ಅವಳಿನಗರದಲ್ಲಿ ವರಾಹ ವರಾತ! ಹಂದಿಯಾಡೆಯರಿಗೆ ಡೆಡ್ಲೈನು
ಅವಳಿನಗರದಲ್ಲಿ ವರಾಹ ವರಾತ! ಹಂದಿಯಾಡೆಯರಿಗೆ ಡೆಡ್ಲೈನು
‘ಆಗಸ್ಟ್ 28ರೊಳಗೆ ಹಂದಿಗಳನ್ನು ನಗರಗಳಿಂದ ಹೊರಕ್ಕೆ ಸಾಗಿಸಬೇಕು’
ಅವಳಿ ನಗರದಲ್ಲಿ ಹಂದಿ ಸಾಕಣೆಯನ್ನು ವ್ಯಾಪಾರವನ್ನಾಗಿ ಇಟ್ಟುಕೊಂಡ ಅನೇಕರಿದ್ದಾರೆ. ಕೈತುಂಬಾ ಲಾಭ ತಂದುಕೊಡುವ ಈ ವ್ಯಾಪಾರ ಈಗ ಹಂದಿಗಳ ಸಂಖ್ಯೆಯನ್ನೂ ಹೆಚ್ಚಿಸಿದೆ. ಪರಿಣಾಮ ಬೀದಿ ಹಂದಿಗಳ ಕಾಟ. ಕೊಚ್ಚೆಯನ್ನು ಮೈತುಂಬಾ ಮೆತ್ತಿಕೊಂಡು ನಡುರಸ್ತೆಯಲ್ಲಿ ಟ್ರಾಫಿಕ್ ನಿಯಂತ್ರಕರಂತೆ ಕೆಲವು ಹಂದಿಗಳು ನಿಲ್ಲುತ್ತವೆ. ಇನ್ನು ಕೆಲವು ಮಾರುಕಟ್ಟೆಯಲ್ಲಿ ‘ಶಾಪಿಂಗ್’ ಮಾಡುತ್ತ ಹೆಂಗಸರ ಮೈ ಸೋಕಿ ಹಿಂಸಿಸುತ್ತವೆ. ಈ ಹಂದಿಗಳ ಮಾಲೀಕರು ಎಲ್ಲೋ ಇರುತ್ತಾರೆ. ಅವುಗಳನ್ನು ಹದ್ದುಬಸ್ತಿಗೆ ತರುವುದು ಯಾರಿಗೂ ಬೇಡವಾಗಿದೆ. ಇದು ನಗರಸಭೆಯ ಮೊಗಸಾಲೆಗೆ ದೂರಿನ ರೂಪದಲ್ಲಿ ಹೋಗಿದ್ದು, ಈ ಸಮಸ್ಯೆಯ ಗಂಭೀರ ಚರ್ಚೆ ನಡೆಯಿತು.
ಹುಬ್ಬಳ್ಳಿ- ಧಾರವಾಡದ ಹಂದಿಗಳ ಒಡೆಯರು, ಕೌನ್ಸಿಲರುಗಳು ಮತ್ತು ಕಾರ್ಪೊರೇಷನ್ ಅಧಿಕಾರಿಗಳು ಇತ್ತೀಚೆಗೆ ನಡೆದ ಹಂದಿ ತುರ್ತು ಸಭೆಯಲ್ಲಿ ಭಾಗವಹಿಸಿದ್ದರು. ಆಗಸ್ಟ್ 28ನೇ ತಾರೀಕಿನೊಳಗೆ ಹಂದಿಗಳನ್ನು ನಗರಗಳ ವ್ಯಾಪ್ತಿಯಿಂದ ಹೊರಕ್ಕೆ ಸಾಗಿಸಬೇಕೆಂದು ನಗರಸಭೆ ಸಭೆಯಲ್ಲಿ ಹಂದಿ ಮಾಲೀಕರಿಗೆ ಆದೇಶ ಕೊಟ್ಟಿತು. ಈ ಕೆಲಸ ಅಷ್ಟು ಸುಲಭವಲ್ಲ. 3 ತಿಂಗಳಾದರೂ ಟೈಂ ಕೊಡಿ ಎಂದು ಹಂದಿಯಾಡೆಯರು ಅಲವತ್ತುಕೊಂಡರು. ಆದರೆ ಮೇಯರ್ ಪಾಟೀಲ್ ಹಂದಿ ಮಾಲೀಕರ ಮನವಿಗೆ ಜಗ್ಗಲಿಲ್ಲ. ಒಂದು ವೇಳೆ ಆ. 28ರೊಳಗೆ ಹಂದಿಗಳನ್ನು ನಗರದ ಹೊರಕ್ಕೆ ಸಾಗಿಸದಿದ್ದರೆ. ಅವುಗಳನ್ನು ಹರಾಜು ಕೂಗಿ ಮಾರುತ್ತೇವೆ ಎಂದರು.
ಡೆಂಗ್ಯೂ ಜ್ವರದ ಭೀತಿ ಅವಳಿ ನಗರದಲ್ಲೂ ಇದ್ದು, ಬೀದಿ ಹಂದಿಗಳು ಕೂಡ ಈ ರೋಗಕ್ಕೆ ಕಾರಣವಾಗುವ ಆತಂಕವಿದೆ. ಹೀಗಾಗಿ ನಾಗರಿಕರ ಸಮಸ್ಯೆಯನ್ನು ತ್ವರಿತವಾಗಿ ಬಗೆಹರಿಸಬೇಕಾಗಿದೆ ಎಂದು ಪಾಟೀಲ್ ಹೇಳಿದರು. ಒಂದು ವೇಳೆ ಹಂದಿಗಳನ್ನು ಊರ ಹೊರಕ್ಕೆ ಸಾಗಿಸುವುದು ಕಷ್ಟವಾದರೆ, ಆ ವ್ಯಾಪಾರ ಬಿಟ್ಟು ಬೇರೆ ಕೆಲಸಕ್ಕೆ ಹಂದಿ ಮಾಲೀಕರು ಕೈಹಾಕಲಿ. ಅದಕ್ಕೆ ಬೇಕಾದ ಸಹಾಯವನ್ನು ನಗರಸಭೆ ಮಾಡಲು ಸಿದ್ಧ ಎಂದರು.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು
-
Karnataka Rain: ಕರ್ನಾಟಕದಲ್ಲಿ ಮಳೆ ಕೊರತೆ ಈ ಬಾರಿ ಈ ಭಾಗಗಳಲ್ಲಿ ಸಂಕಷ್ಟ, ಕುಡಿಯುವ ನೀರಿಗೂ ಹಾಹಾಕಾರ -
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
Bengaluru: ಪಬ್ನಲ್ಲಿ 150 ರೂ. ಕೊಟ್ಟು ಆರ್ಡರ್ ಮಾಡಿದ್ರೆ ಬಂದಿದ್ದು ಬರೀ ಹಪ್ಪಳ-ಸಂಡಿಗೆ: ದಂಗಾದ ಗ್ರಾಹಕ -
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ












Click it and Unblock the Notifications