ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ನಾಡಹಬ್ಬ ದಸರಾಕ್ಕೆಅದ್ದೂರಿಯ ಲೇಪ ನೀಡಲು ಸರ್ಕಾರದ ಸಂಕಲ್ಪ
ಮೈಸೂರು : ಪ್ರತಿವರ್ಷ ಯಾವುದಾದರೊಂದು ಕಾರಣದಿಂದ ಕಳೆಗುಂದುವ ನಾಡಹಬ್ಬ ದಸರಾಕ್ಕೆ ಮತ್ತೆ ಜೀವ ತುಂಬಲು ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ನಿರ್ಧರಿಸಿದ್ದಾರೆ.
ಈ ಬಾರಿಯ ದಸರಾ ಮಹೋತ್ಸವವನ್ನು ಅದ್ದೂರಿಯಾಗಿ ಆಚರಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಇದಕ್ಕಾಗಿ ಐಎಎಸ್ ಅಧಿಕಾರಿಯನ್ನು ನೇಮಿಸಲಾಗುವುದು ಎಂದು ಶನಿವಾರ ವಸ್ತು ಪ್ರದರ್ಶನ ಆವರಣದಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡುತ್ತಿದ್ದ ಕೃಷ್ಣ ಹೇಳಿದರು.
ಇಡೀ ದೇಶದಲ್ಲಿ ಅತ್ಯಂತ ವ್ಯವಸ್ಥಿತವಾಗಿ ಹಾಗೂ ಆಕರ್ಷಕವಾಗಿ ನಡೆಯುತ್ತಿರುವುದು ಮೈಸೂರಿನ ದಸರಾ ವಸ್ತು ಪ್ರದರ್ಶನ ಮಾತ್ರ. ಆದರೆ, ಸಂಪನ್ಮೂಲಗಳ ಕೊರತೆಯಿಂದಾಗಿ ಮತ್ತಷ್ಟು ವಿಜೃಂಭಣೆ ಸಾಧ್ಯವಾಗಿಲ್ಲ . ಮುಂದಿನ ದಿನಗಳಲ್ಲಿ ಸಿಂಗಾಪುರ ಮಾದರಿಯಲ್ಲಿ ವಸ್ತು ಪ್ರದರ್ಶನ ನಡೆಸಲಾಗುವುದು.
(ಇನ್ಫೋ ವಾರ್ತೆ)
ಮುಖಪುಟ / ಕೃಷ್ಣ ಗಾರುಡಿ
Comments
Story first published: Sunday, June 30, 2002, 5:30 [IST]