Get Updates
Get notified of breaking news, exclusive insights, and must-see stories!

ರಾಮಜನ್ಮಭೂಮಿ ನ್ಯಾಸದ ಪರಮಹಂಸರಿಗೆ ಹೃದಯಾಘಾತ

ರಾಮಜನ್ಮಭೂಮಿ ನ್ಯಾಸದ ಪರಮಹಂಸರಿಗೆ ಹೃದಯಾಘಾತ
ಸರ್ಕಾರದ ವಿಶೇಷ ವಿಮಾನದಲ್ಲಿ ಲಕ್ನೋ ಆಸ್ಪತ್ರೆಗೆ ರವಾನೆ

ಫೈಜಾಬಾದ್‌ : ರಾಮಜನ್ಮಭೂಮಿ ನ್ಯಾಸದ ಅಧ್ಯಕ್ಷ ಮಹಂತ ಪರಮಹಂಸ ರಾಮಚಂದ್ರ ದಾಸ್‌ ಅವರು ಗುರುವಾರ (ಜೂ.12) ಬೆಳಗ್ಗೆ ತೀವ್ರ ಹೃದಯಾಘಾತಕ್ಕೆ ತುತ್ತಾಗಿದ್ದು , ಅವರನ್ನು ಲಕ್ನೋ ಆಸ್ಪತ್ರೆಗೆ ದಾಖಲಿಸಲಾಗಿದೆ.

ಪರಮಹಂಸ ರಾಮಚಂದ್ರ ದಾಸ್‌ರು ಗುರುವಾರ ಬೆಳಗ್ಗೆ ಅಯೋಧ್ಯೆಯಲ್ಲಿ ಹೃದಯಾಘಾತಕ್ಕೆ ಈಡಾದರು. ತಕ್ಷಣವೇ ಅವರನ್ನು ಸರ್ಕಾರದ ವಿಶೇಷ ವಿಮಾನದಲ್ಲಿ ಲಕ್ನೋಗೆ ಕರೆತರಲಾಯಿತು. ವಿಮಾನದಲ್ಲಿ ರಾಮಚಂದ್ರ ಅವರೊಂದಿಗೆ ತಜ್ಞ ವೈದ್ಯರುಗಳ ತಂಡ ಕೂಡ ಪ್ರಯಾಣ ಬೆಳೆಸಿತು.

ಗುರುವಾರ ಮುಂಜಾನೆ ರಾಮಚಂದ್ರ ದಾಸರು ಪ್ರಾರ್ಥನೆಗೆ ಸಿದ್ಧವಾಗುತ್ತಿದ್ದ ಸಮಯದಲ್ಲಿ ಹೃದಯಾಘಾತಕ್ಕೀಡಾದರು. ಎರಡು ಬಾರಿ ಹೃದಯಾಘಾತವಾದ ರಾಮಚಂದ್ರ ದಾಸರನ್ನು ಫೈಜಾಬಾದ್‌ ಆಸ್ಪತ್ರೆಗೆ ಸೇರಿಸಲಾಯಿತು ಎಂದು ಅವರ ನಿಕಟವರ್ತಿಗಳು ತಿಳಿಸಿದ್ದಾರೆ.

ರಾಮಚಂದ್ರ ದಾಸರನ್ನು ಲಕ್ನೋಗೆ ಕರೆದೊಯ್ಯುವ ಮುನ್ನ, ಉತ್ತರಪ್ರದೇಶದ ಬಿಜೆಪಿ ರಾಜ್ಯಾಧ್ಯಕ್ಷ ವಿನಯ್‌ ಕಟಿಯಾರ್‌ ಸೇರಿದಂತೆ ಅನೇಕ ಬಿಜೆಪಿ ನಾಯಕರು ಹಾಗೂ ಅಭಿಮಾನಿಗಳು ಫೈಜಾಬಾದ್‌ನ ಆಸ್ಪತ್ರೆಗೆ ಆಗಮಿಸಿ ರಾಮಚಂದ್ರ ದಾಸ್‌ ಅವರ ದೇಹಸ್ಥಿತಿಯನ್ನು ವಿಚಾರಿಸಿದರು.

(ಪಿಟಿಐ)

ಮುಖಪುಟ / ವಾರ್ತೆಗಳು

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+