ಕ್ರಿಕೆಟ್ ವ್ಯಾಯಾಮ ಶಿಬಿರ ಮುಕ್ತಾಯ, ಸೆ.1ರಿಂದ ನೆಟ್ ಅಭ್ಯಾಸ
ಕ್ರಿಕೆಟ್ ವ್ಯಾಯಾಮ ಶಿಬಿರ ಮುಕ್ತಾಯ, ಸೆ.1ರಿಂದ ನೆಟ್ ಅಭ್ಯಾಸ
ನಾವೀಗ ಸಮರ್ಥರು, ಗೆಲುವು ನಮ್ಮದೇ- ಗಂಗೂಲಿ
ನಗರದಲ್ಲಿ ಮಂಗಳವಾರ (ಆ।26) ದೈಹಿಕ ವ್ಯಾಯಾಮ ಶಿಬಿರ ಮುಗಿದ ಸಂದರ್ಭದಲ್ಲಿ ಸುದ್ದಿಗಾರರ ಜೊತೆ ಗಂಗೂಲಿ ಮಾತಾಡಿದರು. ಯೋಗ ಹಾಗೂ ವ್ಯಾಯಾಮ ಶಿಬಿರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಗಂಗೂಲಿ, ನ್ಯೂಜಿಲೆಂಡ್ ವಿರುದ್ಧ ನಾವು ಗೆದ್ದೇ ಗೆಲ್ಲುತ್ತೇವೆ ಎಂದು ಪುನರುಚ್ಚರಿಸಿದರು.
ವೀರೇಂದ್ರ ಶೆವಾಗ್, ಆಶಿಶ್ ನೆಹ್ರಾ ಹಾಗೂ ಹರ್ಭಜನ್ ಸಿಂಗ್ ಗಾಯಾಳುಗಳಾಗಿರುವುದು ತಲೆಕೆಡಿಸಿಕೊಳ್ಳುವಂಥ ವಿಚಾರವಲ್ಲ. ಅವರು ಬೇಗ ಚೇತರಿಸಿಕೊಳ್ಳುತ್ತಿದ್ದು, ಪಂದ್ಯಗಳ ಹೊತ್ತಿಗೆ ಸಂಪೂರ್ಣ ಸಮರ್ಥರಾಗುವರು. ಕ್ರಿಕೆಟ್ನಲ್ಲಿ ಗಾಯ ಅನ್ನೋದು ಮಾಮೂಲಿ. ಈಗ ತಂಡ ಮಾನಸಿಕ ಹಾಗೂ ದೈಹಿಕ ಚೈತನ್ಯವನ್ನು ಹೆಚ್ಚಿಸಿಕೊಂಡಿದ್ದು, ನೆಟ್ ಅಭ್ಯಾಸ ಇದಿರು ನೋಡುತ್ತಿದೆ ಎಂದರು.
ತಂಡದ ಕೋಚ್ ಜಾನ್ ರೈಟ್, ಫಿಸಿಯೋ ಆ್ಯಂಡ್ರೂ ಲೀಪಸ್ ಹಾಗೂ ಹೊಸದಾಗಿ ನೇಮಕಗೊಂಡಿರುವ ತರಪೇತುದಾರ ಗ್ರೆಗರಿ ಅಲ್ಲೆನ್ ಕಿಂಗ್ ವ್ಯಾಯಾಮ ಶಿಬಿರವನ್ನು ಹಾಡಿ ಹೊಗಳಿದರು. ಸದ್ಯಕ್ಕೆ ಇಂಗ್ಲೆಂಡ್ ಕೌಂಟಿಗಳಲ್ಲಿ ಆಡುತ್ತಿರುವ ರಾಹುಲ್ ದ್ರಾವಿಡ್, ಮೊಹಮ್ಮದ್ ಕೈಫ್ ಹಾಗೂ ಯುವರಾಜ್ ಸಿಂಗ್ ಫಿಟ್ನೆಸ್ ಬಗ್ಗೆ ಜಾನ್ರೈಟ್ಗೆ ಭರವಸೆ ಇದೆ. ದ್ರಾವಿಡ್ ಅವರಿಗಂತೂ ದೈಹಿಕ ಸಾಮರ್ಥ್ಯದ ಪ್ರಜ್ಞೆ ಸದಾ ಇರುತ್ತದೆ. ಅವರು ಸಲೀಸಾಗಿ ಆಟಕ್ಕೆ ಒಗ್ಗಿಕೊಳ್ಳುವುದರಲ್ಲಿ ಯಾವ ಅನುಮಾನವೂ ಇಲ್ಲ ಎಂದರು.
ಸೆಪ್ಟೆಂಬರ್ 1ನೇ ತಾರೀಕಿನಿಂದ 6 ದಿನಗಳ ಕ್ರಿಕೆಟ್ ಪೂರ್ವ ಸಿದ್ಧತಾ ಶಿಬಿರ ಪ್ರಾರಂಭವಾಗಲಿದೆ.
(ಪಿಟಿಐ)
ಮುಖಪುಟ / ವಾರ್ತೆಗಳು
-
Karnataka Rain: ಕರ್ನಾಟಕದಲ್ಲಿ ಮಳೆ ಕೊರತೆ ಈ ಬಾರಿ ಈ ಭಾಗಗಳಲ್ಲಿ ಸಂಕಷ್ಟ, ಕುಡಿಯುವ ನೀರಿಗೂ ಹಾಹಾಕಾರ -
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
Bengaluru: ಪಬ್ನಲ್ಲಿ 150 ರೂ. ಕೊಟ್ಟು ಆರ್ಡರ್ ಮಾಡಿದ್ರೆ ಬಂದಿದ್ದು ಬರೀ ಹಪ್ಪಳ-ಸಂಡಿಗೆ: ದಂಗಾದ ಗ್ರಾಹಕ -
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ












Click it and Unblock the Notifications