ಸೆಪ್ಟೆಂಬರ್ 3ನೇ ತಾರೀಕು ಬೆಂಗಳೂರಲ್ಲಿ ಭಾರೀ ‘ಹಿಜ್ರಾ ಹಬ್ಬ’
ಸೆಪ್ಟೆಂಬರ್ 3ನೇ ತಾರೀಕು ಬೆಂಗಳೂರಲ್ಲಿ ಭಾರೀ ‘ಹಿಜ್ರಾ ಹಬ್ಬ’
ಮೂಲಭೂತ ಹಕ್ಕು ಪಡೆಯುವ ಉಮೇದಿಯ ಸಾಂಸ್ಕೃತಿಕ ಹಬ್ಬವಿದು
ಹಿಜ್ರಾಗಳನ್ನು ಮನುಷ್ಯರಂತೆ ಕಾಣಿರಿ. ಪೊಲೀಸರೇ ಇನ್ನಾದರೂ ಸುಮ್ಮನಾಗಿರಿ.. ಮೊದಲಾದ ಮೂಲಭೂತ ಹಕ್ಕುಗಳ ಪಡೆಯುವ ಧ್ವನಿ ಎತ್ತುವುದು ‘ಹಿಜ್ರಾ ಹಬ್ಬ’ದ ಮೂಲ ಉದ್ದೇಶ. ಕೇರಳ, ತಮಿಳುನಾಡು, ಆಂಧ್ರಪ್ರದೇಶ, ಮಹಾರಾಷ್ಟ್ರ, ಗೋವಾ ಮೊದಲಾದ ಕಡೆಯಿಂದ ಹಿಜ್ರಾಗಳು ಬಂದು ಕರ್ನಾಟಕದವರ ಜೊತೆ ಸೇರಿ ಈ ಹಬ್ಬ ನಡೆಸಲಿದ್ದಾರೆ.
ಬೆಂಗಳೂರಲ್ಲಿ ಒಟ್ಟು 2 ಸಾವಿರ ಹಿಜ್ರಾಗಳಿದ್ದಾರೆ. ಎಲ್ಲರೂ ಒಂದಲ್ಲ ಒಂದು ರೀತಿ ಶೋಷಣೆಗೆ ಈಡಾಗುತ್ತಿರುವವರೇ. ತಮ್ಮ ಹಕ್ಕು ಪಡೆಯುವ ಸಲುವಾಗಿ ಇವರು ಸಾಂಸ್ಕೃತಿಕ ಉತ್ಸವ ಮಾಡುವ ಜರೂರತ್ತು ಈಗ ಇದೆ. ಅದಕ್ಕಾಗಿ ‘ವಿವಿಧ’ ಎಂಬ ಸ್ವಾಯತ್ತ ಗುಂಪು ಹಿಜ್ರಾಗಳಿಗೆ ಆಸರೆಯಾಗಿದೆ. ಅಣಕಿಗೆ, ಪೊಲೀಸರ ತುಳಿತಕ್ಕೆ ಬಲಿಯಾಗುತ್ತಿರುವ ಈ ಮಂದಿಗೆ ಸಾಮಾಜಿಕ ಸಮಾನತೆಯ ಅಗತ್ಯವಿದೆ. ಸಾಕಷ್ಟು ಸಂಖ್ಯೆಯಲ್ಲಿ ಹಿಜ್ರಾಗಳು ಸೇರಿ, ಸಾಂಸ್ಕೃತಿಕ ಪ್ರತಿಭೆಗಳನ್ನು ತೋರುವುದಲ್ಲದೆ ತಮ್ಮ ಹಕ್ಕುಗಳ ರಕ್ಷಣೆ ಕೋರಿ ಸರ್ಕಾರಕ್ಕೆ ಮನವಿಯನ್ನೂ ಸಲ್ಲಿಸಲಿದ್ದಾರೆ.
ಕಳೆದ ವರ್ಷದಿಂದ ಈ ಹಬ್ಬ ಆಚರಿಸುತ್ತಿದ್ದೇವೆ. ಈ ವರ್ಷ ಹಬ್ಬ ಇನ್ನೂ ರಂಗೇರಲಿದೆ. ಹೀಗೆ ಮಾಡುವುದರಿಂದ ನಮಗೂ ಒಂದು ಅಸ್ತಿತ್ವ ಸಿಗುತ್ತದೆ. ಸರ್ಕಾರಕ್ಕೆ ನಮ್ಮಂಥವರ ಸಮಸ್ಯೆ ಇಂಚಿಂಚೂ ತಿಳಿಯುವಂತಾಗುತ್ತದೆ ಎನ್ನುತ್ತಾರೆ ‘ವಿವಿಧ’ ಸದಸ್ಯರಾದ ವಿದ್ಯಾ, ಚಾಂದಿನಿ, ಸುಮಾ ಮತ್ತಿತರರು.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು
-
Karnataka Rain: ಕರ್ನಾಟಕದಲ್ಲಿ ಮಳೆ ಕೊರತೆ ಈ ಬಾರಿ ಈ ಭಾಗಗಳಲ್ಲಿ ಸಂಕಷ್ಟ, ಕುಡಿಯುವ ನೀರಿಗೂ ಹಾಹಾಕಾರ -
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
Bengaluru: ಪಬ್ನಲ್ಲಿ 150 ರೂ. ಕೊಟ್ಟು ಆರ್ಡರ್ ಮಾಡಿದ್ರೆ ಬಂದಿದ್ದು ಬರೀ ಹಪ್ಪಳ-ಸಂಡಿಗೆ: ದಂಗಾದ ಗ್ರಾಹಕ -
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ












Click it and Unblock the Notifications