ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ವೀರಪ್ಪನ್ ಸಿಗೋದಿರಲಿ, ಎಸ್ಟಿಎಫ್ ಪೊಲೀಸರೇ ನಾಪತ್ತೆ !
ಬೆಂಗಳೂರು : ನಾಗಪ್ಪ ಹತ್ಯೆ ನಂತರ ಎಸ್ಟಿಫ್ ಕೆನೆದಾಟ ಜೋರಾಗೇ ಶುರುವಾಯಿತಾದರೂ, ಈವರೆಗಿನ ಅದರ ಹೆಜ್ಜೆ ಜಾಡು ಏನೆಂದು ಇನ್ನೂ ಗೊತ್ತಾಗಿಲ್ಲ. ಕಾಡಲ್ಲಿ ಕಾರ್ಯಾಚರಣೆ. ನಾಡಲ್ಲಿ ಸರ್ಕಾರದ ಮೇಲೆ ಕಿಡಿ ಮುಂದುವರೆದೇ ಇದೆ.
ನಾಗಪ್ಪ ಹತ್ಯೆಯ ಹಿನ್ನೆಲೆಯಲ್ಲಿ ಬುಧವಾರ (ನ.18) ಕಂಡದ್ದು, ಕೇಳಿದ್ದು-
- ಪೊಲೀಸ್ ಮೂಲಗಳ ಪ್ರಕಾರ ಮೂವರು ಎಸ್ಟಿಎಫ್ ಪೊಲೀಸರು ನಾಪತ್ತೆ ! ಮಲೆ ಮಹದೇಶ್ವರ ಬೆಟ್ಟ ಪ್ರದೇಶದಲ್ಲಿ ಹುಡುಕಾಟ.
- ವೀರಪ್ಪನ್ ಸೆರೆಯಾದರೆ ಅನೇಕ ರಾಜಕಾರಣಿಗಳ, ಪೊಲೀಸರ ಅಸಲಿಯತ್ತು ಬಯಲಿಗೆ : ಮಾಧವ ತೀರ್ಥ ಶ್ರೀಪಾದ ಸ್ವಾಮೀಜಿ.
- ಬೆಂಗಳೂರಲ್ಲಿ ಪೊನ್ನಾಚಿ ಮಹದೇವ ಸ್ವಾಮಿ. ಈತ ಪೊಲೀಸರ ಅತಿಥಿಯೆಂಬುದು ವದಂತಿ. ನಾಗಪ್ಪನವರ ಡೈರಿಯಲ್ಲಿ ಬರೆದಿರುವಂತೆ ಮಹದೇವ ಸ್ವಾಮಿ ಎರಡು ಬಾರಿ ಕಾಡಿಗೆ ಹೋಗಿದ್ದಾರೆ. ಈ ಬಗ್ಗೆ ಗುಪ್ತ ಸಮಾಲೋಚನೆ ಸಂಭವ.
- ನ್ಯಾಯಾಂಗ ತನಿಖೆ ನಾಚಿಕೆಗೇಡಿನ ಸಂಗತಿ : ಕನ್ನಡ ಚಳವಳಿಕಾರ ಜಿ.ನಾರಾಯಣ ಕುಮಾರ್.
- ನಾಗಪ್ಪ ಹತ್ಯೆಯನ್ನು ಕೆಲವು ಮಠಾಧೀಶರು ರಾಜಕೀಯದ ಬೇಳೆ ಬೇಯಿಸಿಕೊಳ್ಳಲು ಬಳಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿರುವ ಅಖಿಲ ಕರ್ನಾಟಕ ಆದರ್ಶ ಕನ್ನಡಾಭಿಮಾನಿಗಳ ಸಂಘದಿಂದ ಬೆಂಗಳೂರಲ್ಲಿ ಮೌನ ಮೆರವಣಿಗೆ.
- ನಾಗಪ್ಪನವರ ವಿಷಯದಲ್ಲಿ ದಿವ್ಯ ನಿರ್ಲಕ್ಷ್ಯ ತಳೆದ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ರಾಜೀನಾಮೆ ಕೊಡಲಿ : ನಾಗಪ್ಪ ಶ್ರದ್ಧಾಂಜಲಿ ಸಭೆಯಲ್ಲಿ ವಾಟಾಳ್ ನಾಗರಾಜ್.
ಮುಖಪುಟ / ವೀರಪ್ಪನ್ ಶಿಕಾರಿ
Comments
Story first published: Tuesday, December 3, 2002, 5:30 [IST]