Get Updates
Get notified of breaking news, exclusive insights, and must-see stories!

ತಣ್ಣಗೆ ಶುರುವಾದ ಅಧಿವೇಶನದಲ್ಲಿ ನಾಗಪ್ಪ ಮಗ, ಅಳಿಯ

ಬೆಂಗಳೂರು : ನಾಗಪ್ಪ ಹತ್ಯೆ ಕುರಿತ ವಿಧಾನಮಂಡಲದ ವಿಶೇಷ ಅಧಿವೇಶನ, ಮೃತ ನಾಯಕನಿಗೆ ಶ್ರದ್ಧಾಂಜಲಿ ಸಲ್ಲಿಸುವುದರ ಮೂಲಕ ಸೋಮವಾರ ಶುರುವಾಯಿತು.

ನಾಗಪ್ಪನವರ ಮಗ ಪ್ರೀತನ್‌ ಹಾಗೂ ಅಳಿಯ ಕಿರಣ್‌ ಪಟೇಲ್‌ ವಿಧಾನಸಭೆಯ ಜನರ ಗ್ಯಾಲರಿಯಲ್ಲಿ ಕೂತು, ಶ್ರದ್ಧಾಂಜಲಿಯನ್ನು ನೋಡಿದರು. ಶ್ರದ್ಧಾಂಜಲಿ ಸಲ್ಲಿಸಿದ ನಂತರ ಸಭೆಯನ್ನುದ್ದೇಶಿಸಿ ಮಾತಾಡಿದ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ, ಹಲವು ವರ್ಷಗಳಿಂದ ಪೀಡೆ ಕೊಡುತ್ತಿರುವ ವೀರಪ್ಪನ್‌ಗೆ ಪೂರ್ಣವಿರಾಮ ಹಾಕಲೇಬೇಕು. ಆತ ತುಂಬಲಾರದ ನಷ್ಟ ಉಂಟುಮಾಡಿದ್ದಾನೆ. ಇದಕ್ಕಾಗಿ ಸರ್ಕಾರ ಬದ್ಧವಾಗಿದ್ದು, ಶತಾಯ ಗತಾಯ ಯತ್ನಿಸುತ್ತಿದೆ ಎಂದರು.

ವೀರಪ್ಪನ್‌ನನ್ನು ಮಟ್ಟ ಹಾಕಲು ಮುಂದಿನ ದಿನಗಳಲ್ಲಿ ದಿಟ್ಟ ಹೆಜ್ಜೆಗಳನ್ನು ಇಡಬೇಕಿದೆ. ನಾಗಪ್ಪನವರ ಹತ್ಯೆ ಕುರಿತಂತೆ ಸಭೆಯ ಸದಸ್ಯರು ಮಂಗಳವಾರದಿಂದ ಎರಡು ದಿನಗಳ ಕಾಲ ಮುಕ್ತವಾಗಿ ಚರ್ಚಿಸಬೇಕು ಎಂದು ಕೃಷ್ಣ ಕರೆ ಕೊಟ್ಟರು. ನಾಗಪ್ಪನವರಿಗಷ್ಟೇ ಅಲ್ಲದೆ, ಕಾಚಿಗೋಡ- ಬೆಂಗಳೂರು ಎಕ್ಸ್‌ಪ್ರೆಸ್‌ ರೈಲು ದುರಂತದಲ್ಲಿ ಸತ್ತ 20 ಮಂದಿಗೆ ಹಾಗೂ ಈಚೆಗೆ ಸಾವಪ್ಪಿದ ಪ್ರಖ್ಯಾತ ನ್ಯಾಯವಾದಿ ನಾನಿ ಫಾಲ್ಕಿವಾಲ ಅವರಿಗೆ ವಿಧಾನಮಂಡಲದ ಉಭಯ ಸದನಗಳು ಶ್ರದ್ಧಾಂಜಲಿ ಸಲ್ಲಿಸಿದವು.

ಶ್ರದ್ಧಾಂಜಲಿ ನಂತರ ಸಭೆಯನ್ನು ಮಂಗಳವಾರಕ್ಕೆ ಮುಂದೂಡಲಾಯಿತು. ಮಂಗಳವಾರ ಹಾಗೂ ಬುಧವಾರ ಉಭಯ ಸದನಗಳಲ್ಲಿ ನಾಗಪ್ಪ ಹತ್ಯೆ ಕುರಿತಂತೆ ಬಿಸಿ ಬಿಸಿ ಚರ್ಚೆಗಳಾಗುವ ನಿರೀಕ್ಷೆಯಿದೆ.

(ಪಿಟಿಐ)

ಮುಖಪುಟ / ವೀರಪ್ಪನ್‌ ಶಿಕಾರಿ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+