ಪುಸ್ತಕ ಪೇಟೆ ಮಾತು -‘ಕಾವೇರಿ: ಒಂದು ಚಿಮ್ಮು ಒಂದು ಹೊರಳು’
ಪುಸ್ತಕ
ಪೇಟೆ
ಮಾತು
-‘ಕಾವೇರಿ:
ಒಂದು
ಚಿಮ್ಮು
ಒಂದು
ಹೊರಳು’
‘ಕಾವೇರಿ’
ಕುರಿತೊಂದು
ಸಮಗ್ರ
ಪುಸ್ತಕ
‘ಕಾವೇರಿ: ಒಂದು ಚಿಮ್ಮು ಒಂದು ಹೊರಳು’.
ಪುಸ್ತಕಪೇಟೆಯಲ್ಲೀಗ ಶೇಷನಾರಾಯಣ ಬರೆದ ‘ಕಾವೇರಿ: ಒಂದು ಚಿಮ್ಮು ಒಂದು ಹೊರಳು’ ಪುಸ್ತಕದ್ದೇ ಮಾತು. ಹಿರಿಯ ಲೇಖಕ ಶೇಷನಾರಾಯಣ ಈ ಪುಸ್ತಕಕ್ಕಾಗಿ ಪಟ್ಟ ಶ್ರಮ ಒಂದೆರಡಲ್ಲ . ಎಂಜಿನಿಯರುಗಳಿಂದ ಮಾಹಿತಿ ಪಡೆದಿದ್ದಾರೆ. ಕಾವೇರಿ ಹರಿಯುವ ಪ್ರಾಂತ್ಯದಲ್ಲೆಲ್ಲ ಸಂಚರಿಸಿ ನದಿಯಲೆಗೆ ಕಿವಿ ಕೊಟ್ಟಿದ್ದಾರೆ. ತಮಿಳು ಭಾಷೆಯನ್ನೂ ಬಲ್ಲ ಶೇಷನಾರಾಯಣ, ತಮಿಳರಿಂದ ಅಂಕಿ ಅಂಶಗಳನ್ನೂ ಹೆಕ್ಕಿದ್ದಾರೆ. ತಮಿಳುನಾಡಿನ ತಂಜಾವೂರು ಪ್ರದೇಶಕ್ಕೆ ಭೇಟಿ ನೀಡಿ ಸತ್ಯಾಸತ್ಯ ನ್ಯಾಯಾನ್ಯಾಯಗಳ ಪರಿಶೀಲಿಸಿದ್ದಾರೆ.
‘ಕಾವೇರಿ: ಒಂದು ಚಿಮ್ಮು ಒಂದು ಹೊರಳು’ ಕೃತಿ ಏಕಕಾಲಕ್ಕೆ ಐತಿಹಾಸಿಕವೂ ವರ್ತಮಾನವೂ ಸ್ವಲ್ಪಮಟ್ಟಿಗೆ ಪುರಾಣವೂ ಹೌದು. ಕೇಶಿರಾಜನ ಶಬ್ದಮಣಿ ದರ್ಪಣದಲ್ಲಿನ ಕಾವೇರಿಯ ಉಲ್ಲೇಖ, ಕಾವೇರಿ ರಾಜಕಾರಣ ಬೆಳೆದು ಬಂದ ಬಗೆ, ಕಾವೇರಿ ಹಾಗೂ ವಿಶ್ವೇಶ್ವರಯ್ಯ, ಕಾವೇರಿ ನೀರಿಗಾಗಿ ಹೋರಾಟ, ಹಾಹಾಕಾರ, ಪರಿಸರ- ಪರಿಹಾರ, ಈ ಪರಿಯಾಗಿ ‘ಕಾವೇರಿ: ಒಂದು ಚಿಮ್ಮು ಒಂದು ಹೊರಳು’ ಪುಸ್ತಕಕ್ಕೆ ಹಲವು ಆಯಾಮಗಳಿವೆ.
ಕಾವೇರಿ ನದಿ ಹಾಗೂ ನದಿಗೆ ಕಟ್ಟಿದ ಜಲಾಶಯಗಳು ಹಾಗೂ ಕಾವೇರಿಗೆ ಸಂಬಂಧಿಸಿದ ಇತರ ಚಿತ್ರಗಳನ್ನು ಪುಸ್ತಕದಲ್ಲಿ ಔಚಿತ್ಯಪೂರ್ಣವಾಗಿ ಬಳಸಿಕೊಳ್ಳಲಾಗಿದೆ. ಸಂಶೋಧನೆ, ವಿಮರ್ಶೆ, ಅವಲೋಕನ, ವಸ್ತುಸ್ಥಿತಿ ದಾಖಲು- ಎಲ್ಲ ಕಾರಣಗಳಿಂದಲೂ ಈ ಕೃತಿ ಮಹತ್ವಪೂರ್ಣವಾದುದು. ಇಂಥದೊಂದು ಅಪರೂಪದ ಪುಸ್ತಕವನ್ನು ಮೈಸೂರಿನ ‘ಕಾವ್ಯಾಲಯ’ ಪ್ರಕಟಿಸಿದೆ.
*
ಆಗಸ್ಟ್ 24, ಭಾನುವಾರ ಸಂಜೆ ಕನ್ನಡ ಸಾಹಿತ್ಯ ಪರಿಷತ್ತಿನ ಪಂಪ ಸಭಾಂಗಣದಲ್ಲಿ ‘ಕಾವೇರಿ: ಒಂದು ಚಿಮ್ಮು ಒಂದು ಹೊರಳು’ ಕೃತಿ ಬಿಡುಗಡೆಯಾಗಲಿದೆ. ಸಂಶೋಧಕ ಡಾ.ಎಂ.ಚಿದಾನಂದಮೂರ್ತಿ ಪುಸ್ತಕ ಬಿಡುಗಡೆ ಮಾಡುವರು. ವಿಮರ್ಶಕ ಪ್ರೊ.ಎಲ್.ಎಸ್.ಶೇಷಗಿರಿರಾವ್, ವಿಧಾನ ಪರಿಷತ್ ಸಭಾಪತಿ ಬಿ.ಎಲ್.ಶಂಕರ್ ಕಾರ್ಯಕ್ರಮದಲ್ಲಿ ಹಾಜರಿರುವರು.
(ಇನ್ಫೋ ವಾರ್ತೆ)
ಮುಖಪುಟ / ಕಾವೇರಿ