ಗೋಹತ್ಯೆ ರಾಜಕೀಯ ಸಮಸ್ಯೆಯಲ್ಲ, ಆರ್ಥಿಕ ಸಂಕಷ್ಟ- ಮನೇಕ
ಗೋಹತ್ಯೆ ರಾಜಕೀಯ ಸಮಸ್ಯೆಯಲ್ಲ, ಆರ್ಥಿಕ ಸಂಕಷ್ಟ- ಮನೇಕ
ಹಸುಗಳ ಜೀವದಲ್ಲಿ ಏನೆಲ್ಲ ಜೈವಿಕ ಸಾರವಿದೆ ಓದಿ...
ಮನೇಕಾ ದೃಷ್ಟಿಕೋನ ಹೀಗಿದೆ...
ದಕ್ಷಿಣ ಭಾರತದಿಂದ ಕೊಂಡೊಯ್ಯುವ ಹಸುಗಳನ್ನು ಕೇರಳ ಮತ್ತು ಪಶ್ಚಿಮ ಬಂಗಾಳಕ್ಕೆ ಸಾಗಿಸಲಾಗುತ್ತದೆ. ಅಲ್ಲಿ ಅವನ್ನು ಕಡಿದು, ಲಕ್ಷ ಲಕ್ಷ ಟನ್ನುಗಟ್ಟಲೆ ಮಾಂಸವನ್ನು ಬಾಂಗ್ಲಾದೇಶಕ್ಕೆ ಅಕ್ರಮವಾಗಿ ಸಾಗಿಸಲಾಗುತ್ತಿದೆ. ಬಾಂಗ್ಲಾದೇಶದಿಂದ ಒಂದೇ ಒಂದು ಹಸು ಇಲ್ಲಿಗೆ ಆಮದಾಗುವುದಿಲ್ಲ. ಬದಲಿಗೆ ಇಲ್ಲಿನ ಹಸುಗಳ ಮಾಂಸ ಸದ್ದೇ ಇಲ್ಲದೆ ಗಡಿ ದಾಟುತ್ತಿದೆ.
ಬಾಂಗ್ಲಾಗೆ ಸಾಗಿದ ಗೋಮಾಂಸ 1 ಲಕ್ಷ ಟನ್ನು : ಇದು ಮುಂದುವರೆಯುತ್ತಾ ಹೋದರೆ ಹಳ್ಳಿಗಳ ಜೈವಿಕ ಸಮತೋಲನದಲ್ಲಿ ಸಹಜ ಏರುಪೇರಾಗುತ್ತದೆ. ಹೈನು ಪದಾರ್ಥಗಳ ಉತ್ಪಾದನೆ ತಗ್ಗುತ್ತದೆ. ಗೊಬ್ಬರಕ್ಕೆ ತೀರಾ ಅಗತ್ಯವಾದ ಹಸುವಿನ ಸಗಣಿಯೇ ಇಲ್ಲವಾದರೆ, ರೈತನ ಬೆಳೆ ಹೇಗೆ ಹಸನಾದೀತು? ಹೈನುಗಾರಿಕೆಗೂ ಕೃಷಿ ಕ್ಷೇತ್ರಕ್ಕೂ ಕೊಡು- ಕೊಳ್ಳುವಿಕೆಯ ಸಂಬಂಧ ಇದೆ. ಬಾಂಗ್ಲಾದೇಶಕ್ಕೆ ಒಂದು ಲಕ್ಷ ಟನ್ ಗೋಮಾಂಸ ರಫ್ತಾಗಿದೆ ಅನ್ನುವುದು ಸಣ್ಣ ವಿಷಯವಲ್ಲ. ನಾಳೆ ಇದು 2 ಲಕ್ಷವಾಗುತ್ತದೆ, ನಾಳಿದ್ದು ಮೂರು ಲಕ್ಷ.
ಹಳ್ಳಿಗಳ ವಿತ್ತ ವ್ಯವಸ್ಥೆಯೇ ಹಾಳಾಗುತ್ತೆ : ದಕ್ಷಿಣ ಭಾರತದ ರಾಜ್ಯಗಳಲ್ಲಿ ಕಳೆದ ಎರಡು ಮೂರು ವರ್ಷದಿಂದ ಬರಗಾಲ ಕಾಡುತ್ತಿದೆ. ಹಸುವಿಗೆ ಮೇವಿಲ್ಲದ ಬಡವರು ಚಿಕ್ಕಾಸಿನ ಆಸೆಗೆ ಅವನ್ನು ಮಾರುತ್ತಿದ್ದಾರೆ. ಇದು ಹೀಗೇ ಮುಂದುವರೆದು, ಆಮೇಲೆ ಮಳೆ ಬೆಳೆ ಆಗುತ್ತದೆ ಅಂತಿಟ್ಟುಕೊಳ್ಳೋಣ. ಆಗ ಹಳ್ಳಿಗಳಲ್ಲಿ ಹಸುಗಳ ಸಂಖ್ಯೆ ಸಾಕಷ್ಟು ಕ್ಷೀಣಿಸಿರುತ್ತದೆ. ಹೀಗಾಗಿ ಅಗತ್ಯ ಪ್ರಮಾಣದ ಜೈವಿಕ ಗೊಬ್ಬರ ಸಿಗೋದಿಲ್ಲ. ಒಂದು ಕಡೆ ಅಕ್ರಮ ಗೋಮಾಂಸದ ಸಾಗಣೆಯಿಂದ ಸರ್ಕಾರದ ಬೊಕ್ಕಸಕ್ಕೆ ನಷ್ಟ. ಇನ್ನೊಂದು ಕಡೆ ಹಳ್ಳಿಗಳ ಆರ್ಥಿಕ ಏರುಪೇರು.
ತಮಿಳುನಾಡಿನಲ್ಲಿ ಮುಖ್ಯಮಂತ್ರಿ ಜಯಲಲಿತಾ ಪ್ರಾಣಿ ಬಲಿಯನ್ನು ನಿಷೇಧಿಸಿದ್ದು ಶ್ಲಾಘನೀಯ ಕೆಲಸ. ಕರ್ನಾಟಕ, ಆಂಧ್ರಪ್ರದೇಶ, ಒರಿಸ್ಸಾ ರಾಜ್ಯಗಳಲ್ಲೂ ಈ ಕೆಲಸ ಆಗಬೇಕಿದೆ. ಪಿಎಫ್ಎ ಪ್ರಯತ್ನದಿಂದ ಕರ್ನಾಟಕದಲ್ಲಿ ಪ್ರಾಣಿ ಬಲಿಯ ಪ್ರಮಾಣವನ್ನು ತಗ್ಗಿಸುವ ಕೆಲಸ ಸಾಕಷ್ಟು ನಡೆದಿದೆ.
ಮರ್ಸಿಡೀಸ್ ಬೆಂಜ್ ಕಾರಲ್ಲಿ ಪ್ರಾಣಿ ಚರ್ಮ : ಮರ್ಸಿಡೀಸ್ ಬೆಂಜ್ ಕಾರಲ್ಲಿ ಪ್ರಾಣಿಗಳ ಚರ್ಮವನ್ನು ಬಳಸುತ್ತಾರೆ. ಅದಕ್ಕೇ ಅಂಥ ಕಾರು ಉತ್ಪಾದನೆಯನ್ನು ವಿರೋಧಿಸಿ ಪಿಎಫ್ಎ ಇತ್ತೀಚೆಗೆ ಪ್ರತಿಭಟನೆ ನಡೆಸಿತ್ತು. ಕೆಲವು ಕಡಿಮೆ ಬೆಲೆಯ ಮಾದರಿ ಕಾರುಗಳಲ್ಲಿ ಚರ್ಮ ಬಳಕೆ ನಿಷೇಧಿಸುವುದಾಗಿ ಕಂಪನಿ ಹೇಳಿತು. ಆದರೆ ಅದಕ್ಕೆ ನಾವು ಒಪ್ಪಲಿಲ್ಲ ಎಂದು ಮನೇಕಾ ಹೇಳಿದರು.
ಬೆಂಗಳೂರಿನ ಹೊರ ವಲಯದಲ್ಲಿ ವನ್ಯ ಪ್ರಾಣಿಗಳನ್ನು ಸಾಕಲು ದೊಡ್ಡ ಸೂರು ನಿರ್ಮಿಸುವ ಉದ್ದೇಶದಿಂದ ಪಶ್ಮಿನ ಎಂಬ ಸಂಸ್ಥೆಯ ಸಹಯೋಗದಲ್ಲಿ ಪಿಎಫ್ಎ ಕೈಯಲ್ಲಿ ಮಾಡಿದ ಶಾಲುಗಳ ಪ್ರದರ್ಶನ ಮತ್ತು ಮಾರಾಟವನ್ನು ಅಕ್ಟೋಬರ್ 10ರಿಂದ ಆಯೋಜಿಸಿದೆ. ಕೆಂಗೇರಿಯಲ್ಲಿ 6 ಎಕರೆ ಜಾಗದಲ್ಲಿ ಪ್ರಾಣಿ ಸೂರು ಈಗ ಇದ್ದು, ಅದನ್ನು ಇನ್ನಷ್ಟು ದೊಡ್ಡದು ಮಾಡುವುದು ಮನೇಕಾ ಕನಸು.
(ಪಿಟಿಐ)
ಗೋಹತ್ಯೆ ಬಗ್ಗೆ ನಿಮ್ಮ ಚಿಂತನೆಗಳೇನು?
ಮುಖಪುಟ / ವಾರ್ತೆಗಳು
-
Karnataka Rain: ಕರ್ನಾಟಕದಲ್ಲಿ ಮಳೆ ಕೊರತೆ ಈ ಬಾರಿ ಈ ಭಾಗಗಳಲ್ಲಿ ಸಂಕಷ್ಟ, ಕುಡಿಯುವ ನೀರಿಗೂ ಹಾಹಾಕಾರ -
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
Bengaluru: ಪಬ್ನಲ್ಲಿ 150 ರೂ. ಕೊಟ್ಟು ಆರ್ಡರ್ ಮಾಡಿದ್ರೆ ಬಂದಿದ್ದು ಬರೀ ಹಪ್ಪಳ-ಸಂಡಿಗೆ: ದಂಗಾದ ಗ್ರಾಹಕ -
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ












Click it and Unblock the Notifications