ಅಪೂರ್ವ ಗಿಡಮೂಲಿಕೆಗಳ ಸಿದ್ಧರಬೆಟ್ಟ ಅಭಿವೃದ್ಧಿಗೆ ಸರ್ಕಾರ ಬದ
ಅಪೂರ್ವ
ಗಿಡಮೂಲಿಕೆಗಳ
ಸಿದ್ಧರಬೆಟ್ಟ
ಅಭಿವೃದ್ಧಿಗೆ
ಸರ್ಕಾರ
ಬದ
ಅಧಿಕಾರಿಗಳಿಂದ
ವರದಿ
ಕೇಳಿಕೆ,
ಆನಂತರವೇ
ಮುಂದಿನ
ಕ್ರಮ-
ಇನಾಂದಾರ್
ಸಿದ್ಧರ ಬೆಟ್ಟವನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸುವಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಅಧಿಕಾರಿಗಳಿಂದ ವರದಿ ಕೇಳಲಾಗುವುದು. ಈ ವರದಿ ಬಂದ ನಂತರ ಸಿದ್ಧರಬೆಟ್ಟದ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಇನಾಂದಾರ್ ಶುಕ್ರವಾರ (ಆ.1) ವಿಧಾನಪರಿಷತ್ತಿನಲ್ಲಿ ತಿಳಿಸಿದರು. ಶಾಸಕ ಎಸ್. ಚನ್ನಬಸವಯ್ಯ ಅವರ ಪ್ರಶ್ನೆಗೆ ಇನಾಂದಾರ್ ಪ್ರತಿಕ್ರಿಯಿಸುತ್ತಿದ್ದರು.
ಸಿದ್ಧರಬೆಟ್ಟದಲ್ಲಿ ಪ್ರವಾಸಿಗಳಿಗೆ ಮೂಲಭೂತ ಸೌಕರ್ಯಗಳ ಕೊರತೆಯಿರುವುದನ್ನು ವಿಧಾನಪರಿಷತ್ತಿನ ಗಮನಕ್ಕೆ ತಂದ ಚನ್ನಬಸವಯ್ಯ- ಈ ಬಗ್ಗೆ ಸರ್ಕಾರ ಯಾವುದೇ ಕ್ರಮ ಕೈಗೊಳ್ಳದಿರುವ ಬಗ್ಗೆ ವಿಷಾದಿಸಿದರು.
ಚರ್ಚೆಯ ನಡುವೆ ಮಧ್ಯಪ್ರವೇಶಿಸಿದ ಸಭಾಪತಿ ಬಿ.ಎಲ್.ಶಂಕರ್- ಅಪರೂಪದ ಗಿಡಮೂಲಿಕೆಗಳನ್ನು ಒಳಗೊಂಡಿರುವ ಸಿದ್ಧರಬೆಟ್ಟದ ಸಂರಕ್ಷಣೆ ಹಾಗೂ ಅಭಿವೃದ್ಧಿಗೆ ಆದ್ಯತೆ ನೀಡಬೇಕೆಂದು ಸಚಿವರಿಗೆ ಸೂಚಿಸಿದರು. ಸಭಾಪತಿಯವರ ಸೂಚನೆಗೆ ಸ್ಪಂದಿಸಿದ ಸಚಿವ ಇನಾಂದಾರ್, ಅಧಿಕಾರಿಗಳಿಂದ ಈ ಬಗ್ಗೆ ತಕ್ಷಣ ವಿವರಣೆ ಕೇಳಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
(ಇನ್ಫೋ ವಾರ್ತೆ)
ಪೂರಕ
ಓದಿಗೆ
ಬಾಲಿವುಡ್ನಲ್ಲಿ
ವಿಜಯ್ಮಲ್ಯ
ರೇಸು
ಮುಖಪುಟ / ವಾರ್ತೆಗಳು