ಕಾಲೇಜಿಗೆ ಮರಳೋಣ ಬನ್ನಿ !
ಒಂದು ಕಾಲದಲ್ಲಿ ಒಟ್ಟಿಗೆ ಓದಿ, ಹರಟಿ, ಕಾಲೇಜಿಗೆ ಚಕ್ಕರ್ ಕೊಟ್ಟು ಸಿನಿಮಾ ನೋಡಿ, ಮಾಸ್ತರರಿಗೆ ಅಡ್ಡ ಹೆಸರಿಟ್ಟು ಕರೆದು ಗಹಗಹಿಸಿ ನಕ್ಕು, ಕನಸುಗಳ ಹಂಚಿಕೊಂಡು, ದೇವದಾಸ ಗೆಳೆಯನನ್ನು ಆಡಿಕೊಂಡು... ಏನೆಲ್ಲಾ ಮಾಡಿರುವ ವಿದ್ಯಾರ್ಥಿಗಳು ಎಲ್ಲೋ ಒಂದು ಕಡೆ ಸಂಸಾರ ಕಟ್ಟಿಕೊಂಡಿರುತ್ತಾರೆ. ಓಡುವ ಕಾಲದಲ್ಲಿ ಗಾಣದೆತ್ತಿನಂತೆ ದುಡಿಯುತ್ತಿರುತ್ತಾರೆ. ಒಂದೊಮ್ಮೆ ಮತ್ತೆ ಕಾಲೇಜು ದಿನಗಳತ್ತ ಹೊರಳುವ ಅವಕಾಶ ಸಿಕ್ಕರೆ ಎಷ್ಟು ಚೆನ್ನ ಅಲ್ಲವೇ? ಇಲ್ಲಿ ನೋಡಿ, ಅಂಥ ಅವಕಾಶದ ಸುದ್ದಿ.
ದಾವಣಗೆರೆ ಕುವೆಂಪು ವಿಶ್ವವಿದ್ಯಾಲಯದ ಯುಬಿಡಿಟಿ ಎಂಜಿನಿಯರಿಂಗ್ ಕಾಲೇಜಿನ ಹಳೆಯ ವಿದ್ಯಾರ್ಥಿಗಳೆಲ್ಲಾ (ಅಲ್ಯುಮಿನಿ) ಬೆಂಗಳೂರಲ್ಲಿ ಒಂದೆಡೆ ಸೇರೋದು ಅಂತ ತೀರ್ಮಾನವಾಗಿದೆ. ಬೆಂಗಳೂರಿನಲ್ಲಿರುವ ಹಳೇ ವಿದ್ಯಾರ್ಥಿಗಳು ನೆನಪನ್ನು ಮೆಲುಕು ಹಾಕುವ ಮಜಾ ಕೂಟವನ್ನು ಆಯೋಜಿಸಿದ್ದಾರೆ. ನೀವೂ ಇವರಲ್ಲಿ ಒಬ್ಬರಾಗಿದ್ದರೆ, ತಡ ಮಾಡಬೇಡಿ. ಡೈರಿಯಲ್ಲಿ ಈಗಲೇ ಬರೆದಿಟ್ಟುಕೊಳ್ಳಿ.
ಕಾಲೇಜಿನ ಸ್ವರ್ಣ ಮಹೋತ್ಸವದ ಸಂದರ್ಭವೂ ಆಗಿರುವುದರಿಂದ ಈ ಒಟ್ಟು ಭೇಟಿಗೆ ವಿಶೇಷ ಔಚಿತ್ಯವಿದೆ. ಬೆಂಗಳೂರಿನ ಕೆಂಪೇಗೌಡ ರಸ್ತೆಯ ಕೆಪಿಟಿಸಿಎಲ್ನ ಸಭಾಂಗಣದಲ್ಲಿ ನಡೆಯಲಿರುವ ಈ ಕೂಟದ ಮುಖ್ಯ ಅತಿಥಿ ಕುವೆಂಪು ವಿಶ್ವ ವಿದ್ಯಾಲಯದ ಉಪ ಕುಲಪತಿ ಡಾ.ಕೆ.ಚಿದಾನಂದ ಗೌಡ. ಡಿಸೆಂಬರ್ 22ನೇ ತಾರೀಕು ಭಾನುವಾರ ಬೆಳಗ್ಗೆ 10 ಗಂಟೆಯಿಂದ 1.30 ಗಂಟೆವರೆಗೆ ಎಲ್ಲಾ ಸೇರೋದು ಅಂತ ನಿಶ್ಚಯವಾಗಿದೆ.
ಕೂಟದಲ್ಲಿ ನೆನಪುಗಳ ಮೆಲುಕು ಹಾಕಿದ ನಂತರ ಹಳೇ ವಿದ್ಯಾರ್ಥಿಗಳ ಸಂಘದ ವಾರ್ಷಿಕ ಸಾಮಾನ್ಯ ಸಭೆ ನಡೆಯಲಿದೆ. ರುಚಿಕರ ಊಟವೂ ಉಂಟು.
ಹೆಚ್ಚಿನ ವಿಷಯಗಳಿಗೆ- ಕೆ.ವಿಶ್ವನಾಥ್ (ಸಂಘದ ಬೆಂಗಳೂರು ಕಾರ್ಯದರ್ಶಿ) ಅವರಿಗೆ ಫೋನಾಯಿಸಿ. ನಂಬರುಗಳು- 3333491, 3531407 ಅಥವಾ 8565487.
ಅಲ್ಯುಮಿನಿ ವೆಬ್ಸೈಟು- ಮುಖಪುಟ / ಇವತ್ತು... ಈ ಹೊತ್ತು...
-
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ












Click it and Unblock the Notifications