ಬತ್ತಳಿಕೆಯಲ್ಲೊಂದು ತಿರುತಿರುಗುವ ಹೊಸ ಗೂಗ್ಲಿ ಇದೆ- ಕುಂಬ್ಳೆ
*ಆಶಿಶ್ ಶುಕ್ಲಾ
ಡರ್ಬನ್ : ‘ಬತ್ತಳಿಕೆಯಲ್ಲೊಂದು ತಿರುಗು ಚೆಂಡಿದೆ. ವರ್ಷಗಳ ಕನಸದು. ಭುಜ ಸರಿಯಿರದಿದ್ದಾಗ ನಾನು ಸಿದ್ಧಪಡಿಸಿದ ಚೆಂಡು. ಮುಂದಿನ ವಾರ ಶುರುವಾಗುವ ಟೆಸ್ಟ್ನಲ್ಲಿ ಇದರ ಪ್ರಯೋಗ ಖಂಡಿತ’. ಕುಂಬ್ಳೆ ನಗುನಗುತ್ತಾ ಹೇಳಿದರು. ಅವರ ಮನದಲ್ಲಿ ಗಾಯದ ಕಲೆ ಮಾಯ. ಭುಜದ ನೋವೀಗ ಸಂಪೂರ್ಣ ಉಪಶಮನ. ಟೆಸ್ಟ್ ಪಂದ್ಯದ ಒಂದು ಇನ್ನಿಂಗ್ಸ್ನಲ್ಲಿ ಹತ್ತೂ ವಿಕೆಟ್ ಕಿತ್ತಾಗ ಇದ್ದ ಅದೇ ಛಾತಿಯ ಇಣುಕು. ಮುಂದುವರೆಯಿತು ಅವರ ಮಾತು...
...ಅದು ವಿಶೇಷ ಗೂಗ್ಲಿ. ಆಶ್ಚರ್ಯಕರ ರೀತಿಯಲ್ಲಿ ಪುಟಿದೇಳುತ್ತದೆ; ತಿರುತಿರುಗುತ್ತ. ಅದನ್ನು ಎಸೆವ ಅವಕಾಶಕ್ಕಾಗಿ ತಹತಹಿಸುತ್ತಿದ್ದೇನೆ. ನನ್ನ ಬಗ್ಗೆ ಒಂದು ಆರೋಪ ಇದೆ, ಚೆಂಡನ್ನು ಹೆಚ್ಚು ತಿರುಗಿಸುವುದಿಲ್ಲ ಎಂಬುದು. ವಾಸ್ತವದಲ್ಲಿ ನನ್ನ ಶೈಲಿಯೇ ಅದು. ಗಾಳಿ ವಿರುದ್ಧ ಚೆಂಡೆಸೆಯುವುದು ಅನೇಕ ಬೌಲರ್ಗಳಿಗೆ ಇಷ್ಟವಿಲ್ಲ. ನನಗೋ ಅದೇ ಇಷ್ಟ. ವಿಕೆಟ್ ತೆಗೆಯುವ ಚಕಮಕಿಗಳ ಹೊಸೆದು, ಎಸೆಯುವುದೇ ನನ್ನ ಉದ್ದೇಶ. ಅದರಲ್ಲಿ ನಾನು ಸಾಕಷ್ಟು ಯಶಸ್ವಿಯಾಗಿದ್ದೇನೆ ಕೂಡ.
ನಾನೀಗ ಪೂರ್ಣಪ್ರಮಾಣದಲ್ಲಿ ಗುಣಮುಖ. ಬಲ ಭುಜ ನನ್ನ ಮಾತನ್ನು ಕೇಳುತ್ತಿದೆ. ಭುಜದ ನೋವು ಕಾಣಿಸಿಕೊಂಡಾಗ ಹತಾಶೆಯಾಗಿತ್ತು ನಿಜ. ಆದರೆ ಅದೊಂದು ನೌಕರಿಯ ಸಹಜ ತೊಡರಿದ್ದಂತೆ. ಸರಿಪಡಿಸಿ ನಡೆಯಲೇಬೇಕಾಯಿತು. ಒಂದು ರೀತಿಯಲ್ಲಿ ಹಾಗಾದದ್ದು ಹರ್ಭಜನ್ ಬೆಳಕಿಗೆ ಬರಲು ಸಾಧ್ಯವಾಯಿತು. ಭಾರತ ತಂಡದಲ್ಲೇ ನನಗೆ ಪ್ರತಿಸ್ಪರ್ಧಿಯಾಬ್ಬ ಹುಟ್ಟಿಬಿಟ್ಟಿದ್ದಾನೆ, ಹಾಗೆ ಹೀಗೆ ಎಂದೆಲ್ಲಾ ಕೆಲವರು ಬರೆದಿದ್ದಾರೆ. ಹೊಸಬರಿಗೆ ಬೆನ್ನು ತಟ್ಟಬೇಕು. ನನಗೆ ತಿಳಿದದ್ದನ್ನು ಒಬ್ಬ ಬೌಲರ್ಗೆ ಹೇಳಿಕೊಡುತ್ತೇನೆ ಅಂದುಕೊಳ್ಳಿ. ಅವನು ಹೆಚ್ಚು ವಿಕೆಟ್ ಕಿತ್ತರೆ, ನನಗೆ ತಂಡದಿಂದ ಕೊಕ್ ಎಂಬ ಅಭಿಪ್ರಾಯ ಸರಿಯಾದುದಲ್ಲ. ಎಲ್ಲಿಯವರೆಗೆ ನನ್ನಲ್ಲಿ ಆಟ ಇರುತ್ತದೋ ನಾನೂ ಇರುತ್ತೇನೆ. ಅನುಭವಗಳನ್ನು ಹಂಚಿಕೊಂಡು ಬೆಳೆಯಬೇಕು, ಬೆಳೆಸಬೇಕು ಎಂಬುದು ನನ್ನ ಸಿದ್ಧಾಂತ.
ಕೊನೆಯದಾಗಿ ನೀವು ಮರೆಯಲಾಗದ ಘಳಿಗೆ ಯಾವುದು ಅಂತ ಕುಂಬ್ಳೆ ಅವರನ್ನು ಕೇಳಿದಾಗ, ಹಿಂದೂಮುಂದು ನೋಡದೆ ಹೇಳಿಬಿಟ್ಟರು- ‘ಪಾಕಿಸ್ತಾನದ ಹತ್ತೂ ವಿಕೆಟ್ ಬುಟ್ಟಿಗೆ ಬಿದ್ದ ಅಪರೂಪದ ದಿನ. ಆ ದಾಖಲೆಯನ್ನು ಬೇರೆಯವರು ಸರಿಗಟ್ಟಬಹುದು, ನನ್ನ ಹೆಸರು ಅಳಿಸೋದೇ ಇಲ್ಲ. ಜನ ಆ ಮೂಲಕ ಸದಾ ನನ್ನನ್ನು ನೆನಪಿಸಿಕೊಳ್ಳುವರೆಂಬ ಹೆಮ್ಮೆ’.
(ಪಿಟಿಐ)
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications