ಗೌಡ್ರ ಗದ್ದಲದಾಗೆ ಡಿಕೇಶಿ ಜೇಬೇ ಪಿಕ್ಪಾಕೇಟಾಗೋಯ್ತು
ಗೌಡ್ರ ಗದ್ದಲದಾಗೆ ಡಿಕೇಶಿ ಜೇಬೇ ಪಿಕ್ಪಾಕೇಟಾಗೋಯ್ತು
ತುರುವೇಕೆರೆ ಸಮುದಾಯ ಭವನ ಉದ್ಘಾಟನೆ ಸಮಾರಂಭದಲ್ಲಿ ವಿವಿಐಪಿಗಳ ಜೇಬಿಗೆ ದೊಡ್ಡ ಕತ್ತರಿ
ಒಕ್ಕಲಿಗ ಸಮುದಾಯವನ್ನು ಪೊರೆದು, ಉದ್ಧರಿಸುವ ಏಕಮೇವಾದ್ವಿತೀಯರು ಆದಿ ಚುಂಚನಗಿರಿ ಮಠದ ಬಾಲಗಂಗಾಧರನಾಥ ಸ್ವಾಮೀಜಿ. ಕೆಲವರು ಇನ್ನೊಬ್ಬ ಸ್ವಾಮೀಜಿಯನ್ನು ಪಟ್ಟಕ್ಕೆ ತಂದು, ಮಠ ಒಡೆಯುವ ಕೆಲಸ ಮಾಡುತ್ತಿದ್ದಾರೆ ಎಂದು ಸಚಿವ ಡಿಕೇಶಿ ಉದ್ಘರಿಸಿದಾಗ, ಚಪ್ಪಾಳೆಯ ಜೊತೆಗೆ ಕೆಲವರು ಭಿನ್ನಮತೀಯರ ತಗಾದೆಯ ಸದ್ದೂ ಕೇಳಿಬಂತು. ಸಂಯುಕ್ತ ಮತ್ತು ಜಾತ್ಯತೀತ ಜನತಾ ದಳದ ಕೆಲವರು ಸಮಾರಂಭದಿಂದ ಹೊರ ನಡೆದರು. ದೇವೇಗೌಡರ ವಿರುದ್ಧ ರಾಜಕೀಯ ಅಪಪ್ರಚಾರ ಮಾಡಲು ಡಿಕೇಶಿ ವೇದಿಕೆ ಬಳಸಿಕೊಳ್ಳುತ್ತಿದ್ದಾರೆ ಎಂದು ಅವರೆಲ್ಲ ದೂರಿದರು.
ಗೌಜು ಗದ್ದಲಗಳ ನಡುವೆ ಸಮಾರಂಭ ಅಂತೂಇಂತೂ ಮುಗಿಯಿತು. ಸಮಾರಂಭ ಮುಗಿದ ಮೇಲೆ ವಿವಿಐಪಿಗಳೆಲ್ಲಾ ಜೇಬೊಳಗೆ ಕೈಯಿಟ್ಟುಕೊಂಡಾಗ, ಭಣಭಣ. ಅವರ ದುಡ್ಡೆಲ್ಲ ಕಳವಾಗಿತ್ತು. ಯಾರೋ ಪ್ರಕಾಂಡ ಕಳ್ಳ ಸುಮಾರು 18 ವಿವಿಐಪಿಗಳ ಜೇಬುಗಳಿಗೇ ಕತ್ತರಿ ಹಾಕಿದ್ದ. ಆದ ಕಳವು ಒಟ್ಟು 40 ಸಾವಿರ ರುಪಾಯಿ. ಒಕ್ಕಲಿಗ ನಾಯಕ ಹಿಂದೂಮಾರನಹಳ್ಳಿ ನಾಗರಾಜ್ ಅವರ 2 ಸಾವಿರ ರುಪಾಯಿ ದುಡ್ಡಿನ ಜೊತೆಗೆ ಹೀರೋ ಹೋಂಡಾ ಬೈಕನ್ನೂ ಕಳ್ಳರು ಕದ್ದೊಯ್ದಿದ್ದರು.
ಉದ್ಘಾಟನೆ ನೆರವೇರಿಸಿದ ನಂತರ ಡಿಕೇಶಿ ಜೇಬಿಗೆ ಕೈ ಇಳಿಬಿಟ್ಟುಕೊಂಡಾಗ ಗೊತ್ತಾಯಿತು, ಅವರದ್ದೂ 8 ಸಾವಿರ ರುಪಾಯಿ ಕಳವಾಗಿತ್ತು !
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications