‘ದೇವರಾಣೆ, ನಾಗಪ್ಪನವರಿಗೆ ಹೊಡೆದದ್ದು ನಾನಲ್ಲ ..’
ಬೆಂಗಳೂರು : ‘ಕೈ ಮುಗಿದು ಹೇಳುತ್ತೇನೆ. ದೇವರಾಣೆ ಮಾಡಿ ಹೇಳುತ್ತೇನೆ, ನನ್ನನ್ನು ನಂಬಿ. ನಾಗಪ್ಪನವರ ಮೇಲೆ ದಾಳಿ ನಡೆಸಿದ್ದು ತಮಿಳುನಾಡು ಪೊಲೀಸರೇ ಹೊರತು ನಾನಲ್ಲ .’
ಕರ್ನಾಟಕ ಸರ್ಕಾರಕ್ಕೆ ಕಳುಹಿಸಿರುವ ಆರನೇ ಕೆಸೆಟ್ನಲ್ಲಿ ವೀರಪ್ಪನ್ ಅಲವತ್ತುಕೊಂಡಿರುವುದು ಹೀಗೆ. ನನ್ನ ಮಾತನ್ನು ನಂಬಿ ಎದು ಪದೇಪದೇ ಒತ್ತಿ ಹೇಳಿರುವ ವೀರಪ್ಪನ್, ನಾಗಪ್ಪನವರ ಸಾವಿಗೆ ತಮಿಳುನಾಡು ಪೊಲೀಸರೇ ಹೊಣೆ ಎಂದು ಆಪಾದಿಸಿದ್ದಾನೆ. ನಾಗಪ್ಪನವರಿಗೆ ಗುಂಡು ತಗುಲಿರುವುದಕ್ಕೆ ತಮಿಳುನಾಡು ಪೊಲೀಸರು ಹಾಗೂ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರನ್ನು 15 ನಿಮಿಷಗಳ ಕೆಸೆಟ್ ಮಾತಿನಲ್ಲಿ ವೀರಪ್ಪನ್ ನಿಂದಿಸಿದ್ದಾನೆ.
ಗುರುವಾರ (ಡಿ.5) ಬೆಳಗ್ಗೆ ಚೆಂಗಾಡಿ ಬೆಟ್ಟದಲ್ಲಿ ಅಡಗುತಾಣ ಬದಲಿಸುತ್ತಿದ್ದಾಗ ತಮಿಳುನಾಡು ವಿಶೇಷ ಕಾರ್ಯಪಡೆ ಪೊಲೀಸರು ಏಕಾಏಕಿ ದಾಳಿ ನಡೆಸಿದರು. ಸೇತುಕುಳಿ ಗೋವಿಂದ ಪೊಲೀಸರ ಮೇಲೆ ಗುಂಡು ಹಾರಿಸಿದ. ತಪ್ಪಿಸಿಕೊಳ್ಳುವಂತೆ ನಾಗಪ್ಪನವರಿಗೆ ಸೂಚಿಸಿದೆ. ಅವರು ಎಚ್ಚತ್ತುಕೊಳ್ಳುವಲ್ಲಿ ಅವರಿಗೆ ಗುಂಡು ತಗುಲಿತು ಎಂದು ವೀರಪ್ಪನ್ ಹೇಳಿದ್ದಾನೆ.
ನನ್ನ ಬಳಿ ಇರುವವರೆಗೂ ನಾಗಪ್ಪನವರನ್ನು ಚೆನ್ನಾಗಿ ನೋಡಿಕೊಂಡಿದ್ದೇನೆ. ಅವರಿಗೆ ಬ್ರೆಡ್-ಜಾಮ್ ತಂದುಕೊಟ್ಟಿದ್ದೇನೆ. ಎಸ್ಟಿಎಫ್ ದಾಳಿಯ ಸಮಯದಲ್ಲಿ ಅವರು ತಪ್ಪಿಸಿಕೊಂಡಿದ್ದು , ಅವರನ್ನು ಸುರಕ್ಷಿತವಾಗಿ ಕರೆದುಕೊಂಡು ಹೋಗಿ ಎಂದು ವೀರಪ್ಪನ್ ಕೆಸೆಟ್ನಲ್ಲಿ ತಿಳಿಸಿದ್ದಾನೆ. ಈ ಕೆಸೆಟ್ ನಾಗಪ್ಪನವರ ಕಾಮಗೆರೆ ನಿವಾಸದ ಬಳಿ ಭಾನುವಾರ(ಡಿ.8) ದೊರೆಯಿತು.
ಜಯಾ, ಥೇವರಂ ನಿರಾಕರಣೆ :
ವೀರಪ್ಪನ್ ಮೇಲೆ ತಮಿಳುನಾಡು ಎಸ್ಟಿಎಫ್ ದಾಳಿ ನಡೆಸಿದೆ ಎನ್ನುವ ವೀರಪ್ಪನ್ ಆರೋಪವನ್ನು ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಹಾಗೂ ಎಸ್ಟಿಎಫ್ ಮುಖ್ಯಸ್ಥ ವಾಲ್ಟರ್ ಥೇವರಂ ನಿರಾಕರಿಸಿದ್ದಾರೆ. ಕರ್ನಾಟಕದ ಅರಣ್ಯ ಪ್ರದೇಶಕ್ಕೆ ತಮಿಳುನಾಡು ಎಸ್ಟಿಎಫ್ ಕಾಲಿಟ್ಟಿದ್ದೇ ಇಲ್ಲ . ಹೀಗಿರುವಾಗ ದಾಳಿಯ ಮಾತು ಎಲ್ಲಿಂದ ಬಂತು ಎಂದು ಥೇವರಂ ಹೇಳಿದ್ದಾರೆ.
(ಏಜೆನ್ಸೀಸ್)
ಮುಖಪುಟ / ವೀರಪ್ಪನ್ ಶಿಕಾರಿ
-
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ












Click it and Unblock the Notifications