Get Updates
Get notified of breaking news, exclusive insights, and must-see stories!

ಕಾರವಾರ-ಮುಂಬಯಿ ವಿಶೇಷ ರೈಲು ಅಪಘಾತ, 17 ಸಾವು

ಕಾರವಾರ-ಮುಂಬಯಿ ವಿಶೇಷ ರೈಲು ಅಪಘಾತ, 17 ಸಾವು
ಕಳಚಿಕೊಂಡ ರಜೆ ವಿಶೇಷ ರೈಲಿನ ಬೋಗಿಗಳು, ಪ್ರಕರಣದ ತನಿಖೆಗೆ ನಿತೀಶ್‌ಕುಮಾರ್‌ ಆದೇಶ

ಮುಂಬಯಿ : ಮಹಾರಾಷ್ಟ್ರದ ಸಿಂಧುದುರ್ಗ್‌ ಜಿಲ್ಲೆಯಲ್ಲಿ ಭಾನುವಾರ (ಜೂನ್‌22) ನಡುರಾತ್ರಿ ಕಾರವಾರ-ಮುಂಬಯಿ ವಿಶೇಷ ರೈಲಿನ ಬೋಗಿಗಳು ಬೇರ್ಪಟ್ಟ ಕಾರಟ- 17 ಮಂದಿ ಸಾವನ್ನಪ್ಪಿದ್ದು , 25ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ನಾಲ್ಕು ಬೋಗಿಗಳು ಹಾಗೂ ಇಂಜಿನ್‌ ರೈಲಿನಿಂದ ಬೇರ್ಪಟ್ಟ ಕಾರಣ ರಾಜಾಪುರ್‌ ಹಾಗೂ ವೈಭವ್‌ವಾಡಿ ನಿಲ್ದಾಣಗಳ ನಜಡುವೆ ಈ ದುರ್ಘಟನೆ ರಾತ್ರಿ 22.30 ರ ಸುಮಾರಿಗೆ ಸಂಭವಿಸಿದೆ. ಮೃತಪಟ್ಟವರಲ್ಲಿ ನಾಲ್ವರು ಮಹಿಳೆಯರು ಹಾಗೂ ಮೂವರು ಮಕ್ಕಳು ಸೇರಿದ್ದಾರೆ ಎಂದು ಕೊಂಕಣ ರೈಲ್ವೆ ಪ್ರಕಟಣೆ ತಿಳಿಸಿದೆ.

ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗಳಿಗೆ ದಾಖಲು ಮಾಡಲಾಗಿದ್ದು - ಪರಿಹಾರ ಕಾರ್ಯಗಳು ನಡೆಯುತ್ತಿವೆ ಎಂದು ಪ್ರಕಟಣೆ ಹೇಳಿದೆ. ಈ ನಡುವೆ, ಅಪಘಾತದ ಬಗೆಗಿನ ತನಿಖೆಗೆ ರೈಲ್ವೆ ಖಾತೆ ಸಚಿವ ನಿತೀಶ್‌ ಕುಮಾರ್‌ ಆದೇಶಿಸಿದ್ದಾರೆ.

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಬೇಕಾದ ರೈಲ್ವೆ ತುರ್ತು ದೂರವಾಣಿ ಸಂಖ್ಯೆಗಳು:

ಮುಂಬಯಿ ಸೆಂಟ್ರಲ್‌ (ಪೂರ್ವ ರೈಲ್ವೆ )- (022) 23017426 ಮತ್ತು (022) 23017425
ಕೊಂಕಣ ರೈಲ್ವೆ- (022) 27579939 ಮತ್ತು (022) 27579938
ಕಂಕಾವಳಿ ನಿಲ್ದಾಣ- (02367) 230111 ಮತ್ತು (02367) 232243
ಮದ್‌ಗಾಂವ್‌ ನಿಲ್ದಾಣ- 0832) 2712796 ಮತ್ತು (0832) 2703950

(ಏಜೆನ್ಸೀಸ್‌)

ಮುಖಪುಟ / ವಾರ್ತೆಗಳು

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+