ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಕೃಷಿ ಆದಾಯ ತೆರಿಗೆಯಿಂದ ಕಾಫಿ ಬೆಳೆಗಾರರು ವರ್ಷ ಕಾಲ ಮುಕ್ತ
ಹಾಸನ : ಕಾಫಿ ಬೆಳೆಗಾರರನ್ನು ಕರ್ನಾಟಕ ಸರ್ಕಾರ ಕೃಷಿ ಆದಾಯ ತೆರಿಗೆಯಿಂದ ಮುಕ್ತಗೊಳಿಸಿದೆ ಎಂದು ಅಖಿಲ ಭಾರತ ಕಾಫಿ ಉದ್ದಿಮೆ ಕ್ರಿಯಾ ಸಮಿತಿ ವಕ್ತಾರ ಜಿ.ಸಿ.ಚಂದ್ರಮೋಹನ್ ತಿಳಿಸಿದ್ದಾರೆ.
ಪ್ರಸಕ್ತ ಋತುವಿನಿಂದ ಮುಂದಿನ ವರ್ಷದವರೆಗೆ ಕಾಫಿ ಬೆಳೆಗಾರರು ತೆರಿಗೆ ಕಟ್ಟುವಂತಿಲ್ಲ. ಹತ್ತು ತಿಂಗಳಿಂದ ನಾವು ಪಟ್ಟ ಪ್ರಯತ್ನಕ್ಕೆ ಕೊನೆಗೂ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಮಣಿದು ಈ ನಿರ್ಣಯ ಕೈಗೊಂಡಿದ್ದಾರೆ ಎಂದು ಚಂದ್ರಮೋಹನ್ ಮಾಧ್ಯಮಗಳಿಗೆ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ಹೇಳಿದ್ದಾರೆ.
ಚಂದ್ರಮೋಹನ್ ನೇತೃತ್ವದ ನಿಯೋಗ ಮುಖ್ಯಮಂತ್ರಿ ಕೃಷ್ಣ ಅವರಿಗೆ ಕಾಫಿ ಬೆಳೆಗಾರರ ತೊಂದರೆ ಕುರಿತು ಮನವಿ ಸಲ್ಲಿಸಿದ್ದರು. ಕಾಫಿ ಬೆಲೆ ಕುಸಿಯುತ್ತಿದ್ದು, ಬೆಳಾಗಾರರು ಸಾಕಷ್ಟು ನಷ್ಟ ಅನುಭವಿಸುತ್ತಿದ್ದಾರೆ. ಈ ಕಾರಣ ತೆರಿಗೆಯನ್ನು ರದ್ದು ಪಡಿಸುವಂತೆ ಕೋರಲಾಗಿತ್ತು. ಇದಕ್ಕೆ ತಕ್ಷಣ ಪ್ರತಿಕ್ರಿಯೆ ದೊರೆಯದಿದ್ದಾಗ ನಿಯೋಗ ಪದೇ ಪದೇ ಒತ್ತಡವನ್ನೂ ಹೇರಿತ್ತು.
(ಇನ್ಫೋ ವಾರ್ತೆ)
Story first published: Tuesday, November 6, 2001, 5:30 [IST]