ಬಾಗೇವಾಡಿಯ ಅಗ್ರಹಾರದ ವಾತಾವರಣದಲ್ಲಿ ಜೀವನದ ವಾಸ್ತವ ಸತ್ಯಗಳನ್ನು ಕಂಡುಕೊಂಡರು ಎಂದು ಚಿದಾನಂದ ಮೂರ್ತಿ ಹೇಳಿದರು.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು
-
Karnataka Rain: ಕರ್ನಾಟಕದಲ್ಲಿ ಮಳೆ ಕೊರತೆ ಈ ಬಾರಿ ಈ ಭಾಗಗಳಲ್ಲಿ ಸಂಕಷ್ಟ, ಕುಡಿಯುವ ನೀರಿಗೂ ಹಾಹಾಕಾರ -
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
Bengaluru: ಪಬ್ನಲ್ಲಿ 150 ರೂ. ಕೊಟ್ಟು ಆರ್ಡರ್ ಮಾಡಿದ್ರೆ ಬಂದಿದ್ದು ಬರೀ ಹಪ್ಪಳ-ಸಂಡಿಗೆ: ದಂಗಾದ ಗ್ರಾಹಕ -
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ












Click it and Unblock the Notifications