ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಕೊಪ್ಪಳ ಜಿಲ್ಲೆಯಲ್ಲಿ ರಾಜ್ಯದಲ್ಲೇ ಕಡಿಮೆ ಮಳೆ
15
ಜಿಲ್ಲೆಗಳಲ್ಲಿ
ಅಧಿಕ,
7
ಜಿಲ್ಲೆಗಳಲ್ಲಿ
ಮಾಮೂಲು,
4
ಜಿಲ್ಲೆಗಳಲ್ಲಿ
ಸಾಧಾರಣ
ಕೊರತೆ
ಹಾಗೂ
1
ಜಿಲ್ಲೆಯಲ್ಲಿ
ತೀವ್ರ
ಕೊರತೆ.
-
ಇದು
ಬರ
ಪರಿಹಾರ
ಉಸ್ತುವಾರಿ
ಕೋಶ
ನೀಡಿರುವ
ರಾಜ್ಯದ
ಕಳೆದ
1
ತಿಂಗಳಲ್ಲಿನ
ಮಳೆ
ಪಂಚಾಂಗದ
ವರದಿ.
ರಾಜ್ಯದ ಬಹುತೇಕ ಜಲಾಶಯಗಳಲ್ಲಿ ನೀರಿನ ಕೊರತೆಯಿದ್ದು , ಬಿತ್ತನೆ ಪ್ರಮಾಣವೂ ಕಳೆದ ವರ್ಷಕ್ಕಿಂತ ಕಡಿಮೆ ಪ್ರಮಾಣದಲ್ಲಿದೆ. ಕಳೆದ 1 ತಿಂಗಳಲ್ಲಿ ರಾಜ್ಯದ 79 ತಾಲ್ಲೂಕುಗಳಲ್ಲಿ ಉತ್ತಮ ಮಳೆಯಾಗಿದೆ. 46 ತಾಲ್ಲೂಕುಗಳಲ್ಲಿ ಮಾಮೂಲಿ ಮಳೆಯಾಗಿದ್ದು , 50 ತಾಲ್ಲೂಕುಗಳಲ್ಲಿ ಮಳೆಯ ಕೊರತೆ ಕಾಣಿಸಿದೆ ಎಂದು ಬರ ಪರಿಹಾರ ಉಸ್ತುವಾರಿ ಸಮಿತಿ ವರದಿ ತಿಳಿಸಿದೆ.
ಮಳೆಯ ಸಾಧಾರಣ ಕೊರತೆ ಇರುವ ಜಿಲ್ಲೆಗಳ ಯಾದಿಯಲ್ಲಿ ಬೆಂಗಳೂರು ಗ್ರಾಮಾಂತರ, ಕೋಲಾರ, ದಾವಣಗೆರೆ ಮತ್ತು ಬಳ್ಳಾರಿ ಜಿಲ್ಲೆ ಸೇರಿವೆ. ಕೊಪ್ಪಳ ಜಿಲ್ಲೆ ಮಳೆಯ ತೀವ್ರ ಕೊರತೆ ಎದುರಿಸಿದೆ ಎಂದು ಉಸ್ತುವಾರಿ ಸಮಿತಿ ವರದಿ ತಿಳಿಸಿದೆ.
(ಇನ್ಫೋ ವಾರ್ತೆ)
ಮುಖಪುಟ / ಕಾವೇರಿ ಕನ್ನಡಿ
Comments
Story first published: Saturday, November 9, 2002, 5:30 [IST]