ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಪೇಂದ್ರ ಹುಚ್ಚು ಸೃಷ್ಟಿ ಎಚ್‌ಟುಒ ಚಿತ್ರವ ಸರ್ಕಾರ ನಿಷೇಧಿಸಲಿ- ವಾಟಾಳ್‌

By Staff
|
Google Oneindia Kannada News

ಬೆಂಗಳೂರು : ಕನ್ನಡಿಗರ ಭಾವನೆಗಳನ್ನು ನೋಯಿಸುವ ಉಪೇಂದ್ರ ಅಭಿನಯದ ಎಚ್‌ಟುಒ ಚಿತ್ರವನ್ನು ಸರ್ಕಾರ ಕೂಡಲೇ ನಿಷೇಧಿಸಬೇಕೆಂದು ಕನ್ನಡ ಚಳವಳಿ ಪಕ್ಷದ ಮುಖಂಡ ವಾಟಾಳ್‌ ನಾಗರಾಜ್‌ ಒತ್ತಾಯಿಸಿದ್ದಾರೆ.

ಕಾವೇರಿಯಂಥ ಸೂಕ್ಷ್ಮ ವಿಷಯವನ್ನು ಇಟ್ಟುಕೊಂಡು ಎಚ್‌ಟುಒ ಚಿತ್ರವನ್ನು ನಿರ್ಮಿಸಲಾಗಿದೆ. ಈ ಚಿತ್ರ ಕನ್ನಡಿಗರ ಹಿತಾಸಕ್ತಿಗೆ ಧಕ್ಕೆ ತರುವ ಅಂಶಗಳನ್ನು ಒಳಗೊಂಡಿದೆ. ಆ ಕಾರಣದಿಂದಾಗಿ ಎಚ್‌ಟುಒ ಚಿತ್ರವನ್ನು ರಾಜ್ಯ ಸರ್ಕಾರ ನಿಷೇಧಿಸಬೇಕೆಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಾಟಾಳ್‌ ಹೇಳಿದರು.

ತಮಿಳು ಸಂಭಾಷಣೆಯೇ ಹೆಚ್ಚಾಗಿರುವ ಈ ಚಿತ್ರವನ್ನು ಸರ್ಕಾರದ ಉನ್ನತ ಅಧಿಕಾರಿಗಳು ವೀಕ್ಷಿಸಿ ಆನಂತರ ನಿಷೇಧಿಸಬೇಕು ಎಂದು ಒತ್ತಾಯಿಸಿದ ವಾಟಾಳ್‌, ಇಂಥ ಚಿತ್ರವನ್ನು ನಿರ್ಮಿಸಿದ ಉಪೇಂದ್ರ ಅವರ ಅಭಿರುಚಿ ಹುಚ್ಚುತನದ ಪರಮಾವಧಿ ಎಂದು ಬಣ್ಣಿಸಿದರು. ಚಿತ್ರದಲ್ಲಿನ ಕನ್ನಡಿಗರ ಭಾವನೆ ಕೆರಳಿಸುವ ಅಂಶಗಳನ್ನು ತೆಗೆದು ಹಾಕಲು ಚಿತ್ರದ ನಿರ್ಮಾಪಕ ಧನರಾಜ್‌ರಿಗೆ ಎರಡು ದಿನಗಳ ಕಾಲಾವಕಾಶ ನೀಡಲಾಗಿದೆ. ಈ ಅವಧಿಯಾಳಗೆ ಧನರಾಜ್‌ ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ , ಏಪ್ರಿಲ್‌ 6 ರಂದು ಕನ್ನಡ ಕಲಾವಿದರು, ಸಾಹಿತಿಗಳು, ಹೋರಾಟಗಾರರ ಸಭೆ ಕರೆದು ಚಿತ್ರ ಪ್ರದರ್ಶನ ರದ್ದು ಮಾಡಲು ಹೋರಾಟದ ರೂಪುರೇಷೆ ನಿರ್ಧರಿಸಲಾಗುವುದು ಎಂದು ವಾಟಾಳ್‌ ತಿಳಿಸಿದರು.

ಕೆಟ್ಟ ಕನ್ನಡ ಚಿತ್ರಗಳಿಗೆ ಕಡಿವಾಣ ಹಾಕುವಂತೆ ಒತ್ತಾಯಿಸಿದ ವಾಟಾಳ್‌, ಎಚ್‌ಟುಒ ಅಂಥ ಚಿತ್ರದ ಪ್ರದರ್ಶನಕ್ಕೆ ಅನುಮತಿ ನೀಡಿರುವ ಸೆನ್ಸಾರ್‌ ಮಂಡಳಿಯ ಕ್ರಮವನ್ನು ಟೀಕಿಸಿದರು.
(ಇನ್ಫೋ ವಾರ್ತೆ)

ಜಲ ವಿವಾದ
ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X