ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುರಿತು ‘ವೀರ’ಪ್ಪ ಮೊಯಿಲಿ ಸ್ಪಷ್ಟನೆ
ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುರಿತು ‘ವೀರ’ಪ್ಪ ಮೊಯಿಲಿ ಸ್ಪಷ್ಟನೆ
ಮೊಯಿಲಿ ಹೇಳಿದ್ದು ಹಾಗಲ್ಲ , ಅದು ಹೇಗೆ ಎಂದರೆ...
ಹಂಪಿ ವಿಶ್ವ ವಿದ್ಯಾಲಯದ ಕಾರ್ಯ ವೈಖರಿ ತನ್ನ ಉದ್ದೇಶಿತ ಗುರಿ ಸಾಧನೆಗಳಿಗೆ ಅನುಗುಣವಾಗಿಲ್ಲ . ಅದೇ ರೀತಿ ಕನ್ನಡ ಪುಸ್ತಕ ಪ್ರಾಧಿಕಾರ ಸಾಗುತ್ತಿರುವ ಹಾದಿಯೂ ಸರಿಯಾದುದಲ್ಲ . ಆ ಕಾರಣದಿಂದಾಗಿ ಅವುಗಳ ಕಾರ್ಯ ವೈಖರಿ ಸರಿಯಾಗಬೇಕು ಎನ್ನುವ ಅರ್ಥದಲ್ಲಿ ಮಾತನಾಡಿದೆನೇ ವಿನಃ, ಅವುಗಳನ್ನು ಮುಚ್ಚಬೇಕು ಎನ್ನುವುದು ತಮ್ಮ ಮಾತಿನ ಅರ್ಥವಲ್ಲ ಎಂದು ಹಾಸನದಲ್ಲಿ ತಮ್ಮನ್ನು ಭೇಟಿಯಾದ ಪತ್ರಕರ್ತರಿಗೆ ವೀರಪ್ಪ ಮೊಯಿಲಿ ತಿಳಿ ಹೇಳಿದ್ದಾರೆ.
ಆ.15ರಂದು ಧಾರವಾಡದಲ್ಲಿ ಜರುಗಿದ ಮನೋಹರ ಗ್ರಂಥಮಾಲೆಯ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮೊಯಿಲಿ- ಹಂಪಿ ವಿವಿ ಹಾಗೂ ಪುಸ್ತಕ ಪ್ರಾಧಿಕಾರ ಮುಚ್ಚುವಂತೆ ಫರ್ಮಾನು ಹೊರಡಿಸಿದ್ದಾಗಿ ಈವರೆಗಿನ ಸುದ್ದಿ . ಪ್ರಸ್ತುತ ಮೊಯಿಲಿ ಸಾಹೇಬರು ಸ್ಪಷ್ಟಪಡಿಸಿರುವ ಅವರವೇ ಆದ ಅಭಿಪ್ರಾಯಗಳು :
- ಕನ್ನಡ ಸಂಸ್ಕೃತಿಯನ್ನು ಬಿಂಬಿಸುವ ಕೆಲಸವನ್ನು ಕನ್ನಡ ವಿಶ್ವವಿದ್ಯಾಲಯ ಮಾಡಬೇಕು.
- ವಿಶ್ವ ಪರಂಪರೆಯನ್ನು ಮುಂದುವರಿಸುವ ಕಾರ್ಯವಾಗಬೇಕು.
- ಇತರ ವಿಶ್ವವಿದ್ಯಾಲಯಗಳೊಂದಿಗೆ ಹಂಪಿ ವಿವಿ ಸ್ಪರ್ಧೆಗಿಳಿಯಬಾರದು. ಅದು ತನ್ನ ಪ್ರತ್ಯೇಕ ಅಸ್ತಿತ್ವ ಉಳಿಸಿಕೊಳ್ಳಬೇಕು.
- ಕನ್ನಡ ಸಂಸ್ಕೃತಿ, ಇತಿಹಾಸ, ಶಿಲ್ಪಕಲೆಗಳ ಕುರಿತು ವಿವಿ ಸಂಶೋಧನೆ ನಡೆಸಬೇಕು.
- ಮೇಲಿನ ಪ್ರಕಾರ ವಿಶ್ವವಿದ್ಯಾಲಯ ಕಾರ್ಯ ನಿರ್ವಹಿಸಬೇಕೇ ಹೊರತು- ಪದವಿ-ಡಿಪ್ಲೊಮ ನೀಡುವುದು ಅಥವಾ ಪುಸ್ತಕ ಪ್ರಕಟಿಸುವುದರಲ್ಲೇ ಕಾಲ ಕಳೆಯುವುದು ಸಲ್ಲದು.
- 1995ರಿಂದ ಕನ್ನಡ ಪುಸ್ತಕ ಪ್ರಾಧಿಕಾರ ದಾರಿ ತಪ್ಪಿದೆ.
- ಪುಸ್ತಕ ಪ್ರಾಧಿಕಾರ ಪುಸ್ತಕ ಪ್ರಕಾಶಿಸುವ ಕೆಲಸ ಮಾಡಬೇಕಾಗಿಲ್ಲ . ಪುಸ್ತಕ ಪ್ರಕಟಿಸಲು ಬೇರೆ ಪ್ರಕಾಶನ ಸಂಸ್ಥೆಗಳಿವೆ.
- ಪುಸ್ತಕ ಮಾರಾಟದತ್ತ ಹಾಗೂ ಗ್ರಂಥಾಲಯಗಳು ಮಾಡುವ ಕೆಲಸವನ್ನು ಪುಸ್ತಕ ಪ್ರಾಧಿಕಾರ ಮಾಡಬೇಕು.
ಮುಖಪುಟ / ವಾರ್ತೆಗಳು
More From
-
Karnataka Rain: ಕರ್ನಾಟಕದಲ್ಲಿ ಮಳೆ ಕೊರತೆ ಈ ಬಾರಿ ಈ ಭಾಗಗಳಲ್ಲಿ ಸಂಕಷ್ಟ, ಕುಡಿಯುವ ನೀರಿಗೂ ಹಾಹಾಕಾರ -
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
Bengaluru: ಪಬ್ನಲ್ಲಿ 150 ರೂ. ಕೊಟ್ಟು ಆರ್ಡರ್ ಮಾಡಿದ್ರೆ ಬಂದಿದ್ದು ಬರೀ ಹಪ್ಪಳ-ಸಂಡಿಗೆ: ದಂಗಾದ ಗ್ರಾಹಕ -
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ












Click it and Unblock the Notifications