ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಖಾಕಿ ಪೇದೆಗಳ ಬಿಗಿ ಪಹರೆ ನಡುವೆ ದತ್ತ ಜಯಂತಿ
ಚಿಕ್ಕ ಮಗಳೂರು : ಬಾಬಾ ಬುಡನ್ಗಿರಿಯ ದತ್ತ ಪೀಠದಲ್ಲಿ ಮೂರು ದಿನಗಳ ಕಾಲ ನಡೆಯುವ ದತ್ತ ಜಯಂತಿ ಮಂಗಳವಾರ ತಣ್ಣಗೆ ಶುರುವಾಗಿದೆ.
ಗಣಪತಿ ಹೋಮದೊಂದಿಗೆ ಪ್ರಾರಂಭವಾದ ಆಚರಣೆ ಮೂರು ದಿನಗಳ ಕಾಲ ನಡೆಯಲಿದೆ. ಮೊದಲ ದಿನವೇ ಸಾವಿರಾರು ಭಕ್ತರ ದಂಡು ಉತ್ಸವ ನೋಡಲು ನೆರೆದಿತ್ತು. ಯಾವುದೇ ಅಹಿತಕರ ಘಟನೆ ನಡೆಯದಂತೆ ಕಣ್ಣಿಡಲು 6 ಸಾವಿರ ಪೊಲೀಸರ ದೊಡ್ಡ ದಂಡು ಬಾಬಾ ಬುಡನ್ಗಿರಿಯಲ್ಲಿ ನೆರೆದಿದೆ.
ಬುಧವಾರ (ಡಿ.18) ಚಿಕ್ಕ ಮಗಳೂರು ಜಿಲ್ಲಾ ಕೇಂದ್ರದಿಂದ ಶೋಭಾ ಯಾತ್ರೆ ಪ್ರಾರಂಭವಾಗಲಿದ್ದು, ಡಿಸೆಂಬರ್ 19ರಂದು ಉತ್ಸವದಲ್ಲಿ ಪ್ರಮುಖ ಪೂಜೆ ನಡೆಯಲಿದೆ. ಖುದ್ದು ದತ್ತ ಭಕ್ತರೂ ಆಗಿರುವ ಎಡಿಜಿ ಸುಭಾಷ್ ಭರಣಿ, ಪಶ್ಚಿಮ ವಲಯದ ಐಜಿಪಿ ಧರ್ಮಪಾಲ ನೇಗಿ ಹಾಗೂ ಚಿಕ್ಕಮಗಳೂರು ಎಸ್ಪಿ ಸ್ಥಳದಲ್ಲಿ ನಿಂತು ಭದ್ರತೆಯ ಕಡೆ ನಿಗಾ ವಹಿಸಿದ್ದಾರೆ.
ಮಾಗಿಯ ಕೊರೆಯುವ ಚಳಿಗೆ ಉತ್ತರ ಕರ್ನಾಟಕದ ಪೊಲೀಸರು ನಡುಗುತ್ತಿದ್ದರು. ಪಾಪ, ಅವರಿಗೆ ಈವರೆಗೆ ಈ ಪಾಟಿ ಚಳಿಯ ಬಿಸಿ ತಟ್ಟೇ ಇರಲಿಲ್ಲವೇನೋ? !
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...
Comments
Story first published: Tuesday, December 24, 2002, 5:30 [IST]