ಪಾಕ್ನಲ್ಲಿನ ರಾಯಭಾರಿಕಚೇರಿಗೆ ಬೀಗ, ಝಹೀಫ್ಗೆ ಬೇಜಾರು
ಇಸ್ಲಮಾಬಾದ್: ಅಬ್ದುಲ್ ಸಲಾಂ ಝಹೀಫ್ ಅವರೀಗ ಅಸಮಾಧಾನದ ಅಸಂತೃಪ್ತ ಮನುಷ್ಯ. ಮಿತ್ರ ರಾಷ್ಟ್ರವೆಂದು ನಂಬಿದ್ದ ಪಾಕಿಸ್ತಾನ ಬೆನ್ನು ತಿರುಗಿಸಿದೆ. ಪಾಕಿಸ್ತಾನದಲ್ಲಿನ ತಾಲಿಬಾನ್ನ ರಾಯಭಾರಿ ಕಚೇರಿಯನ್ನು ಮುಷರ್ರಫ್ ಆಡಳಿತ ಮುಚ್ಚುವಂತೆ ಆದೇಶ ಹೊರಡಿಸಿದೆ. ಪರಿಣಾಮ, ಈವರೆಗೆ ಪಾಕ್ನಲ್ಲಿ ತಾಲಿಬಾನ್ ರಾಯಭಾರಿಯಾಗಿದ್ದ ಝಹೀಫ್ಗೆ ಬೇಜಾರು.
ಪಾಕಿಸ್ತಾನದ ಕ್ರಮದಿಂದಾಗಿ ಆಪ್ಘಾನಿಸ್ತಾನದಲ್ಲಿನ ನೆರವು ಕಾರ್ಯಕ್ರಮಗಳಿಗೆ ಧಕ್ಕೆಯಾಗುವುದು. ಅಂತರರಾಷ್ಟ್ರೀಯ ಸಂಸ್ಥೆಗಳು ಆಪ್ಘನಿಸ್ತಾನದೊಂದಿಗೆ ಸಂಪರ್ಕ ಸಾಧಿಸಲು ಕಷ್ಟವಾಗುವುದು ಎಂದು ಝಹೀಫ್ ಹೇಳಿದ್ದಾರೆ. ಬಿಬಿಸಿಗೆ ನೀಡಿದ ಸಂದರ್ಶನದಲ್ಲಿ ಪಾಕ್ ಕ್ರಮದ ಬಗ್ಗೆ ಅಸಂತೋಷ ವ್ಯಕ್ತಪಡಿಸಿದ ಅವರು ನಿಟ್ಟುಸಿರಿಟ್ಟರು.
ರಾಯಭಾರಿ ಕಚೇರಿ ಮುಚ್ಚಿದರೂ ಇಸ್ಲಮಾಬಾದ್ನಲ್ಲೇ ಝಹೀಫ್ ಉಳಿಯುತ್ತಾರಂತೆ. ಏಕೆಂದರೆ, ತವರು ಆಪ್ಘನಿಸ್ತಾನದಲ್ಲಿ ಪರಿಸ್ಥಿತಿ ಸರಿಯಿಲ್ಲ . ಆ ಕಾರಣದಿಂದಾಗಿ ಪಾಕ್ನಲ್ಲೇ ಇರುವ ಆಸೆ ಝಹೀಫ್ಗೆ. ಅಂದಹಾಗೆ, ಪಾಕ್ನಲ್ಲಿ ನ ತಾಲಿಬಾನ್ ಕಚೇರಿಯನ್ನು ಮುಚ್ಚುವ ನಿರ್ಧಾರ ಹೊರಬಿದ್ದದ್ದು ನವಂಬರ್ 22 ರಂದು. ಇದಕ್ಕೂ ಮುನ್ನ ಕ್ವೆಟ್ಟಾ ಹಾಗೂ ಪೇಷಾವರ್ನಲ್ಲಿನ ತಾಲಿಬಾನ್ ರಾಜತಾಂತ್ರಿಕರು ಕಳೆದ ವಾರ ತಮ್ಮ ಕಚೇರಿಗಳನ್ನು ಮುಚ್ಚಿದ್ದರು.
(ಪಿಟಿಐ)
ಮುಖಪುಟ / ‘ಆಪರೇಷನ್ ಎಂಡ್ಯೂರಿಂಗ್ ಫ್ರೀಡಂ’
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications