ತ್ವರಿತ ಅಲರ್ಟ್ ಗಳಿಗಾಗಿ
For Daily Alerts
‘ಪರಂಪರೆ ನಗರ’ವಾಗಿ ಮೈಸೂರನ್ನು ರಕ್ಷಿಸಲು ಶೀಘ್ರವೇ ಮಸೂದೆ
‘ಪರಂಪರೆ
ನಗರ’ವಾಗಿ
ಮೈಸೂರನ್ನು
ರಕ್ಷಿಸಲು
ಶೀಘ್ರವೇ
ಮಸೂದೆ
ಜಯಪುರ
ಮಾದರಿಯಲ್ಲಿ
ಮೈಸೂರಿನ
ಉದ್ಧಾರಕ್ಕೆ
ಕೃಷ್ಣ
ಸೂತ್ರ
ಸೋಮವಾರ (ಅ. 06) ಸುದ್ದಿಗಾರರ ಜೊತೆ ಮಾತನಾಡಿದ ಕೃಷ್ಣ, ರಾಜಾಸ್ಥಾನದ ಜಯಪುರವನ್ನು ಪರಂಪರೆ ನಗರ ಎಂದು ಘೋಷಿಸಿ ಅಲ್ಲಿನ ಸಾಂಸ್ಕೃತಿ ತಾಣಗಳನ್ನು ರಕ್ಷಿಸಲು ಮಸೂದೆ ಮಾಡಲಾಗಿದೆ. ಕಂದಾಯ ಇಲಾಖೆ ಕಾರ್ಯದರ್ಶಿಗಳು ಜಯಪುರಕ್ಕೆ ಹೋಗಿ, ಅಲ್ಲಿನ ಸ್ಮಾರಕ- ಅರಮನೆ ಮೊದಲಾದ ಜಾಗೆಗಳನ್ನು ಅಧ್ಯಯನ ಮಾಡಿ, ಅಲ್ಲಿನ ವ್ಯವಸ್ಥೆಯ ಬಗ್ಗೆ ಕೂಲಂಕಷ ವರದಿ ನೀಡಲಿದ್ದಾರೆ. ಅದನ್ನು ಆಧರಿಸಿ ಮಸೂದೆ ಸಿದ್ಧಪಡಿಸುತ್ತೇವೆ ಎಂದರು.
ಜಗನ್ಮೋಹನ ಅರಮನೆ, ಮೈಸೂರು ಅರಮನೆ ಮೊದಲಾದ ಭವ್ಯ ಸ್ಥಳಗಳ ಸಂರಕ್ಷಣೆಗೆ ಮಸೂದೆ ಒತ್ತು ಕೊಡಲಿದೆ. ಈ ಭವ್ಯ ಕಟ್ಟಡಗಳ ಸುತ್ತ ಯಾವುದೇ ಹೊಸ ಕಟ್ಟಡ ಕಟ್ಟುವುದನ್ನು ತಪ್ಪಿಸುವ ಹಾಗೂ ಹಳೆಯ ಕಟ್ಟಡಗಳನ್ನು ಉರುಳಿಸುವುದು ಅಥವಾ ಪುನರುಜ್ಜೀವನಗೊಳಿಸುವ ಕೆಲಸವನ್ನು ಮಸೂದೆ ಬಿಡಿಸಿ ಹೇಳಲಿದೆ ಎಂದು ಕೃಷ್ಣ ತಿಳಿಸಿದರು.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು
Comments
Story first published: Friday, January 24, 2003, 5:30 [IST]