ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೀರಪ್ಪನ್‌ ಬೇಟೆಗೆ ವಿಶೇಷ ಕಮಾಂಡೋ ಪಡೆ

By Staff
|
Google Oneindia Kannada News

ಬೆಂಗಳೂರು : ವೀರಪ್ಪನ್‌ ಶಿಕಾರಿಗೆ ಬೆಳಗಾವಿಯಲ್ಲಿ ತರಪೇತಿ ಪಡೆದಿರುವ ವಿಶೇಷ ಕಮಾಂಡೋ ಪಡೆಯನ್ನು ಕರೆಸಿಕೊಳ್ಳುವ ಯತ್ನವನ್ನು ಕರ್ನಾಟಕ ಸರ್ಕಾರ ನಡೆಸುತ್ತಿರುವುದಾಗಿ ಗೃಹ ಸಚಿವ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

ವೀರಪ್ಪನ್‌ ಶಿಕಾರಿ ಕುರಿತು ಮಂಗಳವಾರ ಸುದ್ದಿಗಾರರ ಜೊತೆ ಖರ್ಗೆ ಮಾತಾಡುತ್ತಿದ್ದರು. ಕಡಿಮೆ ಆಹಾರ ತಿಂದು, ಪ್ರತಿಕೂಲ ಹವಾಮಾನದಲ್ಲೂ ಕೆಲಸ ಮಾಡಬಲ್ಲ ತಾಕತ್ತು ಈ ವಿಶೇಷ ಕಮಾಂಡೋ ಪಡೆಗೆ ಇದೆ. ಗೆರಿಲ್ಲಾ ಯುದ್ಧಕ್ಕೆ ತಕ್ಕಂತೆ ಈ ಪಡೆ ಪಳಗಿದೆ. ಇನ್ನು ಹದಿನೈದು ದಿನದೊಳಗೆ ಈ ಪಡೆ ಹಾಗೂ ಅರೆ ಮಿಲಿಟರಿ ಪಡೆಯನ್ನು ನಿಯೋಜಿಸುವ ನಿಟ್ಟಿನಲ್ಲಿ ಪ್ರಯತ್ನಗಳು ನಡೆಯುತ್ತಿವೆ ಎಂದರು.

ಕರ್ನಾಟಕ, ತಮಿಳುನಾಡು ಮತ್ತು ಕೇರಳ ಮುಖ್ಯಮಂತ್ರಿಗಳ ಜೊತೆ ಒಟ್ಟಾಗಿ ಚರ್ಚಿಸಿ, ವೀರಪ್ಪನ್‌ ಶಿಕಾರಿ ಕಾರ್ಯತಂತ್ರ ರೂಪಿಸಬೇಕೆಂಬ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಮನವಿಗೆ ಪ್ರಧಾನಿ ವಾಜಪೇಯಿ ಇನ್ನೂ ಪ್ರತಿಕ್ರಿಯೆ ಕೊಟ್ಟಿಲ್ಲ. ವೀರಪ್ಪನ್‌ ಬೇಟೆಗೆ ಅಗತ್ಯವಿರುವ ಸಲಕರಣೆ/ಉಪಕರಣಗಳನ್ನು ಒದಗಿಸುವಂತೆ ಕೇಂದ್ರ ಸರ್ಕಾರದ ಜೊತೆ ಮಾತುಕತೆ ನಡೆಸುತ್ತಿದ್ದೇವೆ ಎಂದ ಖರ್ಗೆ, ವೀರಪ್ಪನ್‌ ಶಿಕಾರಿಯಲ್ಲಿ ಇದುವರೆಗಿನ ಬೆಳವಣಿಗೆ ಕುರಿತ ಮಾಹಿತಿ ನೀಡಲು ನಿರಾಕರಿಸಿದರು.

(ಪಿಟಿಐ)

ಮುಖಪುಟ / ವೀರಪ್ಪನ್‌ ಶಿಕಾರಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X