ಕ್ಯಾನ್ಸರ್ಗೆ ಹೊಸ ಚಿಕಿತ್ಸೆ : ಕಿದ್ವಾಯಿ ವೈದ್ಯರಿಗೆ 20 ಲಕ್ಷ ರು. ದೇಣಿಗೆ
ಬೆಂಗಳೂರು : ಕರ್ನಾಟಕದಲ್ಲಿ ಪ್ರತಿವರ್ಷ 35 ಸಾವಿರ ಮಂದಿ ಕ್ಯಾನ್ಸರ್ ರೋಗದ ತಪಾಸಣೆಗೊಳಗಾಗುತ್ತಾರೆ. ಈ ಪೈಕಿ 5 ಸಾವಿರ ಮಂದಿ ಬದುಕುವುದಿಲ್ಲ. ಕಾರಣ, ಚಿಕಿತ್ಸೆ ನೀಡಬಹುದಾದ ಹಂತವನ್ನು ರೋಗ ಮೀರಿಬಿಟ್ಟಿರುತ್ತದೆ.
ಕಿದ್ವಾಯಿ ಸ್ಮಾರಕ ಗ್ರಂಥಿ ಸಂಸ್ಥೆಯ ಡಾ। ಎಂ.ವಿಜಯ ಕುಮಾರ್ ಶನಿವಾರ ಎಕ್ಸ್ಪ್ಲೋಸಿಟಿ ಡಾಟ್ ಕಾಂಗೆ ಈ ವಿಷಯ ತಿಳಿಸಿದ್ದಾರೆ. ಟೆರ್ರಿ ಫಾಕ್ಸ್ ಸಂಸ್ಥೆ ಕಳೆದ ನವೆಂಬರ್ 4ರಂದು ಅಭಿಯಾನ ನಡೆಸಿ, ಕ್ಯಾನ್ಸರ್ ನಿರ್ಮೂಲನೆಗೆಂದು ಸಂಗ್ರಹಿಸಿದ ಹಣದಲ್ಲಿ 20 ಲಕ್ಷ ರುಪಾಯಿಯನ್ನು ಶುಕ್ರವಾರ ಡಾ। ಎಂ.ವಿಜಯ ಕುಮಾರ್ ಅವರಿಗೆ ಕೊಟ್ಟಿದೆ. ಈ ಕುರಿತು ಅವರು ಮಾತಾಡುತ್ತಿದ್ದರು. ಕ್ಯಾನ್ಸರ್ ನಿರ್ಮೂಲನೆಗಾಗಿ ಈ ವೈದ್ಯ ನಡೆಸುತ್ತಿರುವ ಸಂಶೋಧನೆಗೆ ಈ ಹಣ ವಿನಿಯೋಗವಾಗಲಿದೆ.
ಭಾರತದಲ್ಲಿ ನ ಕ್ಯಾನ್ಸರ್ ರೋಗಿಗಳ ಪೈಕಿ ಮೂರನೇ ಒಂದರಷ್ಟು ಬಾಯಿಗೆ ಸಂಬಂಧಿಸಿದ್ದು. ಕಿದ್ವಾಯಿಯಲ್ಲಿ ನಾವು ಪತ್ತೆ ಮಾಡುವ ರೋಗಿಗಳಲ್ಲಿ ಪ್ರತಿಶತ 25ರಷ್ಟು ಜನರಿಗೆ ಬಾಯಿಗೆ ಸಂಬಂಧಿಸಿದ ಕ್ಯಾನ್ಸರ್ ಇರುತ್ತದೆ. ಈ 25 ಜನರಲ್ಲಿ 11 ಪುರುಷರು, 14 ಹೆಂಗಸರು. ಬಾಯಿ ಕ್ಯಾನ್ಸರ್ಗೆ ನೀಡುತ್ತಿರುವ ಓಬಿರಾಯನ ಕಾಲದ ಚಿಕಿತ್ಸೆಯನ್ನು ಮೀರಿ ಬೆಳೆಯುವ ಮಹದಾಸೆ ನನ್ನದು. ಅದಕ್ಕಾಗಿ ಕೆಮಿಯೋಥೆರಪಿ ಮಾಡಬೇಕೆಂದಿದ್ದೇನೆ. ಸಿಸ್ಪ್ಲಾರಿನ್ ಮತ್ತು ಪ್ಯಾಕ್ಲಿಟ್ಯಾಕ್ಸೆಲ್ನಂಥಾ ಏಜೆಂಟ್ಗಳನ್ನು ಬಳಸಿ, ಸಂಶೋಧನೆ ನಡೆಸುತ್ತಿದ್ದೇನೆ ಎಂದು ವಿಜಯಕುಮಾರ್ ಹೇಳಿದರು.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...
-
Karnataka Rain: ಕರ್ನಾಟಕದಲ್ಲಿ ಮಳೆ ಕೊರತೆ ಈ ಬಾರಿ ಈ ಭಾಗಗಳಲ್ಲಿ ಸಂಕಷ್ಟ, ಕುಡಿಯುವ ನೀರಿಗೂ ಹಾಹಾಕಾರ -
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
Bengaluru: ಪಬ್ನಲ್ಲಿ 150 ರೂ. ಕೊಟ್ಟು ಆರ್ಡರ್ ಮಾಡಿದ್ರೆ ಬಂದಿದ್ದು ಬರೀ ಹಪ್ಪಳ-ಸಂಡಿಗೆ: ದಂಗಾದ ಗ್ರಾಹಕ -
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ












Click it and Unblock the Notifications