ಮುಂಬಯಿ ಸ್ಫೋಟಗಳಲ್ಲಿ ಲಷ್ಕರ್ ಕೈವಾಡವಿದೆ-ಅಡ್ವಾಣಿ, ಛಗನ್
ಮುಂಬಯಿ ಸ್ಫೋಟಗಳಲ್ಲಿ ಲಷ್ಕರ್ ಕೈವಾಡವಿದೆ-ಅಡ್ವಾಣಿ, ಛಗನ್
ಸ್ಫೋಟ ಖಂಡಿಸಿದ ಅನ್ನಾನ್, ಬುಷ್
ಗುಜರಾತ್ ಹತ್ಯಾಕಾಂಡದ ನಂತರ ಲಷ್ಕರ್- ಇ- ತೊಯಿಬ ಮತ್ತಿತರ ಸಂಘಟನೆಗಳು ಒಂದಾಗಿವೆ. ಅದರ ಫಲಶೃತಿ ಮುಂಬಯಿ ಬಾಂಬ್ ಸ್ಫೋಟ. ಘಟ್ಕೋಪರ್ ಸ್ಫೋಟಗಳ ಕುರಿತ ದಾಖಲೆಗಳನ್ನು ಪರಿಶೀಲಿಸಿದ ನಂತರ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಛಗನ್ ಭುಜ್ಬಲ್ ಮಂಗಳವಾರ (ಆ.26) ಸುದ್ದಿಗಾರರಿಗೆ ಹೇಳಿದರು.
ಮುಂಬಯಿಗೆ ಭೇಟಿ ನೀಡಿದ ಎಲ್.ಕೆ.ಅಡ್ವಾಣಿ ಕೂಡ ಛಗನ್ ಅಭಿಪ್ರಾಯವನ್ನು ಸಮರ್ಥಿಸಿದರು. ಭಾರತದ ಮೂಲೆ ಮೂಲೆಯನ್ನೂ ಲಷ್ಕರ್ ಸಂಘಟನೆ ಗುರಿಯಾಗಿಟ್ಟುಕೊಂಡು ದಾಳಿ ನಡೆಸುತ್ತಿದೆ ಎಂದರು.
ಮುಂಬಯಿಯಲ್ಲಿ ಮಂಗಳವಾರವೂ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿತ್ತು. ಬಾಂಬ್ ಸ್ಫೋಟಗಳಿಂದ ಕನಿಷ್ಠ 46 ಮಂದಿ ಸತ್ತಿದ್ದು, 141 ಮಂದಿ ಆಸ್ಪತ್ರಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಾಸರ ಮತ್ತು ಇಗಟ್ಪುರಿ ನಡುವಿನ ರೈಲೆ ಟ್ರ್ಯಾಕ್ ಮೇಲೆ ಕೂಡ ಸ್ಫೋಟಕ ವಸ್ತುಗಳ ಪೊಲೀಸರಿಗೆ ಸಿಕ್ಕಿವೆ. ಸ್ಫೋಟ ಸಂಭವಿಸಿದ ಒಂದು ಟ್ಯಾಕ್ಸಿಯ ಚಾಲಕನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದು, ವಿಚಾರಣೆ ನಡೆಸಿದ್ದಾರೆ. ಆಯಕಟ್ಟಿನ ಜಾಗದಲ್ಲಿ ಬಿಗಿ ಪೊಲೀಸ್ ಪಹರೆ ನಿಯೋಜಿಸಲಾಗಿದೆ. ಇನ್ನಷ್ಟು ಬಾಂಬ್ಗಳಿರುವ ಆತಂಕವಿದ್ದು, ಶೋಧನೆ ನಡೆದಿದೆ.
ಕೋಫಿ ಅನ್ನಾನ್, ಬುಷ್ ಖಂಡನೆ
ಮುಂಬಯಿ ಸರಣಿ ಬಾಂಬ್ ಸ್ಫೋಟ ಅಮಾನವೀಯತೆಯ ಪರಮಾವಧಿ. ಭಯೋತ್ಪಾದನೆ ಇವತ್ತು ಜಾಗತಿಕ ಸವಾಲಾಗಿ ನಿಂತಿದೆ. ಅಂತರ ರಾಷ್ಟ್ರೀಯ ಸಮುದಾಯ ಇದನ್ನು ನಿರ್ಮೂಲನೆ ಮಾಡಬೇಕು. ಈ ಸವಾಲಿಗೆ ನಾವು ಸಿದ್ಧ. ಮುಂಬಯಿ ಸರಣಿ ಬಾಂಬ್ ಸ್ಫೋಟವನ್ನು ನಾವು ಖಂಡಿಸುತ್ತೇವೆ ಎಂದು ವಿಶ್ವಸಂಸ್ಥೆಯ ಮುಖ್ಯ ಕಾರ್ಯದರ್ಶಿ ಕೋಫಿ ಅನ್ನಾನ್ ಮತ್ತು ಅಮೆರಿಕ ಅಧ್ಯಕ್ಷ ಜಾರ್ಜ್ ಬುಷ್ ಹೇಳಿದ್ದಾರೆ. ಇಂಗ್ಲೆಂಡ್, ರಷ್ಯಾ, ಸಿಂಗಪೂರ್, ನ್ಯೂಜಿಲೆಂಡ್ ಮೊದಲಾದ ದೇಶಗಳು ಸ್ಫೋಟವ ಕೃತ್ಯವನ್ನು ಖಂಡಿಸಿದ್ದು, ಮೃತರ ಆತ್ಮಕ್ಕೆ ಶಾಂತಿ ಕೋರಿ ಭಾರತ ಸರ್ಕಾರಕ್ಕೆ ಸಂದೇಶ ಕಳುಹಿಸಿವೆ.
(ಏಜೆನ್ಸೀಸ್)
ವಾರ್ತಾ ಸಂಚಯ
ಬಾಂಬ್ ಸ್ಫೋಟ : ಸೂತಕದ ಮುಂಬಯಿಯಲ್ಲಿ ಆತಂಕದ ನೆರಳು
ಮುಖಪುಟ / ವಾರ್ತೆಗಳು
-
Karnataka Rain: ಕರ್ನಾಟಕದಲ್ಲಿ ಮಳೆ ಕೊರತೆ ಈ ಬಾರಿ ಈ ಭಾಗಗಳಲ್ಲಿ ಸಂಕಷ್ಟ, ಕುಡಿಯುವ ನೀರಿಗೂ ಹಾಹಾಕಾರ -
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
Bengaluru: ಪಬ್ನಲ್ಲಿ 150 ರೂ. ಕೊಟ್ಟು ಆರ್ಡರ್ ಮಾಡಿದ್ರೆ ಬಂದಿದ್ದು ಬರೀ ಹಪ್ಪಳ-ಸಂಡಿಗೆ: ದಂಗಾದ ಗ್ರಾಹಕ -
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ












Click it and Unblock the Notifications