ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ದಯವಿಟ್ಟು ಆತ್ಮಹತ್ಯೆ ಮಾಡಿಕೊಳ್ಳಬೇಡಿ- ರೈತರಲ್ಲಿ ಕೃಷ್ಣ ಮನವಿ
ದಯವಿಟ್ಟು
ಆತ್ಮಹತ್ಯೆ
ಮಾಡಿಕೊಳ್ಳಬೇಡಿ-
ರೈತರಲ್ಲಿ
ಕೃಷ್ಣ
ಮನವಿ
ರೈತರ
ನೆರವಿಗೆ
ರಾಜ್ಯ
ಸರ್ಕಾರದಿಂದ
ವಿಶೇಷ
ಪ್ಯಾಕೇಜ್
ರಾಜ್ಯದಲ್ಲಿ ಮೂರು ವರ್ಷಗಳಿಂದ ಬರ ತಾಂಡವವಾಡುತ್ತಿದೆ. ತೀವ್ರ ಬರದಿಂದಾಗಿ ದುಸ್ಥಿತಿಯಲ್ಲಿರುವ ರೈತರಿಗೆ ಸರ್ಕಾರ ವಿಶೇಷ ಪ್ಯಾಕೇಜ್ ರೂಪಿಸುವುದು ಎಂದು ಕೃಷ್ಣ ಹೇಳಿದರು. ಪ್ರದೇಶ ಕಾಂಗ್ರೆಸ್ ಸಮಿತಿ ಬುಧವಾರ ಏರ್ಪಡಿಸಿದ್ದ ಮಾಜಿ ಪ್ರಧಾನಿ ರಾಜೀವ್ಗಾಂಧಿ ಹಾಗೂ ದೇವರಾಜ ಅರಸು ಹುಟ್ಟುಹಬ್ಬ ಕಾರ್ಯಕ್ರಮದಲ್ಲಿ ಕೃಷ್ಣ ಮಾತನಾಡುತ್ತಿದ್ದರು.
ಕೃಷ್ಣ
ಅವರ
ಭಾಷಣದ
ಮುಖ್ಯಾಂಶಗಳು
:
- ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಗಳಿಗೆ 1 ಲಕ್ಷ ರುಪಾಯಿ ಪರಿಹಾರ ಧನ ನೀಡಲಾಗುವುದು. ಪರಿಹಾರ ಧನ 15 ದಿನಗಳಲ್ಲಿ ಸಂತ್ರಸ್ತರಿಗೆ ತಲುಪುವಂತೆ ಕ್ರಮ ಕೈಗೊಳ್ಳಲಾಗುವುದು.
- ರೈತರ ಸಾಲ ವಸೂಲಾತಿಗಾಗಿ ಜಮೀನು, ಟ್ರ್ಯಾಕ್ಟರ್ ಮುಂತಾದ ಸ್ಥಿರಾಸ್ತಿಗಳನ್ನು ಜಪ್ತಿ ಮಾಡದಂತೆ ಆದೇಶ ಹೊರಡಿಸಲಾಗುವುದು.
- ಸಾಲ ವಸೂಲಾತಿಯನ್ನು ಸದ್ಯಕ್ಕೆ ಸ್ಥಗಿತಗೊಳಿಸಲಾಗುವುದು.
- ಸಹಕಾರ ಸಂಘಗಳಿಂದ ರೈತರು ಪಡೆದ ಸಾಲದ ಬಡ್ಡಿ ಮನ್ನಾ ಮಾಡಲಾಗುವುದು. ಈಗಾಗಲೇ ಬಡ್ಡಿಯನ್ನು ಪಾವತಿ ಮಾಡಿರುವ ರೈತರಿಗೆ, ಪಾವತಿಸಿದ ಬಡ್ಡಿಯ ಹಣ ವಾಪಸ್ಸು ಮಾಡಲಾಗುವುದು.
ರೈತರ ಬವಣೆ ನೀಗಿಸಲು ಸರ್ಕಾರ ವಿಶೇಷ ಪ್ಯಾಕೇಜ್ ರೂಪಿಸಲಿದೆ. ಈ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಜನಾರ್ಧನ ಪೂಜಾರಿ ಅವರೊಂದಿಗೆ ಚರ್ಚಿಸುತ್ತೇನೆ. ಆ.25ರ ಸಂಪುಟ ಸಭೆಯಲ್ಲಿ ಪ್ಯಾಕೇಜ್ ಕುರಿತು ಚರ್ಚಿಸಲಾಗುವುದು ಎಂದು ಕೃಷ್ಣ ಹೇಳಿದರು.
(ಇನ್ಫೋ ವಾರ್ತೆ)
ಮುಖಪುಟ / ಕೃಷ್ಣಗಾರುಡಿ
Comments
Story first published: Friday, January 24, 2003, 5:30 [IST]