ಮಲೆನಾಡ ಕೂಸು ಕುವೆಂಪು ವಿವಿ ಮಹತ್ವಾಕಾಂಕ್ಷೆಯ ಯೋಜನೆಗಳು
ಮಲೆನಾಡ ಕೂಸು ಕುವೆಂಪು ವಿವಿ ಮಹತ್ವಾಕಾಂಕ್ಷೆಯ ಯೋಜನೆಗಳು
ಕಾರ್ಪೊರೇಟ್ ಇಂಗ್ಲಿಷ್, ರೈನ್ ಹಾರ್ವೆಸ್ಟಿಂಗ್ನಂಥ ಗಮನಾರ್ಹ ವಿಷಯಗಳ ಕೋರ್ಸುಗಳು ಶುರುವಾಗಲಿವೆ
ಡಿಸೆಂಬರ್ 29, 2003ರಿಂದ ಡಿಸೆಂಬರ್ 29, 2004ರವರೆಗೆ ನಾಡಿನಾದ್ಯಂತ ಕುವೆಂಪು ಶತಮಾನೋತ್ಸವ ಜೋರಾಗಿ ನಡೆಯುವ ಸಂದರ್ಭವನ್ನು ಅವರ ಹೆಸರಿನದೇ ಆದ ವಿಶ್ವವಿದ್ಯಾಲಯದ ಅಭಿವೃದ್ಧಿಗೆ ನಡೆಯನ್ನಾಗಿ ಪರಿವರ್ತಿಸುವುದು ಕುಲಸಚಿವ ಪ್ರವೀಣ್ ಚಂದ್ರ ಹಾಗೂ ಬಳಗದ ಉಮೇದಿ.
ಗುರುವಾರ (ಆ.28) ನಗರದ ಪ್ರೆಸ್ ಕ್ಲಬ್ಬಿನಲ್ಲಿ ಸುದ್ದಿಗೋಷ್ಠಿ ನಡೆಸಿ ಕುವೆಂಪು ವಿವಿ ತನ್ನ ಯೋಜನೆಗಳನ್ನು ವಿವರಿಸಿತು. ಗೋಷ್ಠಿಯಲ್ಲಿ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಕೆ.ಚಿದಾನಂದ ಗೌಡ, ವಿವಿ ಕುಲಸಚಿವ ಪ್ರವೀಣ್ ಚಂದ್ರ, ದೂರ ಶಿಕ್ಷಣ ಸಮಿತಿಯ ನಿರ್ದೇಶಕ ಎಸ್.ಎ.ಬಾರಿ, ವಿವಿಯ ಡಾ.ಬಿ.ಆರ್.ಅಂಬೇಡ್ಕರ್ ಕೇಂದ್ರದ ನಿರ್ದೇಶಕ ಜೆ.ಎಸ್.ಸದಾನಂದ, ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದ ಮಾನಸ ಶಿಕ್ಷಣ ಪ್ರತಿಷ್ಠಾನದ ನಿರ್ದೇಶಕ ಪ್ರೊ.ಕೆ.ಎ.ಅಶೋಕ್ ಪೈ, ಇಂಗ್ಲಿಷ್ ಸ್ನಾತಕೋತ್ತರ ಶಿಕ್ಷಣ ವಿಭಾಗದ ಅಧ್ಯಕ್ಷ ಪ್ರೊ.ರಾಜೇಂದ್ರ ಚೆನ್ನಿ ಹಾಗೂ ಶಿಕಾರಿಪುರ ಹರಿಹರೇಶ್ವರ ಹಾಜರಿದ್ದರು.
ಕಿರಿಯ ವಿಶ್ವವಿದ್ಯಾಲಯವಾದ ಕುವೆಂಪು ವಿವಿ, 10 ದಶಲಕ್ಷ ಡಾಲರ್ ವೆಚ್ಚದ ಹಿರಿಯ ಸ್ವರೂಪದ ಯೋಜನೆಗಳನ್ನು ಹಮ್ಮಿಕೊಂಡಿದೆ. ಅವುಗಳೆಂದರೆ-
- ಅಧ್ಯಯನ ಸಂಶೋಧನೆ ಕೇಂದ್ರಗಳ ಸ್ಥಾಪನೆ, ಹೊಸ ಶೈಕ್ಷಣಿಕ ವಿಷಯಗಳನ್ನು ಪ್ರಾರಂಭಿಸುವುದು, ಹೊಸ ಕಟ್ಟಡಗಳನ್ನು ಕಟ್ಟುವುದು ಮತ್ತು ಮೂಲಭೂತಸೌಕರ್ಯ ಅಭಿವೃದ್ಧಿ ಸೇರಿವೆ.
- ಪಶ್ಚಿಮ ಘಟ್ಟದ ಮಧ್ಯದಲ್ಲಿ ವಿಶ್ವವಿದ್ಯಾಲಯ ಇರುವುದರಿಂದ ಜೈವಿಕ ವೈವಿಧ್ಯ ಅಧ್ಯಯನಕ್ಕೆ ಹೇಳಿ ಮಾಡಿಸಿದ ತಾಣ. ಜಗತ್ತಿನ ಯಾರೇ ಇಲ್ಲಿಗೆ ಬಂದು ಅಧ್ಯಯನ ನಡೆಸಲು ಅನುಕೂಲವಾಗುವಂಥ ಕೇಂದ್ರ ಸ್ಥಾಪಿಸುವುದು ವಿ.ವಿ.ಯ ಕನಸುಗಳಲ್ಲೊಂದು. ಜೈವಿಕ ವಿಜ್ಞಾನ, ಗಣಕ ವಿಜ್ಞಾನ, ಸ್ಥಳೀಯ ಸಂಸ್ಕೃತಿಗಳ ಅಧ್ಯಯನ, ಭಾರತೀಯ ಸಂಸ್ಕೃತಿ ಹಾಗೂ ತತ್ತ್ವಶಾಸ್ತ್ರ ಅಧ್ಯಯನ, ಸ್ಕೂಲ್ ಆಫ್ ಮ್ಯಾನೇಜ್ಮೆಂಟ್, ಅಂಬೇಡ್ಕರ್ ಕುರಿತ ಅಧ್ಯಯನ ಹಾಗೂ ತೌಲನಿಕ ಮತ್ತು ಕನ್ನಡ ಅಧ್ಯಯನ ಮಾಡಬಹುದಾದ ಕನ್ನಡ ಭಾರತಿ- ಇವು ವಿಶ್ವವಿದ್ಯಾಲಯ ಸ್ಥಾಪಿಸಬೇಕೆಂದಿರುವ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರಗಳು.
- ವಿವಿಧ ವಿಷಯಗಳಲ್ಲಿ ಸ್ನಾತಕೋತ್ತರ, ಡಿಪ್ಲೊಮ ಮೊದಲಾದ ಹೊಸ ಕೋರ್ಸುಗಳನ್ನು ವಿ.ವಿ. ಪ್ರಾರಂಭಿಸಬೇಕೆಂದಿದೆ. ಈ ಪೈಕಿ ಮೆಡಿಸಿನಲ್ ಪ್ಲಾಂಟ್ಸ್, ವಾಟರ್ ಮ್ಯಾನೇಜ್ಮೆಂಟ್, ಕಾರ್ಪೊರೇಟ್ ಇಂಗ್ಲಿಷ್, ರೈನ್ ಹಾರ್ವೆಸ್ಟಿಂಗ್ ಗಮನಾರ್ಹವಾದ ವಿಷಯಗಳು.
- ಎರಡೂವರೆ ಕೋಟಿ ರುಪಾಯಿ ವೆಚ್ಚದಲ್ಲಿ ಕುವೆಂಪು ಶತಮಾನೋತ್ಸವ ಭವನ ನಿರ್ಮಿಸುವುದು.
ಕುವೆಂಪು ವಿಶ್ವವಿದ್ಯಾಲಯ ಸಕಲರ ಸಹಭಾಗಿತ್ವಕ್ಕೆ ಆಮಂತ್ರಣ ಕೊಟ್ಟಿದೆ. ಎನ್ಆರ್ಐಗಳು ಈ ವಿ.ವಿ.ಗೆ ಹೀಗೆ ಸಹಾಯ ಮಾಡಬಹುದು-
- ದೇಣಿಗೆ ಕೊಡುವುದು
- ಬ್ಲಾಕ್ಗಳನ್ನು ಪ್ರಾಯೋಜನೆ ಮಾಡುವುದು
- ಚಿನ್ನದ ಪದಕಗಳನ್ನು ಮಾಡಿಸಿ ಕೊಡುವುದು
- ವಿಶ್ವವಿದ್ಯಾಲಯಕ್ಕೆ ಬಂದು ಪಾಠ ಮಾಡುವುದು.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು
-
Karnataka Rain: ಕರ್ನಾಟಕದಲ್ಲಿ ಮಳೆ ಕೊರತೆ ಈ ಬಾರಿ ಈ ಭಾಗಗಳಲ್ಲಿ ಸಂಕಷ್ಟ, ಕುಡಿಯುವ ನೀರಿಗೂ ಹಾಹಾಕಾರ -
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
Bengaluru: ಪಬ್ನಲ್ಲಿ 150 ರೂ. ಕೊಟ್ಟು ಆರ್ಡರ್ ಮಾಡಿದ್ರೆ ಬಂದಿದ್ದು ಬರೀ ಹಪ್ಪಳ-ಸಂಡಿಗೆ: ದಂಗಾದ ಗ್ರಾಹಕ -
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ












Click it and Unblock the Notifications