ಚಿತ್ರದುರ್ಗ ಜಿಲ್ಲೆ ಹಿರಿಯೂರಿನಲ್ಲಿ ಉರುವಲು ವಿದ್ಯುತ್ ಸ್ಥಾವರ
ಚಿತ್ರದುರ್ಗ
ಜಿಲ್ಲೆ
ಹಿರಿಯೂರಿನಲ್ಲಿ
ಉರುವಲು
ವಿದ್ಯುತ್
ಸ್ಥಾವರ
ವಿದ್ಯುತ್
ಸ್ಥಾವರಕ್ಕೆ
ಸ್ಥಳೀಯರ
ತೀವ್ರ
ವಿರೋಧ
ಸ್ಥಳೀಯರ ವಿರೋಧದ ನಡುವೆಯೇ ಈ ವಿದ್ಯುತ್ ಸ್ಥಾವರ ತಲೆಯೆತ್ತಿದ್ದು, ಅಕ್ಟೋಬರ್ ಅಂತ್ಯಕ್ಕೆ ವಿದ್ಯುತ್ ಉತ್ಪಾದನೆ ಆರಂಭವಾಗುವ ನಿರೀಕ್ಷೆ ಇದೆ. ಈ ಸ್ಥಾವರವು ಪ್ರತಿ ದಿನ 1500 ಟನ್ ಕಟ್ಟಿಗೆ ಉಪಯೋಗಿಸಿ 20 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.
ರೈತರ ಜಮೀನಿನಲ್ಲಿ ಉಳಿಯುವ ಕಸ ಕಡ್ಡಿ, ತೋಟದಲ್ಲಿನ ಗರಿಗಳು, ಸಿಪ್ಪೆಗಳನ್ನು ವಿದ್ಯುತ್ ಉತ್ಪಾದನೆಗೆ ಉಪಯೋಗಿಸುವುದರಿಂದಾಗಿ ರೈತರಿಗೆ ಇದು ಅನುಕೂಲಕರವಾಗಿದೆ. ಆರ್ಥಿಕವಾಗಿಯೂ ರೈತರಿಗೆ ನೆರವಾಗಬಲ್ಲುದು. ಈ ಸ್ಥಾವರಕ್ಕೆ 3. 62 ಲಕ್ಷ ಲೀಟರ್ ನೀರನ್ನು ಉಪಯೋಗಿಸಲಾಗುತ್ತದೆ. ಆದರೆ ಈ ನೀರನ್ನು ಪುನರ್ ಬಳಕೆ ಮಾಡಲು ಅವಕಾಶವಿದೆ. ಸ್ಥಾವರದಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಬಳಸುವುದರಿಂದ ಪರಿಸರಕ್ಕೇನೂ ಹಾನಿಯಾಗುವುದಿಲ್ಲ ಎಂದು ಕಂಪೆನಿ ಸ್ಥಳೀಯರ ವಿರೋಧಕ್ಕೆ ಉತ್ತರಿಸುತ್ತಿದೆ.
ಆದರೆ ಉರುವಲು ಆಧಾರಿತ ವಿದ್ಯುತ್ ಸ್ಥಾವರ ಎಂದ ಮೇಲೆ ಅನಿವಾರ್ಯವಾಗಿ ಮರಗಿಡಗಳನ್ನು ಕಡಿಯಬೇಕಾಗುತ್ತದೆ. ಇದರಿಂದ ಪರಿಸರಕ್ಕೆ ಹಾನಿಯಾಗುವುದೇ ಹೆಚ್ಚು ಎಂದು ಸ್ಥಳೀಯ ರೈತರು ಈ ಸ್ಥಾವರನ್ನು ವಿರೋಧಿಸುತ್ತಾರೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು