ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿದ್ಯುತ್‌ ಕಣ್ಣಾಮುಚ್ಚಾಲೆ;ಕೊಪ್ಪಳ ಶಾಸಕರ ಅಮರಣಾಂತ ಉಪವಾಸ

By Staff
|
Google Oneindia Kannada News

ಕೊಪ್ಪಳ : ಕೃಷಿ ಪಂಪ್‌ಸೆಟ್‌ಗಳಿಗೆ ನಿರಂತರ 8 ತಾಸುಗಳ ಕಾಲ ವಿದ್ಯುತ್‌ ಪೂರೈಸುವಂತೆ ಒತ್ತಾಯಿಸಿ ಕೊಪ್ಪಳದ ಶಾಸಕ ಸಂಗಣ್ಣ ಕರಡಿ (ಸಂಯುಕ್ತ ಜನತಾದಳ) ಸೋಮವಾರ ಆಮರಣಾಂತ ಉಪವಾಸ ಸತ್ಯಾಗ್ರಹ ಪ್ರಾರಂಭಿಸಿದರು.

ಸಾವಿರಾರು ಮಂದಿ ರೈತರೊಂದಿಗೆ ವಿದ್ಯುತ್‌ ಪ್ರಸರಣ ನಿಗಮ ಕಚೇರಿಯ ಎದುರು ಉಪವಾಸ ಕೂತಿರುವ ಶಾಸಕ ಸಂಗಣ್ಣ ಕರಡಿ ಅವರು, ಬೇಡಿಕೆ ಈಡೇರುವವರೆಗೂ ಸ್ಥಳ ಬಿಟ್ಟು ಕದಲುವುದಿಲ್ಲವೆಂದು ಘೋಷಿಸಿದ್ದಾರೆ. ಶಾಸಕರ ಉಪವಾಸ ಧರಣಿಯಿಂದಾಗಿ ಕೊಪ್ಪಳ ಪಟ್ಟಣದಲ್ಲಿ ಬಿಗು ವಾತಾವರಣ ಉಂಟಾಗಿದೆ.

ಉಪವಾಸ ಕೂರುವ ಮುನ್ನ ಜಿಲ್ಲಾಧಿಕಾರಿ, ಇಂಧನ ಇಲಾಖೆಯ ಕಾರ್ಯದರ್ಶಿ ಹಾಗೂ ವಿದ್ಯುತ್‌ ನಿಗಮದ ಅಧ್ಯಕ್ಷರೊಂದಿಗೆ ಶಾಸಕರು ಚರ್ಚೆ ನಡೆಸಿದರು. ಈ ಚರ್ಚೆ ವಿಫಲಗೊಂಡ ಹಿನ್ನೆಲೆಯಲ್ಲಿ ಶಾಸಕರು ಅಂತಿಮವಾಗಿ
ಆಮರಣ ಉಪವಾಸ ಸತ್ಯಾಗ್ರಹ ಅಸ್ತ್ರ ಪ್ರಯೋಗಿಸಿದ್ದಾರೆ.

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X