ಜೂ.7ಕ್ಕೆ ಬೆಂಗಳೂರು ಮಕ್ಕಳ ಜತೆ ಕಲಾಂ ತಾತನ ಊಟ
ಜೂ.7ಕ್ಕೆ ಬೆಂಗಳೂರು ಮಕ್ಕಳ ಜತೆ ಕಲಾಂ ತಾತನ ಊಟ
ಇಸ್ಕಾನ್ನ ಪಾತ್ರೆ ಸದಾ ಅಕ್ಷಯವಾಗಲಿ
ಜೂನ್ 6ನೇ ತಾರೀಕು ಸಂಜೆ ಬೆಂಗಳೂರಿಗೆ ಬರಲಿರುವ ಕಲಾಂ, ಮರುದಿನ ಇಸ್ಕಾನ್ನ ಅಕ್ಷಯ ಪಾತ್ರೆ ಯೋಜನೆಗೆ ಹೊಸ ಆಯಾಮ ಕೊಡಲಿದ್ದಾರೆ. ನಗರದ ಮಹಾನಗರ ಪಾಲಿಕೆಯ ಹಾಗೂ ಸರ್ಕಾರಿ ಶಾಲೆಗಳ ಸುಮಾರು 700 ಮಕ್ಕಳೂ ಸೇರಿದಂತೆ 900 ಬಡ ಶಾಲಾ ಮಕ್ಕಳೊಂದಿಗೆ ಸಾಲಿನಲ್ಲಿ ಕೂತು ಕಲಾಂ ತಾತ ಉಣ್ಣಲಿದ್ದಾರೆ. ಊಟದೊಟ್ಟಿಗೆ ಮಕ್ಕಳು ಕಲಾಂ ಅಜ್ಜನನ್ನು ಮನದಣಿಯೆ ಮಾತಾಡಿಸಬಹುದು. ಚೆಂದದ ಪ್ರಶ್ನೆಗಳಿಗೆ ತಾತ ಅಂದದ ಉತ್ತರ ಕೊಡಲಿದ್ದಾರೆ.
2000ನೇ ಇಸವಿಯಲ್ಲಿ ಶುರುವಾದ ಇಸ್ಕಾನ್ನ ಮಹತ್ವಾಕಾಂಕ್ಷೆಯ ಅಕ್ಷಯ ಪಾತ್ರೆ ಯೋಜನೆ ಈಗ ದೊಡ್ಡದಾಗಿದೆ. 1500 ಮಕ್ಕಳಿಗೆ ಊಟ ಬಡಿಸುವುದರೊಂದಿಗೆ ಶುರುವಾದ ಯೋಜನೆ ಇವತ್ತು 43 ಸಾವಿರ ಮಕ್ಕಳಿಗೆ ಉಣಬಡಿಸುವಷ್ಟು ಬೆಳೆದಿದೆ. ಈ ಶೈಕ್ಷಣಿಕ ವರ್ಷದಲ್ಲಿ 1 ಲಕ್ಷ ಮಕ್ಕಳಿಗೆ ಊಟ ಹಾಕಬೇಕೆಂಬುದು ಇಸ್ಕಾನ್ನ ಗುರಿ. 2005ನೇ ಇಸವಿ ಹೊತ್ತಿಗೆ 2.5 ಲಕ್ಷ ಮಕ್ಕಳಿಗೆ ಊಟ ಬಡಿಸುವುದು ಕನಸು.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications