ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇವಸ್ಥಾನಗಳ ಏಕರೂಪ ಶಾಸನ ತಿದ್ದುಪಡಿಗೆ ಅರ್ಚಕರ ಆಗ್ರಹ

By Staff
|
Google Oneindia Kannada News

ದೇವಸ್ಥಾನಗಳ ಏಕರೂಪ ಶಾಸನ ತಿದ್ದುಪಡಿಗೆ ಅರ್ಚಕರ ಆಗ್ರಹ
‘ಗ್ರಾಮಾಂತರ ದೇವಳದ ಅರ್ಚಕರಿಗೆ ತಿಂಗಳಿಗೆ 1 ಸಾವಿರ ರು. ವೇತನ ನೀಡಬೇಕು’

ಬೆಂಗಳೂರು: ಧಾರ್ಮಿಕ ದತ್ತಿ ಇಲಾಖೆಯ ಏಕ ರೂಪ ಶಾಸನದಲ್ಲಿ ಅನೇಕ ಲೋಪಗಳಿರುವುದಾಗಿ ಅಖಿಲ ಕರ್ನಾಟಕ ಹಿಂದೂ ದೇವಲಯಗಳ ಅರ್ಚಕರು, ಆಗಮಿಕರು ಮತ್ತು ಉಪಾಧಿವಂತರ ಒಕ್ಕೂಟ ಮುಖ್ಯಮಂತ್ರಿಗಳ ಬಳಿ ದೂರು ನೀಡಿದೆ.

ಹೊಸದಾಗಿ ರೂಪಿಸಲಾಗಿರುವ ಈ ಏಕ ರೂಪ ಶಾಸನದಲ್ಲಿರುವ ಲೋಪಗಳ ಸಂಬಂಧ ಮುಜರಾಯಿ ಮತ್ತು ಕಾನೂನು ಸಚಿವರು, ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರು ತಮ್ಮೊಡನೆ ಸಮಾಲೋಚನೆ ನಡೆಸಿ ಶಾಸನವನ್ನು ಪರಿಷ್ಕರಿಸಬೇಕು ಎಂದು ಒಕ್ಕೂಟ ಮುಖ್ಯಮಂತ್ರಿ ಎಸ್‌. ಎಂ. ಕೃಷ್ಣ ಅವರ ಬಳಿ ಮನವಿ ಮಾಡಿಕೊಂಡಿದೆ.

ಒಕ್ಕೂಟದ ಮುಖ್ಯ ಆಗ್ರಹಗಳು :

  • ಈ ಶಾಸನದಲ್ಲಿ ತಪ್ಪು ಮಾಡಿದ ಅರ್ಚಕರು ಮತ್ತು ಆಗಮಿಕರ ವಿರುದ್ಧ ಕ್ರಮ ಕೈಗೊಳ್ಳುವ ಅಧಿಕಾರವನ್ನು ದೇವಸ್ಥಾನದ ಧರ್ಮ ದರ್ಶಿಗಳಿಗೆ ನೀಡಲಾಗಿದೆ. ಇದರಿಂದ ಗೌರವಯುತ ಸ್ಥಾನದಲ್ಲಿರುವ ಅರ್ಚಕರ ಮೇಲೆ ಅಧಿಕಾರ ಚಲಾಯಿಸುವ ಅಧಿಕಾರವನ್ನು ಕೇವಲ ಮೂರು ವರ್ಷಗಳ ಅವಧಿಗೆ ನೇಮಕಗೊಳ್ಳುವ ಧರ್ಮದರ್ಶಿಗಳಿಗೆ ನೀಡುವುದು ಸರಿಯಲ್ಲ.
  • ಗ್ರಾಮಾಂತರ ದೇವಳದ ಅರ್ಚಕರಿಗೆ ಮಾಹೆಯಾನ ಕನಿಷ್ಠ 1 ಸಾವಿರ ರುಪಾಯಿ ವೇತನ ನಿಗದಿ ಪಡಿಸಬೇಕು.
  • ಗ್ರಾಮೀಣ ಮತ್ತು ಪಟ್ಟಣ ವ್ಯಾಪ್ತಿ ಹಿರಿಯ ಮತ್ತು ಅತಿ ಹಿರಿಯ ಅರ್ಚಕರಿಗೆ ನಿವೇಶನ ನೀಡಬೇಕು ಎಂದು ಒಕ್ಕೂಟದ ಅಧ್ಯಕ್ಷ ಮಳ್ಳೂರು ಆನಂದ ರಾವ್‌ ನೇತೃತ್ವದ ನಿಯೋಗ ಗುರುವಾರ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಆಗ್ರಹಿಸಿದೆ.
(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X