ಕೃಷ್ಣ ದರ್ಶನ ಭಾಗ್ಯ ಸಿಕ್ಕದ ಪಾಪು ಗರ್ಜನೆ
ಕೃಷ್ಣ ದರ್ಶನ ಭಾಗ್ಯ ಸಿಕ್ಕದ ಪಾಪು ಗರ್ಜನೆ
ನಾನು ಸಿನಿಮಾದವನೂ ಅಲ್ಲ , ನನ್ನ ಮುಖ ಚೆಂದವೂ ಇಲ್ಲ ಎನ್ನುವ ಪಾಪು ರಾಜಕಾರಣಿಗಳ ಉದಾಸೀನತೆ ಕುರಿತು ಕೆಂಡ ಕೆಂಡ. ಗೋಕಾಕ್ ಚಳವಳಿ ಮಾದರಿಯ ಹೋರಾಟದ ರೂಪುರೇಷೆ ಅವರ ಮನದೊಳಗೆ ಕದಲುತ್ತಿದೆ.
ಪಾಪು ಪ್ರಹಾರದ ಮುಖ್ಯಾಂಶಗಳು :
- ನಮ್ಮನ್ನು ಆಳುವವರಿಗೆ ಸಮಗ್ರ ಕರ್ನಾಟಕದ ಕಲ್ಪನೆಯೇ ಇಲ್ಲ. ಗಡಿ ಪ್ರದೇಶದಲ್ಲಿ ಏನಾಗುತ್ತಿದೆ ಎಂಬ ಬಗ್ಗೆ ಸರಕಾರಕ್ಕೆ ಕಾಳಜಿ ಇಲ್ಲ, ಪ್ರಾದೇಶಿಕ ಅಸಮಾನತೆ ನಿವಾರಣೆಗೆ ಸರಕಾರ ಕಾಸಿನ ಬೆಲೆ ನೀಡುತ್ತಿಲ್ಲ.
- ಈ ಸರಕಾರ ಸಮಗ್ರ ಕರ್ನಾಟಕದ ಅಭಿವೃದ್ಧಿಗೋಸ್ಕರ ಯಾರೊಡನೆಯೂ ಚರ್ಚೆಯನ್ನೂ ನಡೆಸುವುದಿಲ್ಲ. ಸಮಗ್ರ ಕರ್ನಾಟಕದ ಒಳಿತಿಗಾಗಿ ಇನ್ನೊಂದು ಗೋಕಾಕ್ ಚಳವಳಿ ಅನಿವಾರ್ಯ.
- ಪುತಿನ ಹೇಳಿದಂತೆ ಬೆಂಗಳೂರು ರಾಜಧಾನಿಯಾಗಿರುವುದೇ ದೊಡ್ಡ ಸಮಸ್ಯೆಯಾಗಿದೆ. ಉತ್ತರ ಕರ್ನಾಟಕದ ಅಭಿವೃದ್ಧಿಗೆ ವಿಶೇಷ ಅಧಿಕಾರಿಯನ್ನು ನೇಮಿಸಿ, ಅವರಿಗೆ ಯಾವುದೇ ಆಜ್ಞೆಯನ್ನು ಮಾಡದೇ ಸರಕಾರ ಸುಮ್ಮನೇ ಕುಳಿತಿದೆ.
- ಹನಿ ನೀರು, ತುಂಡು ಭೂಮಿಗೂ ಹೋರಾಟ ನಡೆಸುವ ಆಂಧ್ರದ ಚಂದ್ರಬಾಬು ನಾಯ್ಡು ಚುರುಕುತನ ನೋಡಿಯಾದರೂ ನಮ್ಮವರು ಬುದ್ಧಿ ಕಲಿಯಬಾರದೇ ? ರಾಜ್ಯಕ್ಕೆ ಆಗುವ ಅನ್ಯಾಯವನ್ನು ನೋಡುತ್ತಾ ಕೂರುವ ಸರಕಾರಕ್ಕೆ ಕೇಂದ್ರಕ್ಕೆ ನೀಟಾಗಿ ಒಂದು ಪತ್ರ ಬರೆಯಲಿಕ್ಕೂ ಬರಲ್ವೇ ?
ಈ ನಡುವೆ ಸಮಗ್ರ ಕರ್ನಾಟಕದ ಕನಸು ಹೊತ್ತು ರಾಜ್ಯದ ಅಭಿವೃದ್ಧಿ ಬಗ್ಗೆ ಚರ್ಚಿಸಲು ಮುಖ್ಯಮಂತ್ರಿ ಎಸ್. ಎಂ. ಕೃಷ್ಣ ಅವರನ್ನು ಭೇಟಿಯಾಗಲೂ ಪಾಪು ಮೂರು ನಾಲ್ಕು ಬಾರಿ ಪ್ರಯತ್ನಿಸಿದರಂತೆ. ಆದರೆ ಅವರ ಭೇಟಿ ಸಾಧ್ಯವಾಗಲಿಲ್ಲ.
‘ನಾನು ಸಿನಿಮಾ ನಟಿಯೂ ಅಲ್ಲ. ನನ್ನ ಮುಖ ಚೆಂದವೂ ಇಲ್ಲ. ಹೀಗಾಗಿ ನಂಗೆ ಮುಖ್ಯಮಂತ್ರಿಗಳ ಭೇಟಿ ದಕ್ಕಲಿಲ್ಲವೋ ಏನೋ’ ಎಂದು ವ್ಯಂಗ್ಯವಾಡಿದ ಪಾಪು- ಬೆಂಗಳೂರಿನಲ್ಲಿರುವ ಕನ್ನಡಪರ ಹೋರಾಟಗಾರರನ್ನೂ ತರಾಟೆಗೆ ತೆಗೆದುಕೊಂಡರು. ಉದ್ಯೋಗ ನೇಮಕಾತಿಯಲ್ಲಿ ಆಗುತ್ತಿರುವ ತಾರತಮ್ಯವನ್ನು ನೋಡಿಕೊಂಡು ಈ ಕನ್ನಡ ಚಳವಳಿಕಾರರು ಏನು ಮಾಡುತ್ತಿದ್ದರು ಎಂದು ಪಾಪು ಗರ್ಜಿಸಿದರು.
ವಿಚಾರ ಸಂಕಿರಣದಲ್ಲಿ ಅಂಕಣಕಾರ ಎಚ್ಚೆಸ್ಕೆ, ಮೈಸೂರು ವಿವಿಯ ವಿಶ್ರಾಂತ ಕುಲಪತಿ ಡಾ. ದೇ. ಜವರೇ ಗೌಡ ಚಿತ್ರ ನಿರ್ಮಾಪಕ ಸಾ.ರಾ. ಗೋವಿಂದು ಉಪಸ್ಥಿತರಿದ್ದರು.
ಪೂರಕ ಓದಿಗೆ-
ಬೆಳಗಾವಿ ಸಮ್ಮೇಳನದಲ್ಲಿ ಡಾ.ಪಾಟೀಲ ಪುಟ್ಟಪ್ಪ ಅಧ್ಯಕ್ಷ ಭಾಷಣ
ಮುಖಪುಟ / ವಾಟ್ಸ್ ಹಾಟ್












Click it and Unblock the Notifications